ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದಗಣಿ ಕಂಪನಿ ಆವರಣದಲ್ಲಿನ ಶ್ರೀಗಂಧದ ಮರವನ್ನು ರಾತ್ರೋರಾತ್ರಿ ಕಳ್ಳರು ಕಡಿದು ಕದ್ದೊಯ್ದಿದ್ದಾರೆ.
ಕಂಪನಿಯ ವಿಲ್ಹೇಜ್ ಶಾಪ್ನೊಳಗೆ ನುಗ್ಗಿ ಮರವನ್ನು ಕಡಿದು ಕಳ್ಳತನ ಮಾಡಿದ್ದಾರೆ. ನಿನ್ನೆ ತಡರಾತ್ರಿ ಘಟನೆ ನಡೆದಿದ್ದು ಬೆಳಗಿನ ಜಾವ ಬೆಳಕಿಗೆ ಬಂದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಮರ ಕಳ್ಳತನವಾಗಿದೆ. ಇದನ್ನೂ ಓದಿ: ಶಿವ, ಪಾರ್ವತಿ ವೇಷ ಧರಿಸಿ ಹಣದುಬ್ಬರದ ಬಗ್ಗೆ ನಾಟಕ- ಶಿವ ವೇಷಧಾರಿಯ ಬಂಧನ
ಚಿನ್ನದಗಣಿ ಆವರಣದಲ್ಲಿ ಪದೇ ಪದೇ ಗಂಧದ ಮರಗಳ ಕಳ್ಳತನ ನಡೆಯುತ್ತಲೇ ಇದೆ. ಇಲ್ಲಿನ ಸಿಬ್ಬಂದಿ ಕ್ವಾಟ್ರಸ್ಗಳಲ್ಲಿ ಈಗಾಗಲೇ ನೂರಾರು ಮರಗಳು ಮಾಯವಾಗಿವೆ. ಅರಣ್ಯ ಇಲಾಖೆ ಹಾಗೂ ಕಂಪನಿ ಭದ್ರತಾ ಸಿಬ್ಬಂದಿ ವೈಫಲ್ಯವೇ ಮರಗಳ ಕಳ್ಳತನಕ್ಕೆ ಕಾರಣ ಎಂದು ಸ್ಥಳೀಯರು ಆರೋಪ ಹೊರಿಸಿದ್ದಾರೆ.