ಚಿತ್ರದುರ್ಗ: ಪ್ರೀತಿ (Love) ಮಾಯೆ ಹುಷಾರ್ ಅಂತಾರೆ. ಈಕೆಯ ಬದುಕಲ್ಲೂ ಪ್ರೀತಿಯ ಮಾಯೆ ಆಕೆಯನ್ನೇ ಅಂತ್ಯ ಮಾಡಿಸಿದೆ.
ಚಿತ್ರದುರ್ಗದ ಐಯುಡಿಪಿ ಬಡಾವಣೆಯ ಆರನೇ ಅಡ್ಡರಸ್ತೆಯಲ್ಲಿ ಇರುವ ಕಿರಣ್ ಎಂಬ ಆಸಾಮಿ, ಬಾಲೇನಹಳ್ಳಿ ಗ್ರಾಮದ ವಿನುತಾಳನ್ನು ಪ್ರೀತಿಸಿದ್ದ. ಅಲ್ಲದೇ ವಿರೋಧದ ನಡುವೆ ಮದುವೆನೂ ಆದ. ಸ್ವರ್ಗಕ್ಕೆ ಮೂರೇಗೇಣು ಅಂತಿದ್ದ ವಿನುತಾಗೆ ಮುದ್ದಾದ ಒಂದು ವರ್ಷದ ಮಗು ಕೂಡ ಇರುತ್ತೆ. ಆದರೆ ಮದುವೆಯಾದ ಕೆಲವೇ ತಿಂಗಳಲ್ಲಿನ ಕಿರಣ್ ಕುಮಾರ್ ತನ್ನ ವರಸೆ ಬದಲಿಸ್ತಾನೆ.
ಈತನಿಗೆ ಮದ್ಯಪಾನ (Alcohol) ಸೇವಿಸಿ ಯುವತಿಯರಿಗೆ ವಂಚಿಸುವ ಖಯಾಲಿ ಇತ್ತು. ಅಲ್ಲದೇ ಡ್ರಗ್ಸ್ ಕೂಡ ಸೇವಿಸಿ, ವಿನುತಾಗೆ ನಿತ್ಯ ಕಿರುಕುಳ ನೀಡ್ತಿದ್ದನಂತೆ. ಹೀಗಾಗಿ ಇಬ್ಬರ ಮಧ್ಯೆ ನಿನ್ನೆ ರಾತ್ರಿ ಸಹ ಕಲಹವಾಗಿದ್ದು, ಪತ್ನಿಯನ್ನು ಕೊಂದು, ಆಕೆಯನ್ನು ನೇಣು ಬಿಗಿದ ಸ್ಥಿತಿಯಲ್ಲಿ ನೇತು ಹಾಕಿದ್ದಾನೆಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಮಹಿಳೆ ಮೇಲೆ ಮೂವರಿಂದ ಗ್ಯಾಂಗ್ ರೇಪ್- ಸಿಗರೇಟ್ನಿಂದ ಗುಪ್ತಾಂಗ ಸುಟ್ಟರು
ಸದ್ಯ ವಿನುತಾಳ ಗಂಡ ಕಿರಣ್ ಪೊಲೀಸರ ಅತಿಥಿಯಾಗಿದ್ದಾನೆ. ಏನೂ ಅರಿಯದ ಹಸುಗೂಸು ತಾಯಿಯನ್ನು ಕಳೆದುಕೊಂಡು ರೋಧಿಸುತ್ತಿದೆ. ಒಟ್ಟಿನಲ್ಲಿ ಪ್ರೀತಿ-ಪ್ರೇಮದ ಮೋಹಕ್ಕೆ ಸಿಲುಕಿ ಹೆತ್ತವರನ್ನು ತೊರೆದು ಬಂದ ಯುವತಿ ಸಾವು ನಿಜಕ್ಕೂ ದುರಂತ. ಪತಿ ಕಿರಣ್ಕುಮಾರ್ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದು, ಸೂಕ್ತ ತನಿಖೆಯಿಂದಷ್ಟೇ ಸತ್ಯಾಸತ್ಯ ಬಯಲಾಗಬೇಕಿದೆ.