ಶಿವಮೊಗ್ಗ: ಜಿಲ್ಲೆಯ ಮುಸ್ಲಿಂ ಸಮುದಾಯದ (Muslims Community) ಜನ ಗಲಾಟೆ ಮಾಡುವವರಲ್ಲ ನನಗೆ ನೂರಕ್ಕೆ ನೂರು ಗೊತ್ತು. ಆದ್ರೆ ಹಿಂದೂಗಳಲ್ಲೇ ಕೆಲವು ತಲಹರಟೆಗಳಿವೆ’ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಅವರು ಹೇಳಿರುವ ವೀಡಿಯೋವೊಂದು ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ಹಿಂದೂಗಳಲ್ಲಿಯೂ (Hindu) ಕೆಲವು ತಲೆಹರಟೆಗಳಿವೆ, ಮುಸ್ಲಿಮರಲ್ಲೂ ಕೆಲವು ತಲೆಹರಟೆಗಳಿವೆ. ನಾನು ಇಲ್ಲ ಅನ್ನೋದಿಲ್ಲ. ಅವರೊಂದು ನಾಲ್ಕು ಜನ, ಇವರೊಂದು ನಾಲ್ಕು ಜನ ಸೇರ್ಕೊಂಡು ತಲೆಹರಟೆ ಕೆಲಸ ಮಾಡಿದಾಗ ಗಲಾಟೆ ಶುರುವಾಗುತ್ತೆ ಎಂದು ವೀಡಿಯೋನಲ್ಲಿ ಹೇಳಿದ್ದಾರೆ.
ಶಿವಮೊಗ್ಗ (Shivamogga) ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಮೊಹಮ್ಮದ್ ಶಫಿ ಎಂಬವರ ಫೇಸ್ಬುಕ್ನಲ್ಲಿ, ಈ ವಿಡಿಯೋ ಮೊದಲು ಪ್ರಕಟವಾಗಿದೆ. ನಂತರ ಈ ಬಗ್ಗೆ ಪರವಿರೋಧ ಚರ್ಚೆಗಳು ಶುರುವಾಗಿದೆ. ಮೂರು ದಿನಗಳ ಹಿಂದಿನ ವಿಡಿಯೋ ಸೋರಿಕೆಯಾಗಿದ್ದು, ಅಲ್ಪಸಂಖ್ಯಾತ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಮಾಜಿ ಸಚಿವರು ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ನಮ್ಮ ಕ್ಷೇತ್ರದ ಜನರ ಪ್ರತಿ ಮನೆಯಲ್ಲೂ ದೇವರ ಫೋಟೋ ಜೊತೆ ಸಿದ್ದರಾಮಯ್ಯ ಫೋಟೋ ಇದೆ: ಜಮೀರ್
ಈಶ್ವರಪ್ಪ ಹೇಳಿದ್ದೇನು?
ಶಿವಮೊಗ್ಗದ ಮುಸ್ಲಿಮರು ಗಲಾಟೆ ಮಾಡೋರಲ್ಲ ನನಗೆ ನೂರಕ್ಕೆ ನೂರು ಗೊತ್ತು. ಹಿಂದೂ-ಮುಸ್ಲಿಂ ಎರಡೂ ಸಮಯದಾಯದಲ್ಲೂ ಕೆಲವು ತಲೆಹರಟೆಗಳಿದ್ದಾರೆ. ಅವರು ಸೇರಿಕೊಂಡು ತಲೆಹರಟೆ ಕೆಲಸಮಾಡಿದಾಗ ಗಲಾಟೆ ಶುರುವಾಗುತ್ತೆ. ಇಲ್ಲಾಂದ್ರೆ ತಣ್ಣಗೆ ಇರುತ್ತದೆ. ನಾನು ತಪ್ಪು ಮಾಡಿದ್ರೆ ಇಲ್ಲಿಯೇ ಸಭೆಯಲ್ಲಿ ಹೇಳಿ? ಇದನ್ನೂ ಓದಿ: 25 ವರ್ಷ ಬಿಜೆಪಿಯನ್ನು ಸಹಿಸಿದ್ದು ಸಾಕು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ: ಹೆಚ್.ಎಸ್.ಚಂದ್ರಮೌಳಿ
ಸಮಾಜದಲ್ಲಿ ಅಣ್ಣತಮ್ಮಂದಿರಂತೆ ಇರುತ್ತೇವೆ. ನಾನು ಯಾವ ವಿಚಾರಕ್ಕೆ ಗಲಾಟೆ ಮಾಡುತ್ತೇನೆ ಅಂದ್ರೆ, ಈ ಹಿಂದೆ ಶಿವಪ್ಪನಾಯಕ ಸರ್ಕಲ್ನಲ್ಲಿ ಎಸ್ಡಿಪಿಐನವರು ಒಂದು ಸಮ್ಮೇಳನ ಮಾಡಿದ್ದರು. ಆ ಸಮ್ಮೇಳನದಲ್ಲಿ ಯಾವನೋ ಒಬ್ಬ`ಹಿಂದೂಸ್ತಾನ್ ಮುರ್ದಾಬಾದ್, ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿದ್ದ. ಯಾರಾದರೂ ಇದನ್ನ ಕೇಳಿಕೊಂಡು ಸುಮ್ಮನಿರುತ್ತಾರಾ? ನೀವು ಸುಮ್ಮನಿರುತ್ತೀರಾ? ನೀವು ಸುಮ್ಮನಿದ್ದರೂ ನಾನು ಸುಮ್ಮನಿರಲ್ಲ, ಬಾಯಿ ಬಿಟ್ಟು ಹೇಳ್ತೀನಿ ಎಂದು ಹೇಳಿದ್ದಾರೆ.
ಸದ್ಯ ಈ ವೀಡಿಯೋಗಳು ವಾಟ್ಸಪ್ ಗ್ರೂಪ್ಗಳಲ್ಲಿ ಹರಿದಾಡುತ್ತಿದ್ದು, ಪರ – ವಿರೋಧ ಚರ್ಚೆಗಳೂ ನಡೆಯುತ್ತಿವೆ.