– ಸೆಲೆಬ್ರಿಟಿಗಳಿಂದ ದೇಶಭಕ್ತಿ ನಿರೀಕ್ಷಿಸಬೇಡಿ ಎಂದ ಆಂಧ್ರ ಡಿಸಿಎಂ
ಆಪರೇಷನ್ ಸಿಂಧೂರದ (Operation Sindoor) ಬಗ್ಗೆ ನಟರು, ಸೆಲೆಬ್ರಿಟಿಗಳು ಮಾತನಾಡುತ್ತಿಲ್ಲ ಎಂದು ಆಂಧ್ರಪ್ರದೇಶ ಡಿಸಿಎಂ, ನಟ ಪವನ್ ಕಲ್ಯಾಣ್ (Pawan Kalyan) ಅಸಮಾಧಾನ ಹೊರಹಾಕಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, ಸೆಲೆಬ್ರಿಟಿಗಳು (Celebrities) ಮಾತಾನಾಡುತ್ತಿಲ್ಲ, ಹೀರೋಗಳು ಮಾತಾನಾಡುತ್ತಿಲ್ಲ. ಬಾಲಿವುಡ್ ಹೀರೋಗಳು ಮಾತಾನಾಡುತ್ತಿಲ್ಲ ಅಂದರೆ ಅವರು ಮನರಂಜನೆ ಕೊಡುವವರು, ಒಳ್ಳೆಯ ಪ್ರದರ್ಶನ ಕೊಡುವವರು ಅಷ್ಟೇ. ಅರ್ಯಾರು ದೇಶವನ್ನು ನಡೆಸುವ ವ್ಯಕ್ತಿಗಳಲ್ಲ. ಸೆಲೆಬ್ರಿಟಿಗಳಿಂದ ದೇಶಭಕ್ತಿ ನಿರೀಕ್ಷಿಸಬೇಡಿ ಎಂದರು. ಇದನ್ನೂ ಓದಿ: ಇಂದು RCB vs KKR ಪಂದ್ಯ – ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಬಾಂಬ್ ಸ್ಕ್ವಾಡ್ ಪರಿಶೀಲನೆ
ದೇಶಭಕ್ತಿ ಎಂದರೆ ಮುರಳಿ ನಾಯ್ಕ್ನಂಥವರು. ಮುರಳಿ ನಾಯ್ಕ್ 24 ವರ್ಷದ ಯುವಕ. ದೇಶಕ್ಕೋಸ್ಕರ ಸಿನಿಮಾ ನೋಡಲಿಲ್ಲ, ಸಿನಿಮಾ ಬಗ್ಗೆ ಹೇಳಲಿಲ್ಲ. ಆದರೆ ಭಾರತ್ ಮಾತಾ ಕೀ ಜೈ ಹೇಳಿದ. ಯಾವಾಗ ಭಾರತ ಮಾತೆಯನ್ನು ಪ್ರೀತಿಸುತ್ತಾರೋ ಅವರು ನಿಜವಾದ ದೇಶ ಪ್ರಜೆಗಳು. ಸಿನಿಮಾ ಬರಬಹುದು, ಹೋಗಬಹುದು ಎಂದು ಯೋಧ ಮುರಳಿ ಶೌರ್ಯಕ್ಕೆ ಸೆಲ್ಯೂಟ್ ಹೊಡೆದರು. ಇದನ್ನೂ ಓದಿ: ಆಪರೇಷನ್ ಸಿಂಧೂರದ ಬಗ್ಗೆ ಪಾಕ್ಗೆ ಮಾಹಿತಿ ನೀಡುತ್ತಿದ್ದ ಹರಿಯಾಣದ ಯುವಕ ಅರೆಸ್ಟ್