Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಶಿಗ್ಗಾವಿ ಪಟ್ಟಣದಲ್ಲಿ ಮಾತೃಭಾಷಾ ದಿನಾಚರಣಾ ಕಾರ್ಯಕ್ರಮ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಶಿಗ್ಗಾವಿ ಪಟ್ಟಣದಲ್ಲಿ ಮಾತೃಭಾಷಾ ದಿನಾಚರಣಾ ಕಾರ್ಯಕ್ರಮ

Districts

ಶಿಗ್ಗಾವಿ ಪಟ್ಟಣದಲ್ಲಿ ಮಾತೃಭಾಷಾ ದಿನಾಚರಣಾ ಕಾರ್ಯಕ್ರಮ

Public TV
Last updated: February 21, 2017 8:58 pm
Public TV
Share
2 Min Read
hvr 2
SHARE

ಹಾವೇರಿ: ಜಿಲ್ಲೆಯ ಶಿಗ್ಗಾವಿ ಪಟ್ಟಣದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆಡಳಿತ ಭವನದ ಸಭಾಂಗಣದಲ್ಲಿ ಇಂದು ಮಾತೃಭಾಷಾ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಕನ್ನಡ ಭಾಷಿಕರು ನಿಪುಣರು, ಪರಿಣಿತರು, ಚತುರರು ಮತ್ತು ಕಾವ್ಯಪ್ರಯೋಗ ಶಕ್ತಿಉಳ್ಳವರು ಆಗಿದ್ದರೆಂದು ಧಾರವಾಡದ ಜೆ.ಎಸ್.ಎಸ್. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿನದತ್ತ ಹಡಗಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಭಾಷೆ ವಿಗ್ರಹವಾದರೆ, ಲಿಪಿ ಉತ್ಸವ ಮೂರ್ತಿಯಾಗಿದೆ. ಹೊಳೆಯು ಪ್ರಕಾಶಿಸುವ ಅಭಿಪ್ರಾಯ ಮತ್ತು ಮನೋಭಾವನೆಗಳನ್ನು ವ್ಯಕ್ತಪಡಿಸುವ ಮಹತ್ತರವಾದ ಸಾಧನ ಭಾಷೆಯಾಗಿದೆ. ಭಾಷೆಯೆಂಬುದು ಸಂಸ್ಕೃತದ ಪದವಾಗಿದ್ದು, ಕನ್ನಡದಲ್ಲಿ ಭಾಷೆ, ನುಡಿ, ಮಾತು ಎಂಬೆಲ್ಲ ಪದಗಳಿಂದ ಗುರುತಿಸಲಾಗಿದೆ. ಬಾಯಿಮಾತಿನಲ್ಲಿ ಇದ್ದ ಕನ್ನಡದ ಮೊದಲ ಲಿಪಿಯ ರೂಪ ಹಲ್ಮಿಡಿ ಶಾಸನವಾಗಿದೆ. ರಾಷ್ಟ್ರಭಾಷೆ, ರಾಜಭಾಷೆ ಮತ್ತು ದೇವಭಾಷೆಗಳ ಅಬ್ಬರದಲ್ಲಿ ಮತ್ತು ಪರಭಾಷಾ ವ್ಯಾಮೋಹದಿಂದ ಕನ್ನಡ ಸೊರಗುತ್ತಿದೆ ಎಂದು ಜಿನದತ್ತ ಅವರು ಆತಂಕ ವ್ಯಕ್ತಪಡಿಸಿದರು.

hvr 1

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಯವರಾದ (ಪ್ರ) ಪ್ರೊ. ಡಿ.ಬಿ.ನಾಯಕ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಮಾತೃ ಭಾಷೆಯನ್ನು ನೆನಪಿಸುವ ದಿನಾಚರಣೆ ಆಚರಿಸುವ ಸ್ಥಿತಿ ಬಂದಿದೆ ಎಂದರೆ ಭಾರತದ ಭಾಷೆಗಳ ಸ್ಥಿತಿಯ ಅವಲೋಕನ ಮಾಡುವಂತದ್ದು ಅವಶ್ಯಕವಾಗಿದೆ. ವಿಶ್ವವೇ ಒಂದು ಪುಟ್ಟ ಗ್ರಾಮವೆಂಬ ಪರಿಕಲ್ಪನೆ ಬಂದ ನಂತರ ಜಾಗತೀಕರಣ ಒಡ್ಡುತ್ತಿರುವ ಸವಾಲುಗಳನ್ನು ಎದುರಿಸುವ ಭರಾಟೆಯಲ್ಲಿ ಭಾರತದ ಭಾಷೆಗಳು ನಲುಗುತ್ತಿವೆ ಎಂದು ವಿಷಾದಿಸಿದರು.

ಕರ್ನಾಟಕದಲ್ಲಿ ಆಡು ಭಾಷೆ, ಉಪ ಭಾಷೆ ಹಾಗೂ ನುಡಿ ಭಾಷೆ ಬಳಕೆಯನ್ನು ಕಾಣಬಹುದು. ಎಷ್ಟು ಭಾಷೆಗಳಿವೆಯೋ ಅಷ್ಟು ಸಂಸ್ಕøತಿಯನ್ನು ನಾವು ಕಾಣಬಹುದಾಗಿದೆ. ಮಾತೃ ಭಾಷೆಯೆಂದರೆ ತಾಯಿಯ ಭಾಷೆಯಾಗಿದ್ದು, ವ್ಯವಹಾರಿಕ ಭಾಷೆಯನ್ನು ಸಾಕು ತಾಯಿಯ ಸ್ಥಾನದಲ್ಲಿ ನೋಡಬಹುದಾಗಿದೆ. ಮಾತೃ ಭಾಷೆಯಲ್ಲಿ ನಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ ಮನ ಮುಟ್ಟುವಂತೆ ಸಂವಹನಿಸಬಹುದಾಗಿದೆ. ಭಾಷೆಯ ಬಗ್ಗೆ ಅಭಿಮಾನ ಹೊಂದಿರಬೇಕೇ ಹೊರತಾಗಿ ದುರಾಭಿಮಾನ ಸಲ್ಲದು ಎಂದು ಡಿ.ಬಿ.ನಾಯಕ್ ಕಿವಿಮಾತು ಹೇಳಿದರು.

hvr 3

ಮೌಲ್ಯಮಾಪನ ಕುಲಸಚಿವರಾದ ಪ್ರೊ. ಡಿ. ಮುರಹರಿ ನಾಯ್ಕ ಇವರು ಮಾತನಾಡಿ, ಭಾಷೆ ಇಲ್ಲದೇ ನಾಗರೀಕತೆ ಬೆಳವಣಿಗೆ ಅಸಾಧ್ಯ. ಮನುಷ್ಯನ ಬೇಕು ಬೇಡಗಳ ಈಡೇರಿಕೆಗೆ ಭಾಷೆ ಸಹಕಾರಿ ಮಾತೃ ಭಾಷೆಗೆ ಪ್ರಾಧ್ಯಾನ್ಯತೆ ದೊರೆಯಬೇಕು. ವ್ಯವಹಾರಿಕ ಭಾಷೆಗೆ ಅವಶ್ಯಕತೆಗೆ ತಕ್ಕ ಪ್ರಾಮುಖ್ಯತೆ ದೊರೆಯಲಿ. ಲಿಪಿ ಇಲ್ಲದ ಭಾಷೆಗಳ ಉಳಿವಿಗೆ ಸಾಕಷ್ಟು ಸವಾಲುಗಳು ಎದುರಾಗಿವೆ ಎಂದು ಹೇಳಿದರು.

ಮಾತೃಭಾಷಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರವಾಸೋದ್ಯಮ ವಿಭಾಗದ ವಿದ್ಯಾರ್ಥಿ ಶ್ರೀ ಮಾಳಗಿ ದೇವೇಂದ್ರಪ್ಪ ಅವರು ಪ್ರಥಮ ಸ್ಥಾನಗಳಿಸಿದ್ದು, ಎಂ.ಬಿ.ಎ. ವಿಭಾಗದ ಕು. ಶ್ರೀದೇವಿ ಹನಗೋಡಿಮಠ ದ್ವೀತಿಯ ಸ್ಥಾನ, ಜನಪದ ಮಾಧ್ಯಮ ಮತ್ತು ಸಂವಹನ ವಿಭಾಗದ ಶ್ರೀ ಈರಣ್ಣ ಬಿ.ಎಲ್. ತೃತೀಯ ಸ್ಥಾನ ಗಳಿಸಿದರು. ಆಶುಭಾಷಣ ಸ್ಪರ್ಧೆಯಲ್ಲಿ ಶ್ರೀ ಈರಣ್ಣ ಬಿ.ಎಲ್. ಪ್ರಥಮ ಸ್ಥಾನ, ಕು.ಶ್ರೀದೇವಿ ಹನಗೋಡಿ ಮಠ ದ್ವಿತೀಯ ಸ್ಥಾನ ಹಾಗೂ ಶ್ರೀ ಶಶಿಧರ್ ಮೂರನೇ ಸ್ಥಾನ ಪಡೆದಿದ್ದಾರೆ. ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಪ್ರೊ.ಜಿನದತ್ತ ಹಡಗಲಿ ಅವರನ್ನು ಸನ್ಮಾನಿಸಲಾಯಿತು.

 

TAGGED:haveriKarnataka Folklore UniversityMother Language DayPublic TVsiggaviಕರ್ನಾಟಕ ಜಾನಪದ ವಿಶ್ವವಿದ್ಯಾಲಯಪಬ್ಲಿಕ್ ಟಿವಿಮಾತೃ ಭಾಷಾ ದಿನಾಚರಣೆಶಿಗ್ಗಾವಿಹಾವೇರಿ
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

West Bengal Election Voting
Latest

ಪಶ್ಚಿಮ ಬಂಗಾಳದಲ್ಲಿ 89.93%, ತಮಿಳುನಾಡಿನಲ್ಲಿ 82.24% ಮತದಾನ

Public TV
By Public TV
2 minutes ago
tirupati father kills wife and mother dies by suicide with children
Crime

ಪತ್ನಿ, ತಾಯಿಯನ್ನು ಕೊಂದು ಮಕ್ಕಳೊಂದಿಗೆ ರೈಲಿಗೆ ತಲೆ ಕೊಟ್ಟ ವ್ಯಕ್ತಿ

Public TV
By Public TV
16 minutes ago
Wild elephant attacks three ETF staff in Hassan Beluru
Districts

ಮೂವರು ಇಟಿಎಫ್‌ ಸಿಬ್ಬಂದಿ ಮೇಲೆ ಕಾಡಾನೆ ದಾಳಿ – ಗಾರ್ಡ್‌ ಸ್ಥಿತಿ ಗಂಭೀರ

Public TV
By Public TV
1 hour ago
Donald Trump Angry
Latest

ಭಾರತ, ಚೀನಾ ನರಕದ ಕೂಪಗಳು| ಲ್ಯಾಪ್‌ಟಾಪ್ ಹೊಂದಿರುವ ದರೋಡೆಕೋರರು: ಟ್ರಂಪ್‌ ಕೆಂಡಾಮಂಡಲ

Public TV
By Public TV
1 hour ago
Arvind Kejriwal 4
Court

ಕೋರ್ಟ್‌ ವಿಚಾರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್‌ – ಅರವಿಂದ್ ಕೇಜ್ರಿವಾಲ್‌ಗೆ ನೋಟಿಸ್

Public TV
By Public TV
1 hour ago
PETROL
Latest

ಪೆಟ್ರೋಲ್, ಡೀಸೆಲ್ ದರ ಏರಿಕೆಯ ಚಿಂತನೆ ಇಲ್ಲ – ವದಂತಿಗಳಿಗೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ

Public TV
By Public TV
2 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?