ಚಿಕ್ಕಮಗಳೂರು: ತಿನ್ನೋಕೆ ಮೇವು ಇಲ್ಲದೆ ಎರಡೇ ದಿನದಲ್ಲಿ 9 ಕರುಗಳು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಎಸ್.ಜಿ.ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
- Advertisement 2
ರವಿವಾರ ಐದು ಹಾಗೂ ಇಂದು ನಾಲ್ಕು ಕರುಗಳು ಹಸಿವಿನ ಬೇಗೆಯಿಂದ ಪ್ರಾಣಬಿಟ್ಟಿವೆ. ಕಡೂರು ತಾಲೂಕು ಎರಡು ದಶಕಗಳಿಂದ ಶಾಶ್ವತ ಬರಗಾಲಕ್ಕೆ ತುತ್ತಾಗಿದೆ. ಇಲ್ಲಿನ ಜನ-ಜಾನುವಾರುಗಳು ನೀರು, ಮೇವಿಗಾಗಿ ಹಾಹಾಕಾರ ಅನುಭವಿಸುವಂತಾಗಿದೆ.
- Advertisement 3
- Advertisement 4
ಗೋಶಾಲೆ ತೆರೆಯಿರಿ ಎಂದು ಎಷ್ಟೇ ಬಾರಿ ಅಂಗಲಾಚಿದ್ದರೂ ಜಿಲ್ಲಾಡಳಿತ ಎನ್.ಜಿ.ಓ ಗಾಗಿ ಕಾದು ಕೂತಿರೋದು ಜಾನುವಾರುಗಳ ಮಾರಣಹೋಮಕ್ಕೆ ಕಾರಣವಾಗಿದೆ. ಈಗಾಗಲೇ ಪಂಚನಹಳ್ಳಿಯಲ್ಲಿ ಒಂದು ಗೋಶಾಲೆ ತೆರೆದಿರೋ ಜಿಲ್ಲಾಡಳಿತ ಅದನ್ನೂ ಮುಚ್ಚೋಕೆ ಮುಂದಾಗಿದ್ರು. ಆದ್ರೆ ಸ್ಥಳೀಯರ ಹೋರಾಟದಿಂದ ಮತ್ತೆ ಮುಂದುವರೆಯುತ್ತಿದೆ.
ಇನ್ನೆರಡು ಗೋಶಾಲೆ ತೆರೆಯೋದಕ್ಕೆ ಅವಕಾಶವಿದ್ರೂ ಜಿಲ್ಲಾಡಳಿತ ಮೀನಾಮೇಷ ಏಣಿಸ್ತಿರೋದು ಕರುಗಳ ಮಾರಣಹೋಮಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.