ವಿಜಯಪುರ: ಕಳ್ಳಬಟ್ಟಿ ಮದ್ಯ ಸೇವಿಸಿ ಯುವಕ ಸಾವಿಗೀಡಾದ ಘಟನೆ ವಿಜಯಪುರ ಜಿಲ್ಲೆಯ ತಿಕೋಟ ತಾ. ಜಾಲಗೇರಿ ತಾಂಡಾ-1 ರಲ್ಲಿ ಘಟನೆ ನಡೆದಿದೆ.
ಸಹದೇವ ಜುಮ್ಮನ್ನಗೊಳ ಸಾವಿಗೀಡಾದ ವ್ಯಕ್ತಿ. ಈತ ಕಳ್ಳಬಟ್ಟಿ ಸೇವಿಸಿ ಸಾವನ್ನಪ್ಪಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.
- Advertisement 2
- Advertisement 3
ಸಹದೇವ ಜಿಲ್ಲೆಯ ಬಬಲೇಶ್ವರ ನಿವಾಸಿಯಾಗಿದ್ದು, ತಾಯಿ ತವರೂರು ಜಾಲಗೇರಿಯಲ್ಲೇ ವಾಸವಿದ್ದ. ಜಾಲಗೇರಿ ತಾಂಡಾದಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಮದ್ಯ ಸೇವನೆಯಿಂದಲೇ ಯುವಕನ ಸಾವಾಗಿದೆ ಅಂತ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
- Advertisement 4
ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಕಳ್ಳಬಟ್ಟಿ ಮದ್ಯ ಮಾರುವವರ ವಿರುದ್ಧ ಕ್ರಮಕ್ಕೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈ ಘಟನೆ ತಿಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.