ಬೆಂಗಳೂರು: ಈ ವರ್ಷದ ಕೊನೆಯ ಚಂದ್ರಗ್ರಹಣ (Chandragrahana 2023) ಮುಕ್ತಾಯವಾಗಿದೆ. ಹೀಗಾಗಿ ಬೆಂಗಳೂರಿನ ಬನಶಂಕರಿ ದೇಗುಲ, ಕಾಡುಮಲ್ಲೇಶ್ವರ ದೇವಾಲಯ ಹಾಗೂ ಜಿಲ್ಲೆಗಳಲ್ಲೂ ದೇಗುಲದ ಬಾಗಿಲು ಓಪನ್ ಮಾಡಲಾಗಿದ್ದು, ಶುದ್ಧೀಕರಣ ಮಾಡಲಾಗಿದೆ.
ಬನಶಂಕರಿ ದೇವಾಲಯ ಶುದ್ಧೀಕರಣಕ್ಕೂ ಮುನ್ನ ಪೂಜೆ ಸಲ್ಲಿಸಲಾಗಿದೆ. ಗರ್ಭಗುಡಿಗೆ ಪೂಜೆ ಸಲ್ಲಿಸಿ ದೇಗುಲ ಓಪನ್ ಮಾಡಲಾಗಿದೆ. ಗ್ರಹಣದ ಹಿನ್ನೆಲೆಯಲ್ಲಿ ತಾಯಿ ಬನಶಂಕರಿಗೆ ದರ್ಭೆ ದಿಗ್ಬಂಧನ ಹಾಕಲಾಗಿತ್ತು. ಇದೀಗ ದೇವಾಲಯ ಶುದ್ಧೀಕರಣದ ಬಳಿಕ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಕಾಡುಮಲ್ಲೇಶ್ವರ ದೇವಾಲಯದ ಬಾಗಿಲು ಕೂಡ ಓಪನ್ ಮಾಡಲಾಗಿದೆ. ಸಂಪೂರ್ಣ ದೇವಾಲಯದ ಶುದ್ಧೀಕರಣ ಕಾರ್ಯ ನಡೆದಿದ್ದು, ಗ್ರಹಣದ ನಂತರ ದರ್ಬೆ ಬಂಧನದಿಂದ ದೇವರಿಗೆ ಮುಕ್ತಿ ಸಿಕ್ಕಿದೆ. ಶುದ್ಧೀಕರಣ ಕಾರ್ಯದ ಬಳಿಕ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಚಂದ್ರಗ್ರಹಣದ ವೇಳೆಯೇ ಬಾಗಿಲು ತೆರೆದ ಉಡುಪಿ ಶ್ರೀಕೃಷ್ಣ ಮಠ
ಇತ್ತ ಜಿಲ್ಲೆಗಳಲ್ಲೂ ಗ್ರಹಣ ಮೋಕ್ಷದ ನಂತರ ದೇಗುಲ ಶುದ್ಧೀಕರಣ ಮಾಡಲಾಗಿದೆ. ದೇವರ ಮೂರ್ತಿಗಳನ್ನು ಶುದ್ಧೀಕರಿಸಿದ ಬಳಿಕ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಕಾರವಾರ, ಮಂಡ್ಯ, ಉಡುಪಿ, ಮೈಸೂರಲ್ಲಿ ದೇವಸ್ಥಾನ ಶುದ್ಧೀಕರಣದ ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ.
Web Stories