ಅಮೇಥಿ: ಹೈಕಮಾಂಡ್ಗೆ ಕರ್ನಾಟಕ ಕಾಂಗ್ರೆಸ್ ನೀಡಿರುವ ಕಪ್ಪ ಕಾಣಿಕೆ ವಿಚಾರ ಕೇಂದ್ರದಲ್ಲೂ ಸದ್ದು ಮಾಡ್ತಿದೆ. ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಡೈರಿ ಬಗ್ಗೆ ಪ್ರಸ್ತಾಪಿಸಿ ರಾಹುಲ್ ಗಾಂಧಿ ಮತ ಕ್ಷೇತ್ರ ಅಮೇಥಿಯಲ್ಲಿ ಹರಿಹಾಯ್ದಿದ್ದಾರೆ.
ಉತ್ತರಪ್ರದೇಶದ ಚುನಾವಣೆ ಹಿನ್ನೆಲೆಯಲ್ಲಿ ಇಂದು ಅಮೇಥಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಸ್ಮೃತಿ ಇರಾನಿ, ಕಾಂಗ್ರೆಸ್ ಹೈಕಮಾಂಡ್ಗೆ ಸಾವಿರಾರು ಕೋಟಿಗಳಲ್ಲಿ ಹಣ ಸಂದಾಯವಾಗಿದೆ. ಐಟಿ ದಾಳಿ ವೇಳೆ ಸಿಕ್ಕ ಡೈರಿಯಲ್ಲಿ ಆರ್ಜಿ ಎಂಬ ಹೆಸರಿದೆ. ಆರ್ಜಿ ಅಂದ್ರೆ ಯಾರು? ಎಂದು ಪ್ರಶ್ನಿಸಿದ್ರು. ಈ ವೇಳೆ ಅಲ್ಲಿದ್ದ ಜನ ಆರ್ಜಿ ಅಂದ್ರೆ ರಾಹುಲ್ ಗಾಂಧಿ ಎಂದು ಕೂಗತೊಡಗಿದ್ರು.
ರಾಹುಲ್ ಗಾಂಧಿ ಜನರ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ಜನರ ಮುಂದೆ ಅಭಿವೃದ್ಧಿಯ ಬಗ್ಗೆ ಮಾತಾಡ್ತಾರೆ ಎಂದು ಇರಾನಿ ಗುಡುಗಿದ್ರು.
ಕಪ್ಪ ಕಾಣಿಕೆ ನೀಡಿರುವ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಸಿಬಿಐ ನಿರ್ದೇಶಕರಿಗೆ ಬಿಜೆಪಿ ಸಂಸದರು ಪತ್ರ ಬರೆದಿದ್ದಾರೆ.