ರಸ್ತೆ ಅಪಘಾತದಲ್ಲಿ ಯಕ್ಷಗಾನ ಕಲಾವಿದ ದುರ್ಮರಣ

Public TV
1 Min Read
yakshagana kalavida vamana devadiga

ಮಂಗಳೂರು: ರಸ್ತೆ ಅಪಘಾತದಲ್ಲಿ ಯಕ್ಷಗಾನ ಕಲಾವಿದರೊಬ್ಬರು ದುರ್ಮರಣಕ್ಕೀಡಾದ ಘಟನೆ ಮೂಡಬಿದಿರೆಯ ಗಂಟಾಲಕಟ್ಟೆಯಲ್ಲಿ ನಡೆದಿದೆ.

ಮೃತರನ್ನು ವಾಮನ ದೇವಾಡಿಗ(46) ಎಂದು ಗುರುತಿಸಲಾಗಿದ್ದು, ಇವರು ವೇಣೂರು ಮೂಲದವರು. ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರನಾಗಿದ್ದ ವಾಮನ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಜ.31ರ ವರೆಗೆ ಟಫ್ ರೂಲ್ಸ್ ಜಾರಿ

accident 4

ಕಳೆದ ರಾತ್ರಿ ಕುಂದಾಪುರದ ಕೊಂಕಿ ಎಂಬಲ್ಲಿ ಯಕ್ಷಗಾನ ನಡೆದಿತ್ತು. ಅದನ್ನು ಮುಗಿಸಿ ಬರುವಾಗ ದುರ್ಘಟನೆ ನಡೆದಿದೆ. ಮೃತ ವಾಮನ ದೇವಾಡಿಗ ಯಕ್ಷಗಾನದ ಸ್ತ್ರೀ ವೇಷ ಹಾಗೂ ಕಥಾ ನಾಯಕನ ಪಾತ್ರ ಮಾಡುತ್ತಿದ್ದು, ಹಿರಿಯಡ್ಕ ಮೇಳದ ಕಲಾವಿದರಾಗಿದ್ದರು. ಪ್ರಕರಣ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ದ್ಯಾವಮ್ಮನ ಜಾತ್ರೆಗಾಗಿ ಇಡೀ ಗ್ರಾಮಕ್ಕೆ ಮುಳ್ಳಿನ ಬೇಲಿ- ದಾವಣಗೆರೆಯಲ್ಲಿ ಶತಮಾನಗಳ ಸಂಪ್ರದಾಯ ಇನ್ನೂ ಜೀವಂತ

Share This Article
Leave a Comment

Leave a Reply

Your email address will not be published. Required fields are marked *