ಉಡುಪಿ: ಆಡಳಿತ ಮಂಡಳಿ ಮತ್ತು ಹೊಸ ಉತ್ತರಾಧಿಕಾರಿ ನೇಮಕವಾಗುವವರೆಗೆ ಶಿರೂರು ಮಠಕ್ಕೆ ವ್ಯವಸ್ಥಾಪಕರ ನೇಮಕವಾಗಿದೆ.
ಶಿರೂರು ಮೂಲಮಠಕ್ಕೆ ತಾತ್ಕಾಲಿಕ ವ್ಯವಸ್ಥಾಪಕರಾಗಿ ಸುಬ್ರಹ್ಮಣ್ಯ ಭಟ್ ಗೆ ಜವಾಬ್ದಾರಿ ನೀಡಲಾಗಿದೆ. ಸೋದೆ ಮಠಾಧೀಶ ವಿಶ್ವವಲ್ಲಭ ತೀರ್ಥರು ಉಸ್ತುವಾರಿ ನೇಮಕವಾಗಿದೆ. ಮಠದ ತೋಟ, ಚಿನ್ನಾಭರಣ, ನೋಡಿಕೊಳ್ಳಲು ಈ ಉಸ್ತುವಾರಿಗೆ ಅಧಿಕಾರ ಕೊಡಲಾಗಿದೆ.
- Advertisement 2
ತನಿಖೆ ಹಿನ್ನೆಲೆಯಲ್ಲಿ ಪೊಲೀಸ್ ಸುಪರ್ದಿಯಲ್ಲಿರುವ ಮೂಲ ಮಠದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ. ಆದ್ದರಿಂದ ಮಠದೊಳಗೆ ಯಾರಿಗೂ ಪ್ರವೇಶಕ್ಕೆ ಅವಕಾಶ ಕೊಡಲಾಗುತ್ತಿಲ್ಲ. ಶಿರೂರು ಮಠದ ಆಸ್ತಿಪಾಸ್ತಿ ಸೋದೆ ಮಠ ಸುಪರ್ದಿಗೆ ಪಡೆದಿಲ್ಲ. ತನಿಖೆ ಮುಗಿಯುವ ತನಕ ವ್ಯವಸ್ಥಾಪಕರಿಗೆ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಸೋದೆ ಮಠದ ಮೂಲಗಳು ತಿಳಿಸಿವೆ.
- Advertisement 3