ವಿಜಯಪುರ: ಜಿಲ್ಲೆಯಲ್ಲಿ ಈ ಬಾರಿ ನೀರಿಗಾಗಿ ಹಾಹಾಕಾರ ಹೆಚ್ಚಾಗುತ್ತಿದೆ. ತಿಕೋಟ ತಾಲೂಕಿನ ಕಳ್ಳಕವಟಗಿ ತಾಂಡಾದಲ್ಲಿ 30ಕ್ಕೂ ಹೆಚ್ಚು ಕುಟುಂಬಗಳು ಕುಡಿಯುವ ನೀರಿಗಾಗಿ 2 ಕಿ.ಮೀ ದೂರ ತೆರಳಿ ನೀರು ತರಬೇಕಾಗಿದೆ. ಹೀಗೆ ತಂದ ನೀರನ್ನು ಬ್ಯಾರಲ್ಗಳಲ್ಲಿ ಸಂಗ್ರಹಿಸಿ, ಕೆಲಸಕ್ಕೆ ಹೋದಾಗ ನೀರನ್ನು ಯಾರೂ ಕದಿಯಬಾರದು ಅಂತ ಬೀಗ ಜಡಿದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾವೇರಿ: ಕಳೆದ 6 ತಿಂಗಳಿಂದ ಇಲ್ಲಿ ನೀರಿನ ಸಮಸ್ಯೆ ಇದ್ದು ಅಧಿಕಾರಿಗಳು, ಜನಪ್ರತಿನಿಧಿಗಳು ಕ್ಯಾರೆ ಎಂದಿಲ್ಲ. ಅತ್ತ ಹಾವೇರಿಯಲ್ಲಿ ಕೆರೆ-ಕಟ್ಟೆಗಳೆಲ್ಲಾ ಬತ್ತಿ ಹೋಗಿದ್ದು ಜನ-ಜಾನುವಾರುಗಳಿಗೆ ಕುಡಿಯಲು ನೀರು ಹಾಗೂ ಮೇವಿಲ್ಲದೇ ಪರದಾಡುವಂತಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೀತಿ ಸಂಹಿತೆ ಹೆಸರಲ್ಲಿ ಯಾವ ಸಮಸ್ಯೆಗಳಿಗೂ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
- Advertisement 2
- Advertisement 3
ಶಿವಮೊಗ್ಗ: ಮಲೆನಾಡಿನ ತುಂಗಾನದಿ ದಂಡೆಯಲ್ಲಿರುವ ಶಿವಮೊಗ್ಗ ನಗರದಲ್ಲಿ ನಿತ್ಯವೂ ಕುಡಿಯುವ ನೀರಿಗೆ ಹೊಡೆದಾಟಗಳಾಗುತ್ತಿವೆ. ಒಂದನೇ ವಾರ್ಡ್ ಗೆ ಸೇರಿರುವ ವಾಜಪೇಯಿ ಬಡಾವಣೆಯಲ್ಲಿ ನಿತ್ಯ ನೀರಿಗಾಗಿ ಅಲೆದಾಟ- ಹೊಡೆದಾಟ ನಡೆಯುತ್ತಲೇ ಇದೆ. ಎಪಿಎಂಸಿಯ ಹಮಾಲಿ ಕಾರ್ಮಿಕರು ಹಾಗೂ ಇನ್ನಿತರ ಬೇರೆ ಉದ್ಯಮಗಳಲ್ಲಿ ಕೆಲಸ ಮಾಡುವ ಕಾರ್ಮಿಕರೇ ಇರುವ ಈ ಬಡಾವಣೆಯಲ್ಲಿ 650 ಮನೆಗಳಿವೆ. ಆದರೆ, ಇದೂವರೆಗೂ ಇಲ್ಲಿಗೆ ನೀರಿನ ವ್ಯವಸ್ಥೆ ಮಾಡಿಲ್ಲ.
- Advertisement 4
ನಿತ್ಯ ಟ್ಯಾಂಕರ್ ನೀರಿಗಾಗಿ ಇಲ್ಲಿನ ಕೂಲಿ ಕಾರ್ಮಿಕರು ಕಾಯುತ್ತಲೇ ಇರಬೇಕು. ಇಲ್ಲಿನ ಕೂಲಿ ಮಹಿಳೆಯುರು ನೀರಿನ ವಿಷಯದಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ನೀರು ಕೊಡಿ, ಇಲ್ಲ ವಿಷ ಕೊಡಿ ಸಾಮೂಹಿಕವಾಗಿ ಸಾಯುತ್ತೇವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.