ಬೆಂಗಳೂರು: ರಾಜ್ಯದಲ್ಲಿ ಇನ್ನೂ 40-45 ದಿನಗಳು ಮಾತ್ರ ಬಿಜೆಪಿ (BJP) ಸರ್ಕಾರ ಇರುತ್ತೆ. ಆಮೇಲೆ ಈ ದುಷ್ಟ ಸರ್ಕಾರವನ್ನ ಜನ ಓಡಿಸ್ತಾರೆ. ಕಾಂಗ್ರೆಸ್ (Congress) ಅಧಿಕಾರಕ್ಕೆ ಬರ್ತಿದ್ದಂತೆ ಡೆಟಾಲ್, ಗಂಜಲ ಹಾಕಿ ವಿಧಾನ ಸೌಧ (Vidhana Soudha) ಕ್ಲೀನ್ ಮಾಡಿಸ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಗುಡುಗಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪ್ರಜಾಧ್ವನಿ ಯಾತ್ರೆಯಿಂದ ಬಿಜೆಪಿಗೆ ತಲೆ ಕೆಟ್ಟು ಹೋಗಿದೆ. 200 ಯುನಿಟ್ ವಿದ್ಯುತ್, 2 ಸಾವಿರ ಯೋಜನೆ ಜಾರಿಗೊಳಿಸುವ ಭರವಸೆ ನೀಡಿದ ಮೇಲೆ ತಲೆ ಕೆಡಿಸಿಕೊಂಡಿದ್ದಾರೆ. ಇದರಿಂದ ಬಿಜೆಪಿಯಲ್ಲಿ ಆಂತರಿಕ ಜಗಳ ಹೆಚ್ಚಗಿದೆ. ಯಡಿಯೂರಪ್ಪ (BS Yediyurappa) -ಬೊಮ್ಮಾಯಿ (Basavaraj Bommai) ಜಗಳ, ಸಿ.ಟಿ ರವಿ – ಕಟೀಲ್ ನಡುವೆ ಜಗಳ ಇದೆ. ಇದನ್ನ ಹೇಳೋಕೆ ಆಗ್ತಿಲ್ಲ ಅಷ್ಟೇ. ಅದಕ್ಕಾಗಿ ನಮ್ಮ ಜೊತೆಗಿದ್ದ ಸಚಿವ ಸುಧಾಕರ್ (K Sudhakar) ಅವರಿಂದ ಪ್ರೆಸ್ಮೀಟ್ ಮಾಡಿಸಿದ್ದಾರೆ ಎಂದು ಕುಟುಕಿದ್ದಾರೆ.
40 ಪರ್ಸೆಂಟ್ ಬ್ರ್ಯಾಂಡ್ ಬಿಜೆಪಿ ಅವರು ಮಾಡಿದ್ದಾರೆ. ತೇಜಸ್ವಿ ಸೂರ್ಯ (Tejasvi Surya) ಬೆಡ್ ಸ್ಕ್ಯಾಮ್ ಅಂದ. ಪಿಪಿಇ ಕಿಟ್ ನಲ್ಲಿ ಸ್ಕ್ಯಾಮ್ ಅಂತ ಹೇಳಿದ. ಆ ಬಗ್ಗೆ ಮಾತಾಡಿ, ಎಸ್ಸಿ-ಎಸ್ಟಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನ ಅಮಾನತು ಮಾಡಿದ್ದಾರೆ. ಅರ್ಜಿ ಹಾಕದವರಿಗೂ ಹಣ ಕೊಟ್ಟಿದ್ದಾರೆ. ದಲಿತರ ದುಡ್ಡು ಹೊಡೆದಿದ್ದಾರೆ. 40 ಪರ್ಸೆಂಟ್ ನೀವು ತಿಂದು ಈಗ ಕಾಂಗ್ರೆಸ್ಗೆ ಒರೆಸೋಕೆ ಹೋಗ್ತೀರಾ? ಎಂದು ಪ್ರಶ್ನಿಸಿದ್ದಾರೆ.
ರಾಮನಗರದಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ರದ್ದು ಮಾಡಿಲ್ಲ. ನಮ್ಮ ಪಕ್ಕದ ಕ್ಷೇತ್ರ. ನಮಗೆ ಇರೋದು ಒಂದೇ ದಿನ ಸಮಯ. ಅವತ್ತು ಹೊಸದಾಗಿ ರಚನೆ ಆಗಿರೋ ಪ್ರಚಾರ ಸಮಿತಿ ಸಭೆ ಇದೆ. ಸೋತ ಅಭ್ಯರ್ಥಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಭೆ ಕರೆದಿದ್ದೇನೆ. ನಮ್ಮ ರಾಜ್ಯದ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಮಾಡ್ತೀವಿ. ನಾವು ಕೊಟ್ಟ ಗ್ಯಾರಂಟಿಗಳ ಬಗ್ಗೆ, ನಮ್ಮ ಪ್ರಣಾಳಿಕೆ ಬಗ್ಗೆ ಚರ್ಚೆ ಮಾಡಿ, ರೂಪುರೇಷೆ ತಯಾರು ಮಾಡ್ತೀವಿ. ಈ ದೃಷ್ಟಿಯಿಂದ ಮುಂದೂಡಿಕೆ ಮಾಡಿದ್ದೇವೆ. ರಾಮನಗರ ಪಕ್ಕದಲ್ಲೇ ಇದೆ ಯಾವಾಗ ಬೇಕಾದ್ರು ಕಾರ್ಯಕ್ರಮ ಮಾಡ್ತೀವಿ ಎಂದು ಹೇಳಿದ್ದಾರೆ.
ಸಾಲಮನ್ನಾ ಭರವಸೆ ಇನ್ನೂ ಹೇಳಿಲ್ಲ: ಇದೇ ವೇಳೆ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸಾಲ ಮನ್ನಾ, ರೈತರಿಗೆ ಕಡಿಮೆ ಬಡ್ಡಿದರಲ್ಲಿ ಸಾಲ ನೀಡುವ ಭರವಸೆಯನ್ನೂ ಇನ್ನು ಹೇಳಿಲ್ಲ ಎಂಬುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಿಂದ 10 ಕೆಜಿ ಅಕ್ಕಿ ಬಗ್ಗೆ ಹೇಳಿದ್ದೇವೆ, ಉಳಿದಿದ್ದಕ್ಕೆ ಟೈಂ ಇದೆ. ಆಮೇಲೆ ಅ ಬಗ್ಗೆ ಹೇಳ್ತೀವಿ ಎಂದಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k