ಚಾಮರಾಜನಗರ: ಎರಡು ಚಿರತೆಗಳು ಚಾಮರಾಜನಗರ ತಾಲೂಕಿನ ಅಮಚವಾಡಿ ಬಳಿ ಪ್ರತ್ಯಕ್ಷವಾಗಿದ್ದು, ಇದನ್ನು ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ.
ಅಮಚವಾಡಿಯಿಂದ ಎಣ್ಣೆ ಹೊಳೆ ಹೊಸಕೆರೆ ಮಾರ್ಗವಾಗಿ ಮಹದೇಶ್ವರ ಕಾಲೋನಿಗೆ ಹೋಗುವ ರಸ್ತೆ ಮಧ್ಯದಲ್ಲೇ ಎರಡು ಚಿರತೆಗಳು ಕಂಡುಬಂದಿದ್ದು, ಬುಧವಾರ ರಾತ್ರಿ 9 ಗಂಟೆಯ ವೇಳೆ ಚಿರತೆಗಳು ಕಾಣಿಸಿಕೊಂಡಿದೆ. ಎರಡು ಚಿರತೆಗಳು ಆಟವಾಡುತ್ತಿದ್ದ ದೃಶ್ಯವನ್ನು ವಾಹನ ಸವಾರರೊಬ್ಬರು ವಿಡಿಯೋ ಕೂಡ ಮಾಡಿದ್ದಾರೆ. ಬಳಿಕ ವಾಹನಗಳ ಸದ್ದಿಗೆ ಎರಡೂ ಚಿರತೆಗಳು ರಸ್ತೆಯಿಂದ ಓಡಿಹೋಯಿತು ಎಂದು ಸ್ಥಳೀಯರು ತಿಳಿಸಿದರು.
- Advertisement 2
- Advertisement 3
ಹಿಂದೊಮ್ಮೆ ಇದೇ ರಸ್ತೆಯಲ್ಲಿ ಚಿರತೆಯೊಂದು ಕಾಣಿಸಿಕೊಂಡಿತ್ತು. ಆಗ ಭಯಗೊಂಡ ಸ್ಥಳಿಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆ ಅರಣು ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಬೋನು ಇಟ್ಟಿದ್ದರು. ಆದರೆ ಯಾವುದೇ ಚಿರತೆ ಸೆರೆ ಸಿಕ್ಕರಲಿಲ್ಲ.
- Advertisement 4
ಎಣ್ಣೆ ಹೊಳೆ ಕೆರೆಯಲ್ಲಿ ನೀರಿರುವುದು ಹತ್ತಿರದಲ್ಲೇ ಜಾಲಿಮುಳ್ಳಿನ ಪೊದೆ, ಗುಡ್ಡ, ಕ್ವಾರಿಗಳಿರುವುದು ಚಿರತೆಗಳ ಇರುವಿಕೆಗೆ ಹೇಳಿ ಮಾಡಿಸಿದಂತಿದೆ. ಹೀಗಾಗಿ ಈ ಭಾಗದಲ್ಲಿ ಚಿರತೆಗಳು ಆಗಾಗ ಕಾಣಿಸಿಕೊಳ್ಳುತ್ತದೆ. ಮಹದೇಶ್ವರ ಕಾಲೋನಿ ಜನ ಈ ರಸ್ತೆಯಲ್ಲಿ ಹೆಚ್ಚು ತಿರುಗಾಡುವುದರಿಂದ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ತಿಳಿದು ಭಯಗೊಂಡಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಅವರು ಈ ಬಗ್ಗೆ ಕ್ರಮ ತೆಗೆದುಕೊಂಡು ಸ್ಥಳೀಯರ ಭಯವನ್ನು ದೂರ ಮಾಡಬೇಕಿದೆ.