ಮೈಸೂರು: ದೂರು ನೀಡಲು ಹೋದ ವಕೀಲನನ್ನು ಬಂಧಿಸಿದ್ದನ್ನು ಖಂಡಿಸಿ ಮೈಸೂರಿನ ನಜರ್ಬಾದ್ ಠಾಣೆ ಬಳಿ ಬಿಜೆಪಿ ರಾತ್ರೋರಾತ್ರಿ ಪ್ರತಿಭಟನೆ ನಡೆಸಿತು.
ನಜರ್ಬಾದ್ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದ ವಕೀಲ, ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗೋಕುಲ್ ಗೋವರ್ಧನ್ನನ್ನು ಪೊಲೀಸರು ಬಂಧಿಸಿದ್ದರು.
ಮುಡಾ ಖಾಲಿ ನಿವೇಶನ ಸಂಬಂಧ ಗೋಕುಲ್ ದೂರು ನೀಡಲು ತೆರಳಿದ್ದಾಗ ಇನ್ಸ್ ಪೆಕ್ಟರ್ ಶೇಖರ್ ಹಾಗೂ ಗೋಕುಲ್ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಗೋಕುಲ್ ನನ್ನು ಅರೆಸ್ಟ್ ಮಾಡಿ ಇನ್ಸ್ ಪೆಕ್ಟರ್ ಶೇಖರ್ ಸೆಲ್ಗೆ ಹಾಕಿದ್ದರು. ಇದನ್ನು ಖಂಡಿಸಿ ಗೋಕುಲ್ ಬಿಡುಗಡೆ ಮಾಡುವಂತೆ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಠಾಣೆ ಮುಂದೆ ಧರಣಿ ಕುಳಿತರು. ಬಳಿಕ ಬಿಜೆಪಿ ಕಾರ್ಯಕರ್ತರು ನಜರ್ಬಾದ್ ಪೊಲೀಸ್ ಠಾಣೆ ಮುಂಭಾಗ ರಸ್ತೆ ತಡೆ ನಡೆಸಿದ್ರು.