ಚಿಕ್ಕಬಳ್ಳಾಪುರ: ಹತ್ಯೆಗೀಡಾಗಿರುವ ಎಂ.ಎಂ ಕಲ್ಬುರ್ಗಿ (MM Kalburgi), ಗೌರಿ ಲಂಕೇಶ್ (Gauri Lankesh) ಅವರಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕೂಡಾ ಹಿಟ್ ಲಿಸ್ಟ್ನಲ್ಲಿದ್ರು ಅಂತ ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ (Nidumamidi Swamiji) ಹೇಳಿಕೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಗೌರಿಬಿದನೂರು ನಗರದ ಅಂಬೇಡ್ಕರ್ ಸಮಾನತಾ ಸೌಧದಲ್ಲಿ ನಡೆದ ಚಿಂತಕ ಪ್ರೋ.ಬಿ ಗಂಗಾಧರಮೂರ್ತಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಂ.ಎಂ ಕಬ್ಬುರ್ಗಿ ಹತ್ಯೆ ಅದಾಗ ಮೇಣದ ಬತ್ತಿ ಹಚ್ಚಿ ಸುಮ್ಮನಾಗಿದ್ದೀವಿ. ಗೌರಿ ಹೋದಾಗ ನಾವು ಗೌರಿ ಅಂತ ಮೇಣದ ಬತ್ತಿ ಹಚ್ಚಿ ಸುನ್ಮನಾಗಿದ್ದೀವಿ. ಕೊಲೆಯಂತಹ ಆತಂಕ ನಿಡುಮಾಮಿಡಿ, ಭಗವಾನ್, ಚಂಪಾಗೂ ಬಂದಿತ್ತು. ಸಿದ್ದರಾಮಯ್ಯನವರಿಗೂ ಬಂದಿತ್ತು, ಅವರು ಹಿಟ್ ಲಿಸ್ಟ್ ನಲ್ಲಿದ್ರು ಎಂದು ಹೇಳಿದರು.
ಸಿದ್ದರಾಮಯ್ಯನವರು ಹಿಟ್ ಲಿಸ್ಟ್ನಲ್ಲಿದ್ದು, ಅವರಿಗೆ ತೀವ್ರವಾದ ಬೆದರಿಕೆ ಇತ್ತು. ದೇವರ ಕೃಪೆ ಕೊಲ್ಲುವವನು ಒಬ್ಬ ಇದ್ರೆ, ಕಾಯುವವನೂ ಒಬ್ಬ ಇರುತ್ತಾನೆ. ನಾನು ಹೋದ್ರೆ ನಿಡುಮಾಮಿಡಿ ಅಂತ ಒಂದು ದಿನ ಮೇಣದ ಬತ್ತಿ ಹಚ್ಚಿ ಬಿಡುತ್ತೀರಿ. ಸಿದ್ದರಾಮಯ್ಯನವರು ಹೋದ್ರೂ ಒಂದು ದಿನ ಮೇಣದ ಬತ್ತಿ ಹಚ್ಚಿ ಬಿಡುತ್ತೀವಿ. ಸತ್ತ ಮೇಲೆ ಮೇಣದ ಬತ್ತಿ ಹಚ್ಚಿ ಸಮಾಧಾನ ಪಡುವ ಬದಲು ಬದುಕಿದ್ದಾಗ ಅವರಿಗೆ ಶಕ್ತಿ ತುಂಬಿ. ಅಧಿಕಾರವನ್ನು ಅವರಿಗೆ ಕೊಟ್ಟು, ಸಮಾಜದಲ್ಲಿ ಬದಲಾವಣೆ ತನ್ನಿ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯನವರೇ 10% ಕಮಿಷನ್ ತಗೊಳ್ಳಿ – ಬಿಜೆಪಿಯವರ ತರ 40% ಬೇಡ: ನಿಡುಮಾಮಿಡಿ ಶ್ರೀ
ಕರ್ನಾಟಕದ ಜನತೆ ಈಗಾಗಲೇ ಬದಲಾವಣೆಯನ್ನು ಬಯಸುತ್ತಿದೆ. ಅದನ್ನು ಮತವನ್ನಾಗಿ ಪರಿವರ್ತಿಸಿ, ಆ ಸ್ಥಾನಕ್ಕೆ ಬರುವುದು ನಿಮ್ಮ ಮೇಲೆ ನಿಂತಿದೆ. ಸಿದ್ದರಾಮಯ್ಯನವರು ಈ ರಾಜ್ಯದ ಆಶಾಕಿರಣ. ದೇವರು ಅವರಿಗೆ ಆ ಶಕ್ತಿ ಒದಗಿಸಿಕೊಡಲಿ ಎಂದು ನಿಡುಮಾಮಿಡಿ ಶ್ರೀಗಳು ಪರೋಕ್ಷವಾಗಿ ಅವರನ್ನು ಸಿಎಂ ಆಗಬೇಕು ಅಂತ ಆಶಿಸಿದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಸರ್ಕಾರ ಉರುಳಿಸುವ ಶಕ್ತಿ ಇದೆ – ಸತೀಶ್ ಜಾರಕಿಹೊಳಿ