Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Belgaum

ಶಾಸಕ ಮಹೇಶ್ ಕುಮಠಳ್ಳಿಗೆ ಟಿಕೆಟ್ ಟೆನ್ಶನ್- ವಲಸಿಗ ಶಾಸಕರಿಗೆ ಮೂಲ ಬಿಜೆಪಿಗರಿಂದ ಕಿರಿಕ್

Public TV
Last updated: April 1, 2023 11:26 am
Public TV
Share
3 Min Read
mahesh kumathalli
SHARE

ಚಿಕ್ಕೋಡಿ (ಬೆಳಗಾವಿ): ರಾಜ್ಯ ಬಿಜೆಪಿ ಸರ್ಕಾರ (BJP Government) ರಚನೆಗೆ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದ ವಲಸಿಗ ಶಾಸಕರ ಸ್ಥಿತಿ ಸಧ್ಯ ಅತಂತ್ರವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಚುನಾವಣೆ ಬರುವವರೆಗೂ ಸುಮ್ಮನಿದ್ದ ಮೂಲ ಬಿಜೆಪಿಗರು ಈಗ ಬಹಿರಂಗವಾಗಿಯೇ ವಲಸಿಗ ಶಾಸಕರಿಗೆ ಸವಾಲು ಹಾಕಲು ಆರಂಭಿಸಿದ್ದು, ಬಿಜೆಪಿ ಪಾಳಯದಲ್ಲಿ ಗೊಂದಲಕ್ಕೆ ಕಾರಣವಾಗಿದೆ.

Laxman Savadi 4

ಹೌದು. ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ರಾಜ್ಯ ರಾಜಕಾರಣ ಗರಿಗೆದರಿದ್ದು ಅದರಲ್ಲೂ ಬೆಳಗಾವಿ ರಾಜಕಾರಣ ಬಾರಿ ಸದ್ದು ಮಾಡುತ್ತಿದೆ. ಬಿಜೆಪಿಯಲ್ಲಿ ಎಲ್ಲವೂ ಸರಿ ಇದೆ ಎಂದು ಬಿಂಬಿಸುತ್ತಿರುವ ರಾಜ್ಯ ನಾಯಕರಿಗೆ ಮುಜುಗರವಾಗುವಂತೆ ಅಥಣಿ (Athani Constituency) ಬಿಜೆಪಿಯಲ್ಲಿ ಅಸಮಾಧಾನದ ಜ್ವಾಲಾಮುಖಿಯ ಸ್ಫೋಟಗೊಂಡಿದೆ. ಅಥಣಿ ವಿಧಾನಸಭಾ ಕ್ಷೇತ್ರ ಪ್ರಭಾವಿ ರಾಜಕಾರಣಿಯಾದ ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ್ ಸವದಿ (Laxman Savadi) ಅವರ ಸ್ವಕ್ಷೇತ್ರ ವಾಗಿದ್ದು ಅವರದೇ ಕ್ಷೇತ್ರದಲ್ಲಿ ಸದ್ಯ ಈಗ ಬಿಜೆಪಿಯಲ್ಲಿ ಆಂತರಿಕವಾಗಿ ಇಬ್ಬರ ನಾಯಕರಿಗೆ ಬಿ ಫಾರ್ಮ್ ವಿಚಾರವಾಗಿ ಅಸಮಾಧಾನ ಬಹಿರಂಗಗೊಂಡಿದೆ. ಹಾಲಿ ಶಾಸಕ ಮಹೇಶ್ ಕುಮಠಳ್ಳಿ (Mahesh Kumtalli) ಮತ್ತು ಮಾಜಿ ಶಾಸಕ ಲಕ್ಷ್ಮಣ್ ಸವದಿ ಅವರಿಗೆ ಟಿಕೆಟ್ ವಿಚಾರವಾಗಿ ಕಳೆದ ಐದು ವರ್ಷದ ಹಿಂದಿನಿಂದಲೂ ತಿಕ್ಕಾಟ ನಡೆಯುತ್ತಿದ್ದು ಚುನಾವಣೆ ಸಮೀಪಿಸುತ್ತಿದ್ದಂತೆ ಅಥಣಿ ಬಿಜೆಪಿಯಲ್ಲಿ ಆಂತರಿಕ ಕಲಹ ಜಗತ್ತು ಜಾಹೀರಾತಾಗಿದೆ. ಕಾರ್ಯಕ್ರಮ ಒಂದರಲ್ಲಿ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ (Chidananda Savadi) ಅಥಣಿ ಕ್ಷೇತ್ರದಿಂದ ಈ ಬಾರಿ ನಮ್ಮ ತಂದೆ ಸ್ಪರ್ಧೆ ಮಾಡುತ್ತಾರೆ. ಅಥಣಿ ಕ್ಷೇತ್ರವನ್ನು ಬಿಟ್ಟುಕೊಡುವ ಮಾತೇ ಇಲ್ಲ ಎಂದು ಹೈಕಮಾಂಡಿಗೆ ಸಂದೇಶ ಸಾರುವ ಮುಖಾಂತರ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ.

CHIDANANDA SAVADI 1

2019ರಲ್ಲಿ ರಾಜಕೀಯ ಬದಲಾವಣೆ ಸನ್ನಿವೇಶದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷದ ಜೊತೆ ಸೇರಿ ಶಾಸಕ ಮಹೇಶ್ ಕುಮಠಳ್ಳಿ ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಪಾತ್ರವನ್ನು ವಹಿಸಿದ್ದರು. ಈ ರಾಜಕೀಯ ಬದಲಾವಣೆಯಲ್ಲಿ ಲಕ್ಷ್ಮಣ ಸವದಿ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟು ಮಹೇಶ್ ಕುಮಠಳ್ಳಿ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಅಥಣಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಮಾಡಿದ್ದರು. ಎಲ್ಲೋ ಒಂದು ಕಡೆ ಅವತ್ತಿನಿಂದ ಇವತ್ತಿನವರೆಗೂ ಲಕ್ಷ್ಮಣ್ ಸವದಿ ಹಾಗೂ ಅವರ ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು, ಕಳೆದ ನಾಲ್ಕೂವರೆ ವರ್ಷದಿಂದ ಮೂಲ ಬಿಜೆಪಿ, ವಹಿಸಿಗರ ಬಿಜೆಪಿ ಎಂಬ ಕಾರ್ಯಕರ್ತರಲ್ಲಿ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕಚ್ಚಾಟವು ಕೂಡ ನಡೆಯುತ್ತಿತ್ತು. ಇದರ ನಡುವೆ ಲಕ್ಷ್ಮಣ್ ಸವದಿ ಹೆಚ್ಚಾಗಿ ಮಹೇಶ್ ಕುಮಠಳ್ಳಿ ಜೊತೆ ಕಾಣಿಸದೆ ಇರುವುದು ಅಥಣಿ ಬಿಜೆಪಿಯಲ್ಲಿ ತೆರೆಮರೆ ಹಿಂದೆ ಯಾವುದು ಸರಿ ಇಲ್ಲ ಎಂಬುವುದು ಸ್ಪಷ್ಟವಾಗಿ ದೊರಕುತ್ತಿತ್ತು. ಇದನ್ನೂ ಓದಿ: ಈ ಕ್ಷೇತ್ರ ಗೆದ್ದ ಪಕ್ಷಕ್ಕೇ ರಾಜ್ಯಾಧಿಕಾರ – ಅಚ್ಚರಿಯಾದರೂ ನೀವು ನಂಬಲೇಬೇಕು

RAMESH JARAKIHOLI

ಹಲವಾರು ಬಾರಿ ಅಥಣಿ ಬಿಜೆಪಿ ಅಸಮಾಧಾನ ಬಗ್ಗೆ ಮಾಧ್ಯಮಗಳು ಲಕ್ಷ್ಮಣ್ ಸವದಿ ಅವರನ್ನು ಪ್ರಶ್ನಿಸಿದಾಗ ನಾನು ಬಿಜೆಪಿಯ ಶಿಸ್ತಿನ ಸಿಪಾಯಿ, 2018ರ ಚುನಾವಣೆಯಲ್ಲಿ ಸೋತರು ನನ್ನನ್ನು ಡಿಸಿಎಂ ಎಂದು ಪಕ್ಷ ಎತ್ತಿ ಹಿಡಿದಿದೆ. ಪಕ್ಷದ ವರಿಷ್ಠರು ಹೇಗೆ ಹೇಳುತ್ತಾರೆ ಹಾಗೆ ನಾನು ಕೇಳುತ್ತೇನೆ ಅಥಣಿ ಟಿಕೆಟ್ ಆಕಾಂಕ್ಷಿ ಅಲ್ಲವೆಂದು ಲಕ್ಷ್ಮಣ್ ಸವದಿ ಸಮಜಾಯಿಸಿಕೊಡುತ್ತಿದ್ದರು. ಆದರೆ ಇವತ್ತು ಅವರ ಪುತ್ರ ಚಿದಾನಂದ್ ಸವದಿ ರಮೇಶ್ ಜಾರಕಿಹೊಳಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿ ತಮ ಆತ್ಮೀಯ ಮಹೇಶ್ ಕುಮಠಳ್ಳಿಗೆ ಗೋಕಾಕ್ ಮತಕ್ಷೇತ್ರವನ್ನು ಬಿಟ್ಟು ಕೊಡಲಿ. ನಾವು ಮಾತ್ರ ಅಥಣಿ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತೇವೆ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಸಮರ ಸಾರಿದ್ದಾರೆ.

BJP FLAG

ಮೊನ್ನೆ ಅಷ್ಟೇ ರಮೇಶ್ ಜಾರಕಿಹೊಳಿ ವಿಜಯಪುರದಲ್ಲಿ ಮಾಧ್ಯಮ ಜೊತೆ ಮಾತನಾಡುತ್ತಾ ಆಪ್ತಮಿತ್ರನಿಗೆ ಅಥಣಿ ಟಿಕೆಟ್ ಕೊಡಿಸುತ್ತೇನೆ. ಅವನಿಗೂ ಟಿಕೆಟ್ ಇಲ್ಲ ಅಂದ್ರೆ ನಾನು ಗೋಕಾಕ್‍ನಿಂದ ಸ್ಪರ್ಧೆ ಮಾಡೋದಿಲ್ಲ ಎಂದು ಬಿಜೆಪಿ ಹೈಕಮಾಂಡ್‌ಗೆ ಸಂದೇಶ ರವಾನಿಸುತ್ತಿದ್ದಂತೆ, ಸದ್ದಿಲ್ಲದೆ ಚುನಾವಣೆಗೆ ತಯಾರಿ ನಡೆಸುತ್ತಿದ್ದ ಸವದಿ ಕುಟುಂಬಕ್ಕೆ ಗೋಕಾಕ್ ಸಾಹುಕಾರ ಮಾತು ನುಂಗಲಾರದ ತುತ್ತಾಗಿದೆ. ಶತಾಯಗತಾಯವಾಗಿ ಅಥಣಿ ಕ್ಷೇತ್ರವನ್ನು ಮರಳಿ ಪಡೆಯುವ ಬೇಕೆಂಬ ಪಣತೊಟ್ಟಂತೆ ಕಾಣುತ್ತಿದ್ದು ಸದ್ಯ ಚಿದಾನಂದ ಸವದಿ ಬಿಜೆಪಿ ಹೈಕಮಾಂಡಿಗೆ ಇವತ್ತು ಸವಾಲೆಸಗಿದ್ದಾರೆ. ಇದು ಯಾವ ಹಂತಕ್ಕೆ ಹೋಗುತ್ತದೆಯೋ ಅಥವಾ ಲಕ್ಷ್ಮಣ ಸವದಿ ಮಗನನ್ನು ಕರೆದು ಬುದ್ಧಿವಾದ ಹೇಳುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ. ಒಟ್ಟಾರೆಯಾಗಿ ಅಥಣಿ ವಿಧಾನಸಭೆ ಕ್ಷೇತ್ರದ ಪ್ರತಿಕ್ಷಣವೂ ತಿರುಪಡೆದುಕೊಳ್ಳುತ್ತಿದ್ದು ಹೈಕಮಾಂಡ್ ಇಲ್ಲಿ ಯಾರಿಗೆ ಟಿಕೆಟ್ ಕೂಡುತ್ತಾರೆ, ಇಬ್ಬರ ನಾಯಕರಿಗೆ ಜನ ಯಾರಿಗೆ ಆಶೀರ್ವಾದ ಮಾಡುತ್ತಾರೆ ಎಂಬುವುದು ಕಾದುನೋಡಬೇಕಾಗಿದೆ.

TAGGED:belagavibjpchikkodicongressmahesh kumtalliಕಾಂಗ್ರೆಸ್ಚಿಕ್ಕೋಡಿಬಿಜೆಪಿಬೆಳಗಾವಿಮಹೇಶ್ ಕುಮಟಳ್ಳಿ
Share This Article
Facebook Whatsapp Whatsapp Telegram

Cinema News

Rajath Dharmasthala
ಯೂಟ್ಯೂಬರ್ಸ್ ಮೇಲೆ 50-60 ಜನ ಅಟ್ಯಾಕ್ ಮಾಡಿದ್ರು, ನನ್ನ ಬಳಿ ಸಾಕ್ಷಿ ಇದೆ: ರಜತ್
Cinema Dakshina Kannada Latest Main Post South cinema
Dhanush Mrunal Thakur
ಧನುಷ್-ಮೃಣಾಲ್ ವಯಸ್ಸಿನ ಅಂತರವೆಷ್ಟು ಗೊತ್ತಾ?
Cinema Latest Top Stories
Allu Arjun Sneha Reddy
ಶೂಟಿಂಗ್‌ಗಾಗಿ ಮುಂಬೈಗೆ ಹಾರಿದ ಐಕಾನ್ ಸ್ಟಾರ್
Cinema Latest Top Stories
chiranjeevi 6
ಟ್ರೋಲರ್ಸ್‌ ವಿರುದ್ಧ ರೊಚ್ಚಿಗೆದ್ದ ಚಿರಂಜೀವಿ
Cinema Latest South cinema
Santosh balaraj 2
ಕ್ರಿಶ್ಚಿಯನ್ ಸಂಪ್ರದಾಯದಂತೆ ನೆರವೇರಿದ ನಟ ಸಂತೋಷ್ ಬಾಲರಾಜ್ ಅಂತ್ಯಕ್ರಿಯೆ
Bengaluru Rural Cinema Latest Sandalwood

You Might Also Like

Madhuri Elephant
Latest

ಮಾಧುರಿ ಆನೆಯನ್ನು ಮಠಕ್ಕೆ, ಸರ್ಕಾರಿ ಮೃಗಾಲಯಕ್ಕೆ ಸ್ಥಳಾಂತರಿಸಿ – ಜೈನ ಸಮುದಾಯ ಒತ್ತಾಯ

Public TV
By Public TV
3 hours ago
AshwiniVaishnaw
Latest

ರಾಜ್ಯ ಸರ್ಕಾರದಿಂದ ಭೂಮಿ, 50% ಮೊತ್ತ ಭರಿಸಲು ನಿರಾಕರಣೆ; ಶಿವಮೊಗ್ಗ-ಹರಿಹರ ನಡುವಿನ ರೈಲ್ವೆ ಯೋಜನೆ ಸ್ಥಗಿತ

Public TV
By Public TV
3 hours ago
Mangaluru Blast Case The Shariq cooker bomb capable of blowing up the bus FSL Investigation report 1
Bengaluru City

ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ – ಪ್ರಮುಖ ಆರೋಪಿಯ ಬ್ಯಾಂಕ್ ಖಾತೆ ಸೀಜ್

Public TV
By Public TV
4 hours ago
Dharmasthala mass burial case assault
Dakshina Kannada

ಧರ್ಮಸ್ಥಳ ಕೇಸ್; 2 ಗುಂಪುಗಳ ನಡುವೆ ಮಾರಾಮಾರಿ – ವರದಿಗೆ ಹೋದ ಖಾಸಗಿ ವಾಹಿನಿ ವರದಿಗಾರ, ಕ್ಯಾಮೆರಾಮ್ಯಾನ್ ಮೇಲೆ ಹಲ್ಲೆ

Public TV
By Public TV
4 hours ago
D K Shivakumar
Bengaluru City

ನ.1ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಾಲಿಕೆಗಳ ಚುನಾವಣೆಗೆ ಪೂರ್ವಸಿದ್ಧತೆ: ಡಿಕೆಶಿ

Public TV
By Public TV
4 hours ago
youtubers beaten up Chaos erupted in Dharmasthala devotees outraged 2
Dakshina Kannada

ಯೂಟ್ಯೂಬರ್‌ಗಳಿಗೆ ಥಳಿತ, ಅಪಪ್ರಚಾರಿಗಳನ್ನು ಬಂಧಿಸಿ – ಸಿಡಿದ ಧರ್ಮಸ್ಥಳದ ಭಕ್ತರು

Public TV
By Public TV
5 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?