ವಿಜಯಪುರ: ಹೆಚ್.ಡಿ. ರೇವಣ್ಣನಿಂದ ಮೈತ್ರಿ ಸರ್ಕಾರಕ್ಕೆ ಪತನ ಆಗಿದೆ ಎಂದು ಮಾಜಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ಇಂದು ನಗರದಲ್ಲಿ ಮಾತನಾಡಿದ ಅವರು ಹೆಚ್.ಡಿ ರೇವಣ್ಣ ಎಲ್ಲ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಅವರು ಆರೋಗ್ಯ ಇಲಾಖೆಯಲ್ಲೂ ಕೈ ಹಾಕಿದ್ದರು. ಅವರ ವಿರುದ್ಧ ನಮಗೂ ಸಾಕಷ್ಟು ಅಸಮಾಧಾನವಿದೆ. ಅಸಮಾಧಾನ ಇದೆ ಎನ್ನುವ ಕಾರಣಕ್ಕೆ ಸರ್ಕಾರವನ್ನು ಬೀಳಿಸಬೇಕೇ ಎಂದು ಪ್ರಶ್ನೆ ಮಾಡಿದರು.
ಈ ವೇಳೆ ಕೆಎಂಎಫ್ ಅಧ್ಯಕ್ಷರನ್ನು ರೇವಣ್ಣ ಕಿಡ್ನಾಪ್ ಮಾಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹೆಚ್.ಡಿ. ರೇವಣ್ಣ ಈ ವಿಷಯದಲ್ಲಿ ಕೈ ಹಾಕಿದ್ದು ತಪ್ಪು. ಅ ಸ್ಥಾನವನ್ನು ಕಾಂಗ್ರೆಸ್ ಶಾಸಕ ಭೀಮಾನಾಯಕ್ ಅವರಿಗೆ ನೀಡಲು ಮೊದಲೇ ತೀರ್ಮಾನ ಆಗಿತ್ತು ಎಂದು ತಿಳಿಸಿದರು.