ಬೆಳಗಾವಿ/ಚಿಕ್ಕೋಡಿ: ಸರ್ಕಾರ ಪ್ರಕಟಿಸಿರುವ ಮುಖ್ಯಮಂತ್ರಿ ಪದಕಕ್ಕೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಿವಾನಂದ ಗುಡಗನಟ್ಟಿ ಆಯ್ಕೆಯಾಗಿದ್ದಾರೆ.
2018ನೇ ಸಾಲಿನಲ್ಲಿ ಬೆಂಗಳೂರು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದರೋಡೆ, ಸರಗಳ್ಳತನ, ಅಪಹರಣ, ಕಳ್ಳತನ ಪ್ರಕರಣಗಳ ಮಾಹಿತಿ ಸಂಗ್ರಹಿಸಿ ಅಪರಾಧಿಗಳನ್ನು ಮಟ್ಟ ಹಾಕಿದ್ದು, ಕಳುವಾಗಿದ್ದ 17 ದ್ವಿಚಕ್ರ ವಾಹನಗಳ, 46 ಕೆಜಿ ಚಿನ್ನವನ್ನ ಪತ್ತೆ ಹಚ್ಚಿ ವಶಪಡಿಸಿಕೊಳ್ಳುವಲ್ಲಿ ಇವರು ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸಿ ಆರೋಪಿಗಳ ಹೆಡೆ ಮುರಿ ಕಟ್ಟಿದ್ದರು.
ಶಿವಾನಂದ ಅವರ ಜನಪರ ಅತ್ಯುತ್ತಮ ಸೇವೆಯನ್ನು ನೋಡಿ ಸರ್ಕಾರ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಿದೆ. ಸದ್ಯ ಶಿವಾನಂದ ಗುಡಗನಟ್ಟಿ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಜನ ಸ್ನೇಹಿ ಸೇವೆಯನ್ನು ಕೂಡ ಪರಿಗಣಿಸಲಾಗಿದ್ದು, ಇದೇ ಮಾರ್ಚ್ 16ರಂದು ವಿಧಾನಸಭೆಯಲ್ಲಿ ಮುಖಮಂತ್ರಿ ಯಡಿಯೂರಪ್ಪ ಅವರು ಪದಕ ನೀಡಿ ಗೌರವಿಸಲಿದ್ದಾರೆ.