ದೆಹಲಿ: ಮಲತಾಯಿಯಿಂದ ಕಿರುಕುಳಕ್ಕೆ ಒಳಗಾಗಿದ್ದ 8 ವರ್ಷದ ಬಾಲಕನನ್ನು ದೆಹಲಿ ಮಹಿಳಾ ಆಯೋಗ ರಕ್ಷಿಸಿದೆ.
ಈ ವಿಚಾರವಾಗಿ ಮಾಹಿತಿ ದೊರೆತ ದೆಹಲಿ ಮಹಿಳಾ ಆಯೋಗ ತಂಡ, ಪಶ್ಚಿಮ ದೆಹಲಿಯ ಹರಿ ನಗರದಲ್ಲಿರುವ ಬಾಲಕನ ನಿವಾಸಕ್ಕೆ ತಲುಪಿ ಆತನನ್ನು ತನ್ನ ಮಲತಾಯಿಯಿಂದ ರಕ್ಷಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
- Advertisement 2
- Advertisement 3
ಬಳಿಕ ವಿಚಾರಣೆ ವೇಳೆ ಬಾಲಕ ಮಲತಾಯಿ ಹೊರಗೆ ಹೋಗುವಾಗ ಹಗ್ಗಗಳಿಂದ ತನ್ನ ಕೈಗಳನ್ನು ಕಟ್ಟಿ ಹೋಗುತ್ತಿದ್ದರು. ತನ್ನನ್ನು ಹೊರಗೆ ಹೋಗಲು ಮತ್ತು ಯಾರೊಂದಿಗೂ ಬೆರೆಯಲು ಬಿಡುತ್ತಿರಲಿಲ್ಲ. ನನ್ನನ್ನು ನೆಲದ ಮೇಲೆ ಮಲಗಿಸುತ್ತಿದ್ದರು. ಅಲ್ಲದೆ ಸರಿಯಾಗಿ ಊಟ ಕೂಡ ನೀಡುತ್ತಿರಲಿಲ್ಲ ಎಂದು ದೂರಿದ್ದಾನೆ.
- Advertisement 4
ಬಾಲಕನ ದೇಹದಲ್ಲಿ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆತನ ಬೆನ್ನಿನ ಮೇಲೆ ಕೆಲವು ಗೀರುಗಳ ಗುರುತುಗಳು ಪತ್ತೆಯಾಗಿದೆ. ನಂತರ ಬಾಲಕನನ್ನು ದೆಹಲಿ ಮಹಿಳಾ ಆಯೋಗ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿದ್ದಾರೆ.