– ಪೂಜೆಗೆ, ಆರೋಗ್ಯಕ್ಕೂ ಹಿತ ಬಿಲ್ವಪತ್ರೆ
ಉಡುಪಿ: ಇಲ್ಲಿ ನಡೆಯುವ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಉತ್ಸವದ ಸಂದರ್ಭ ಭಕ್ತರಿಗೆ ಬಿಲ್ವಪತ್ರೆಯ ಗಿಡಗಳನ್ನು ವಿತರಿಸುವ ನಿರ್ಧಾರವನ್ನ ಪೇಜಾವರ ಮಠ ಮಾಡಿದೆ.
ಶ್ರೀಕೃಷ್ಣಜನ್ಮಾಷ್ಟಮಿ ಸೆಪ್ಟೆಂಬರ್ 10 ಮತ್ತು 11ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 6ರಿಂದ ಈ ಬಿಲ್ವಗಿಡ ವಿತರಿಸುವ ಪ್ರಕ್ರಿಯೆ ಆರಂಭವಾಗಲಿದೆ. ಉಡುಪಿ ಸಾಮಾಜಿಕ ಅರಣ್ಯ ವಿಭಾಗ 2019-20 ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯಾದ್ಯಂತ ಬಿಲ್ವಪತ್ರೆ ಗಿಡ ವಿತರಿಸುವ ಅಭಿಯಾನವನ್ನು ಆರಂಭ ಮಾಡಿತ್ತು. ಸುಮಾರು 2000 ಬಿಲ್ವಪತ್ರೆ ತಯಾರು ಸಸಿ ಬೆಳೆಸಲಾಗಿತ್ತು.
- Advertisement 2
- Advertisement 3
ಕೊರೊನಾ ಕಿರಿಕಿರಿ ಮತ್ತು ಮಳೆ ಆರಂಭದ ಕಾಲದಲ್ಲಿ ಜನರಿಂದ ಗಿಡಕ್ಕೆ ಬೇಡಿಕೆ ಬಾರದ ಕಾರಣ, ಅರಣ್ಯ ಇಲಾಖೆಯ ಬಳಿಯೇ ಉಳಿದಿತ್ತು. ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಪೇಜಾವರ ಮಠವನ್ನು ಸಂಪರ್ಕ ಮಾಡಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಸಂದರ್ಭ ಉಡುಪಿ ನಗರವಾಸಿಗಳಿಗೆ, ಸುತ್ತಮುತ್ತಲ ಗ್ರಾಮದ ಜನರಿಗೆ ವಿತರಣೆ ಆಗಲಿದೆ.
- Advertisement 4
ಶಿವ ಪೂಜೆಗೆ ಬಿಲ್ವಪತ್ರೆ ಮುಖ್ಯ. ಬಿಲ್ವಪತ್ರೆ ಅಗಾಧ ಪ್ರಮಾಣದ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಬಿಲ್ವಪತ್ರೆಯ ಎಲೆಯನ್ನು ಶಿವಪೂಜೆಗೆ ಬಳಸಲಾಗುತ್ತದೆ. ಹೋಮ ಹವನಕ್ಕೆ ಗಿಡದ ಕಡ್ಡಿಗಳು ಬಳಕೆಯಾಗುತ್ತದೆ. ಬಿಲ್ವಪತ್ರೆ ಕಾಯಿಯ ಸೇವನೆಯಿಂದ ಮಧುಮೇಹ ಕಡಿಮೆಯಾಗುತ್ತದೆ. ಅತಿಸಾರ, ಜ್ವರ ಮೂತ್ರ ಸಂಬಂಧಿತ ಕಾಯಿಲೆಗಳಿಗೂ ಕೂಡ ಬಿಲ್ವಪತ್ರೆ ರಾಮಬಾಣ. ಚರ್ಮದ ಸಮಸ್ಯೆಗಳು ಕೂಡ ತಲೆಗೆ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತದೆ. ಹಾಗಾಗಿ ಧಾರ್ಮಿಕವಾಗಿ ಆಯುರ್ವೇದ ಔಷಧ ಬಳಕೆಗಾಗಿ ಬಿಲ್ವ ಉಪಯೋಗ ಆಗಲಿದೆ ಎಂದು ಪೇಜಾವರ ಮಠದ ವಿದ್ವಾಂಸ ವಾಸುದೇವ್ ಪೆರಂಪಳ್ಳಿ ಮಾಹಿತಿ ನೀಡಿದರು.