Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅತ್ಯದ್ಭುತ ವ್ಯೂವ್ ಪಾಯಿಂಟ್ ‘ಎತ್ತಿನ ಭುಜ’ಕ್ಕೆ ಭೇಟಿ ಕೊಟ್ಟು ಪ್ರಕೃತಿಯ ಸೌಂದರ್ಯ ಸವಿಯಿರಿ
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Karnataka

ಅತ್ಯದ್ಭುತ ವ್ಯೂವ್ ಪಾಯಿಂಟ್ ‘ಎತ್ತಿನ ಭುಜ’ಕ್ಕೆ ಭೇಟಿ ಕೊಟ್ಟು ಪ್ರಕೃತಿಯ ಸೌಂದರ್ಯ ಸವಿಯಿರಿ

Public TV
Last updated: October 23, 2023 11:59 am
Public TV
Share
4 Min Read
ETTINA BHUJA
SHARE

ನೀವೇನಾದರೂ ಟ್ರೆಕ್ಕಿಂಗ್ ಮಾಡಲು ಮಲೆನಾಡಿನ ಕಡೆ ಹೋಗುವ ನಿರ್ಧಾರ ಮಾಡಿದ್ದರೆ ಎತ್ತಿನ ಭುಜ (Trekking Place Ettina Bhuja) ಉತ್ತಮ ಸ್ಥಳ. ಈ ಜಾಗಕ್ಕೆ ಭೇಟಿ ಕೊಟ್ಟರೆ ಬದುಕಿನ ಜಂಜಾಟ ಮರೆತು ನಿರಾಳವಾಗುವುದರಲ್ಲಿ ಎರಡು ಮಾತಿಲ್ಲ.

ಹೌದು. ಸುತ್ತಲೂ ಹಸಿರಿನಿಂದ ಕೂಡಿರುವ ಸ್ಥಳ ಇದಾಗಿದ್ದು, ಇದರ ನಡುವೆ ನಡೆದು ಸಾಗುವ ಮಜಾನೇ ಬೇರೆ. ಮುತ್ತಿಕ್ಕಲು ಮಂಜಿನ ಹನಿ, ತಣ್ಣನೆ ಬೀಸುವ ಗಾಳಿಯ ನಡುವೆ ಟ್ರಕ್ಕಿಂಗ್ ಮಾಡುವ ಈ ಖುಷಿ ಎಲ್ಲಿಯೂ ಸಿಗದು. ಇಂತಹ ಅದ್ಭುತ ಹಸಿರ ಗಿರಿಯ ಸಾಲು ಕಂಡು ಬರೋದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ. ಮೂಡಿಗೆರೆಯಿಂದ ಸುಮಾರು 25 ಕಿ.ಮೀ. ದೂರದಲ್ಲಿ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಎತ್ತಿನ ಭುಜ ಬೆಟ್ಟದ ತುದಿಯು ಚಾರಣಿಗರ ಪ್ರಮುಖ ಆಕರ್ಷಣೆಯ ತಾಣಗಳಲ್ಲೊಂದು. ಇದು 4265 ಅಡಿ ಎತ್ತರವನ್ನು ಹೊಂದಿದೆ.

ಹಸಿರು ಬೆಟ್ಟಗಳ ನಡುವಿನ ದಟ್ಟವಾದ ಹುಲ್ಲುಗಾವಲಿನಲ್ಲಿ ಎತ್ತಿನ ಭುಜ ಬೆಟ್ಟವಿದೆ. ಜನಪ್ರಿಯ ಮತ್ತು ಸುಲಭವಾದ ಟ್ರೆಕ್ಕಿಂಗ್ ಸ್ಥಳ ಇದಾಗಿದೆ. ಏಕೆಂದರೆ ಕೊನೆಯ ಎರಡು ಕಿಲೋಮೀಟರ್‍ಗಳನ್ನು ಟ್ರೆಕ್ಕಿಂಗ್ ಮೂಲಕ ಶಿಖರದ ಸಮೀಪವಿರುವ ಬಿಂದುವನ್ನು ತಲುಪಬಹುದು. ಈ ಬೆಟ್ಟದ ಮೇಲೆ ನಿಂತಲ್ಲಿ ಸುತ್ತಮುತ್ತಲಿನ ಹಚ್ಚ ಹಸಿರಿನಿಂದ ಕೂಡಿರುವ ಸಾಲು-ಸಾಲು ಬೆಟ್ಟಗಳ ರಮಣೀಯ ದೃಶ್ಯ ಕಾಣಬಹುದಾಗಿದೆ. ಬೆಟ್ಟದ ತಪ್ಪಲಿನಿಂದ ಸುಮಾರು ನಾಲ್ಕು ಕಿ.ಮೀ. ದೂರ ಕ್ರಮಿಸಿದರೆ ನಾಣ್ಯ ಭೈರವೇಶ್ವರ ದೇವಾಲಯವಿದೆ. ಈ ದೇಗುಲದ ಬಳಿ ನಾಣ್ಯಗಳನ್ನು ಟಂಕಿಸುವ ಟಂಕಶಾಲೆಯೂ ಇತ್ತು. ಹಾಗಾಗಿ ಇದಕ್ಕೆ ಟಂಕ ಭೈರವೇಶ್ವರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯಿದೆ. ಅಲ್ಲದೆ ಮೇಲೆ ಎಲ್ಲಿ ನೋಡಿದರೂ ಮಂಜು ಮತ್ತು ಬೀಸುವ ಗಾಳಿಯ ನಡುವೆ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಬಹುದು. ಇದನ್ನೂ ಓದಿ:  ಬ್ಯೂಟಿಫುಲ್ ಟ್ರೆಕ್ಕಿಂಗ್ ಸ್ಪಾಟ್ ಬಂಡಾಜೆ ಫಾಲ್ಸ್!

ETTINA BHUJA 2

ಹೆಸರು ಬಂದಿದ್ದು ಹೇಗೆ..?: ನೋಡಲು ಎತ್ತಿನ ಭುಜದ ಅಕಾರದಲ್ಲಿ ಇರುವುದರಿಂದ ಈ ಬೆಟ್ಟವನ್ನು ಎತ್ತಿನ ಭುಜ ಅಂತಾ ಕರೆಯುತ್ತಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಸದ್ಯ ಈ ಬೆಟ್ಟ ಟ್ರೆಕ್ಕಿಂಗ್ ಮಾಡುವವರಿಗೆ ಹಾಟ್ ಸ್ಪಾಟ್ ಆಗಿದೆ. ಹೀಗಾಗಿ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಸುಮಾರು 7 ಕಿಲೋ ಮೀಟರ್ ನಡೆಯುವ ಮೂಲಕ ವ್ಯೂವ್ ಪಾಯಿಂಟ್ ತಲುಪಲು ಸಾಧ್ಯವಾಗುತ್ತೆ. ಅದ್ರಲ್ಲೂ ಕೊನೆಯ 2 ಕಿಲೋ ಮೀಟರ್ ಅನ್ನೋದು ಮಾತ್ರ ಮೈ ಝುಮ್ ಅನ್ಸುತ್ತೆ. ಆದರೆ ಕಡಿದಾದ ಬೆಟ್ಟ ಹತ್ತಿದ ಮೇಲೆ ಅಲ್ಲಿರುವ ನಯನಮನೋಹರ ದೃಶ್ಯ ನೋಡಿದರೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗುತ್ತದೆ.

ಹೋಗುವುದು ಹೇಗೆ..?: ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಸುಮಾರು 65 ಕಿಲೋ ಮೀಟರ್ ದೂರದಲ್ಲಿ ಎತ್ತಿನ ಭುಜವಿದೆ. ಮೂಡಿಗೆರೆಯಿಂದ ಇಲ್ಲಿಗೆ ಇರುವ ದೂರ ಕೇವಲ 25 ಕಿಲೋ ಮೀಟರ್ ದೂರವಷ್ಟೇ. ಬೆಂಗಳೂರಿಂದ ಬರುವವರು ಬೆಂಗಳೂರು – ಮೂಡಿಗೆರೆ ಹೈವೇ ಮುಖಾಂತರವೇ ಬರಬಹುದಾಗಿದೆ. ಇದನ್ನೂ ಓದಿ: ಚಾರಣ ಸ್ನೇಹಿ ಬೆಟ್ಟ ಕೊಡಚಾದ್ರಿಯ ಪ್ರಮುಖ ಆಕರ್ಷಣೀಯ ಸ್ಥಳಗಳು

ettina bhuja 2 1

ಬೆಂಗಳೂರಿನಿಂದ ಧರ್ಮಸ್ಥಳ ದೇವಸ್ಥಾನಕ್ಕೆ ನಿಮ್ಮನ್ನು ಕರೆದೊಯ್ಯುವ ಬಸ್ಸುಗಳಿವೆ. ಮತ್ತು ಇಲ್ಲಿಂದ ಶಿಶಿಲ ಅಥವಾ ಬೈರಾಪುರಕ್ಕೆ ಹೋಗಬೇಕು. ಶಿಶಿಲ ಧರ್ಮಸ್ಥಳದಿಂದ 32 ಕಿಮೀ ದೂರದಲ್ಲಿದೆ. ಕೊಕ್ಕಡ ಗ್ರಾಮದಲ್ಲಿ ನಿಮ್ಮನ್ನು ಇಳಿಸುವ ಸ್ಥಳೀಯ ಬಸ್ ಹಿಡಿಯಬಹುದು ಮತ್ತು ಅಲ್ಲಿಂದ ಶಿಶಿಲವನ್ನು ತಲುಪಲು ಜೀಪ್ ಸವಾರಿ ಮಾಡಬಹುದು. ಮೂಡಿಗೆರೆ ಧರ್ಮಸ್ಥಳದಿಂದ 55 ಕಿಮೀ ದೂರದಲ್ಲಿದೆ. ಮೂಡಿಗೆರೆಯಲ್ಲಿ ಸ್ಥಳೀಯ ಬಸ್ ಹಿಡಿಯಬಹುದು ಮತ್ತು ಅಲ್ಲಿಂದ ಜೀಪ್ ಸವಾರಿ ಅಥವಾ ಇನ್ನೊಂದು ಬಸ್ಸಿನಲ್ಲಿ ಬೈರಾಪುರವನ್ನು ತಲುಪಬಹುದು.

ಶಿಶಿಲಾ ಗ್ರಾಮದಿಂದ ಹೋಗುವುದಾದರೆ 13 ಕಿಮೀ ಚಾರಣ ಮಾಡಬೇಕಾಗುತ್ತದೆ. ಈ ಚಾರಣ ಪೂರ್ಣಗೊಳ್ಳಲು ಸುಮಾರು 6 ಗಂಟೆಗಳೇ ಬೇಕಾಗುತ್ತದೆ. ಪ್ರಾಚೀನ ದುರ್ಗಾ ದೇವಸ್ಥಾನದ ಬಳಿಯಿಂದ ಚಾರಣ ಪ್ರಾರಂಭವಾಗುತ್ತೆ. ನೀವು ದಟ್ಟವಾದ ಕಾಡಿನೊಳಗಿನ ಈ ಟ್ರೆಕ್ಕಿಂಗ್ ಹಾದಿಯು ತೊರೆಗಳು, ಎತ್ತರದ ಹುಲ್ಲುಗಾವಲು ಮತ್ತು ಕಡಿದಾದ ಕಣಿವೆಯ ಮೂಲಕ ಮೇಲಕ್ಕೆ ತಲುಪುತ್ತದೆ. ಇನ್ನು ಬೈರಾಪುರ ಗ್ರಾಮದಿಂದ ಹೋಗುವುದಾದರೆ ಕೇವಲ 5 ಕಿಮೀ ಚಾರಣ ಮಾಡದಿರೆ ಶಿಖರ ತಲುಪಬಹುದು. ಶಿಖರವನ್ನು ತಲುಪಲು ಸುಮಾರು 2 ಗಂಟೆಗಳು ತೆಗೆದುಕೊಳ್ಳುತ್ತದೆ. ಚಾಣ ಮಾಡುವಾಗ ಅತೀ ಹೆಚ್ಚು ಸುಸ್ತು ಆಗುವವರಿಗೆ ಈ ದಾರಿಯೇ ಒಳ್ಳೆಯದು.

ETTINA BHUJA 3

ಸೂರ್ಯಾಸ್ತ ಮತ್ತು ಸೂರ್ಯೋದಯವನ್ನು ಅದ್ಭುತವಾಗಿ ಕಣ್ತುಂಬಿಕೊಳ್ಳಬಹುದು. ಆದ್ದರಿಂದ ನೀವು ಸಂಜೆಯ ವೇಳೆಗೆ ಶಿಖರವನ್ನು ತಲುಪುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಮತ್ತು ಮಂಜು ತುಂಬಿದ ಸೂರ್ಯೋದಯವನ್ನು ವೀಕ್ಷಿಸಲು ಇಲ್ಲಿ ಕ್ಯಾಂಪ್ ಮಾಡಿ. ಅಲ್ಲದೆ ಹಚ್ಚ ಹಸಿರಿನ ಕಣಿವೆ, ಸಣ್ಣ ತೊರೆಗಳು, ಘಾಟ್‍ಗಳು ಮತ್ತು ಮೋಡಗಳ ಸಂಪೂರ್ಣ ನೋಟವನ್ನು ನೀವು ತಪ್ಪಿಸಿಕೊಳ್ಳಬಾರದು.

ರಾತ್ರಿಯಿಡೀ ಬೆಟ್ಟದ ಮೇಲೆ ಕ್ಯಾಂಪ್ ಮಾಡಬಹುದು ಮತ್ತು ಹೋಮ್‍ಸ್ಟೇಗಳು ನಿಮಗೆ ಸಹಾಯ ಮಾಡುತ್ತವೆ. ಶಿಖರದ ಕೆಳಗೆ ಕೇವಲ 50 ಮೀ ಕೆಳಗೆ ಸಮತಟ್ಟಾದ ಭೂಮಿ ಇದೆ, ಅಲ್ಲಿ ಟೆಂಟ್ ಹಾಕಬಹುದು. ಇದರ ಸಮೀಪವೇ ಸಣ್ಣ ಹೊಳೆ ಹಾದು ಹೋಗಿರುವುದರಿಂದ ನೀರಿನ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಅಡುಗೆ ಮಾಡಲು ಇಷ್ಟಪಡುತ್ತಿದ್ದರೆ ಅದಕ್ಕೆ ಬೇಕಾದ ವಸ್ತುಗಳನ್ನು ಒಯ್ಯಬಹುದು.

ಒಟ್ಟಿನಲ್ಲಿ ಈ ಬೆಟ್ಟಕ್ಕೆ ಬರುವಾಗ ಮಾರ್ಗದರ್ಶಕರ ಜೊತೆ ಬರುವುದು ಒಳ್ಳೆಯದು. ಯಾಕೆಂದರೆ ಕಾಡು ದಾರಿ ಇರುವುದರಿಂದ ದಾರಿ ತಪ್ಪಿದರೆ ಕಷ್ಟ. ಅಲ್ಲದೆ ಆಸುಪಾಸಿನಲ್ಲಿ ಕಾಡುಪ್ರಾಣಿಗಳು, ಆನೆಗಳು ಇರುತ್ತವೆ. ಹೀಗಾಗಿ ಜಾಗರೂಕರಾಗಿ ಚಾರಣ ಮಾಡಿ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article
Facebook Whatsapp Whatsapp Telegram
Previous Article Shobha Karandlaje Prathap Simha ಶೋಭಾ ಕರಂದ್ಲಾಜೆ ಹುಟ್ಟುಹಬ್ಬ – ಮಾವುತ, ಕಾವಾಡಿಗಳಿಗೆ ಉಪಹಾರಕೂಟ ಏರ್ಪಡಿಸಿ ಆಚರಣೆ
Next Article Dheekshith Shetty 3 ದೀಕ್ಷಿತ್ ಶೆಟ್ಟಿಗೆ ‘ಗರ್ಲ್ ಫ್ರೆಂಡ್’ ಆಗ್ತಾರಾ ರಶ್ಮಿಕಾ ಮಂದಣ್ಣ?

Latest Cinema News

Multiplex Theatre
ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೂಪ ದರ ನಿಗದಿ ವಿಚಾರ – ಮಧ್ಯಂತರ ಆದೇಶ ಕಾಯ್ದಿರಿಸಿದ ಹೈಕೋರ್ಟ್
Bengaluru City Cinema Karnataka Latest Top Stories
Vishnuvardhan 1
ವಿಷ್ಣುವರ್ಧನ್ ಹುಟ್ಟುಹಬ್ಬದಂದು ಅಭಿಮಾನ್ ಸ್ಟುಡಿಯೋದಲ್ಲಿ ಸಂಭ್ರಮಾಚರಣೆಗೆ ಹೈಕೋರ್ಟ್ ಬ್ರೇಕ್
Cinema Court Latest Sandalwood South cinema Top Stories
Betting App case
ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣ – ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸೇರಿ ಮೂವರಿಗೆ ಇಡಿ ಸಮನ್ಸ್
Cinema Cricket Latest National Sports Top Stories
kothalavadi movie actor mahesh guru
ಯಶ್ ತಾಯಿ ಪುಷ್ಪ ಅವರಿಗೂ ಈ ವೀಡಿಯೋ ತಲುಪಬೇಕು: ಪೇಮೆಂಟ್ ಆಗಿಲ್ಲ ಅಂತ ಕೊತ್ತಲವಾಡಿ ಸಿನಿಮಾ ಕಲಾವಿದ ಆರೋಪ
Cinema Latest Sandalwood Top Stories
katrina kaif and vicky kaushal 1
ಮೊದಲ ಮಗುವಿನ ನಿರೀಕ್ಷೆಯಲ್ಲಿ ಕತ್ರಿನಾ ಕೈಫ್‌, ವಿಕ್ಕಿ ಕೌಶಲ್‌
Bollywood Cinema Latest Top Stories

You Might Also Like

Robbery of Rs 8 crore cash 50 kg gold jewellery at gunpoint to SBI staff chadchana Vijayapur
Districts

ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

4 hours ago
Manjunath Bhandari DK Udupi Tourism
Bengaluru City

ದ.ಕ.-ಉಡುಪಿ ಜಿಲ್ಲೆಗಳ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರದಿಂದ ‘ಮಾಸ್ಟರ್ ಪ್ಲಾನ್’!

4 hours ago
Haveri Rudrappa Lamani
Districts

ಗ್ರಾಮೀಣ ಭಾಗದ ಆಸ್ಪತ್ರೆಯಲ್ಲಿ ವೈದ್ಯರ ಉತ್ತಮ ಸೇವೆ, ರೋಗಿಗಳ ಪ್ರಮಾಣ ಹೆಚ್ಚಳ: ರುದ್ರಪ್ಪ ಲಮಾಣಿ

5 hours ago
muda scam former commissioner dinesh kumar arrested by ed
Bengaluru City

ಮುಡಾ ಹಗರಣ – ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಇಡಿಯಿಂದ ಅರೆಸ್ಟ್‌

5 hours ago
Shahid Afridi 1
Cricket

ಪಾಕ್ ಜೊತೆ ಮಾತುಕತೆಗೆ ರಾಹುಲ್ ನಂಬಿಕೆ: ಆಫ್ರಿದಿ ಶ್ಲಾಘನೆ

6 hours ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?