ಹುಬ್ಬಳ್ಳಿ: ಲಾಕ್ಡೌನ್ ಹಿನ್ನೆಲೆ ಅನವಶ್ಯಕವಾಗಿ ರಸ್ತೆಗೆ ಬಂದ ವಾಹನಗಳ ತಪಾಸಣೆ ನಡೆಸುವ ವೇಳೆ ಕಾರು ಕಳ್ಳರಿಬ್ಬರು ಪೊಲೀಸ್ ಬಲೆಗೆ ಬಿದ್ದ ಘಟನೆ ನಡೆದಿದೆ.
- Advertisement 2
ವೈಭವ ನಗರದಲ್ಲಿ ಕಮ್ಮಾರ ಕೆಲಸ ಮಾಡುವ ತನ್ವೀರ್ ಖಾಸೀಂ ಸಾಬ ಸಯ್ಯದ್(20) ಹಾಗೂ ಖಾನಾಪುರದ ತಂಜೀಮ್ ಇಸ್ಮಾಯಿಲ್ ಖಾನಾಪುರಿ (31) ಆರೋಪಿಗಳು. ಇಬ್ಬರೂ ಗೋಕುಲ್ ರಸ್ತೆಯಲ್ಲಿ ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಪೊಲೀಸರು ತಡೆದಿದ್ದಾರೆ. ಈ ವೇಳೆ ದಾಖಲೆ ಕೇಳಿದಾಗ ಇಬ್ಬರು ಯುವಕರು ಕಾರು ಅಲ್ಲಿಯೇ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಬಳಿಕ ಈ ಇಬ್ಬರು ಯುವಕರು ಕಾರು ಕಳ್ಳರು ಎಂದು ಗೊತ್ತಾಗಿದೆ.
- Advertisement 3
- Advertisement 4
ಆರೋಪಿ ತಂಜೀಮ್ ಇಸ್ಮಾಯಿಲ್ ಖಾನಾಪುರಿ ಕಾಕತಿ, ಖಾನಾಪುರ, ನಂದಗಡ, ಟಿಳಕವಾಡಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈತ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಗೋಕುಲ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ತನಿಖೆ ಮುಂದುವರಿಸಿದ್ದಾರೆ.