Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕುಮಟಳ್ಳಿ ‘ಬಾರಾ ಉಗ್ರ ಹೋರಾಟ ಉಂಟು’ ಅಂದ ಸಾಹುಕಾರ ಕೊನೆಗೆ ಸೈಲೆಂಟು..!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕುಮಟಳ್ಳಿ ‘ಬಾರಾ ಉಗ್ರ ಹೋರಾಟ ಉಂಟು’ ಅಂದ ಸಾಹುಕಾರ ಕೊನೆಗೆ ಸೈಲೆಂಟು..!

Bengaluru City

ಕುಮಟಳ್ಳಿ ‘ಬಾರಾ ಉಗ್ರ ಹೋರಾಟ ಉಂಟು’ ಅಂದ ಸಾಹುಕಾರ ಕೊನೆಗೆ ಸೈಲೆಂಟು..!

Public TV
Last updated: February 19, 2020 10:50 pm
Public TV
Share
3 Min Read
mahesh kumathalli ramesh jarkiholi
SHARE

ಪವಿತ್ರ ಕಡ್ತಲ
ಫಸ್ಟ್ ರ‌್ಯಾಂಕ್ ಬಂದ್ರೆ ಸೈಕ್ಲು ಕೊಡಿಸ್ತೀನಿ ಅಂತಾ ಪ್ರಾಮಿಸ್ ಮಾಡಿದ ಅಪ್ಪ ಉಳಿದ ಫಸ್ಟ್ ರ‌್ಯಾಂಕ್ ಮಕ್ಕಳಿಗೆ ಮಾತ್ರ ಕೊಡ್ಸಿ ಒಬ್ಬ ಮಗನಿಗೆ ಫಸ್ಟ್ ರ‌್ಯಾಂಕ್  ಬಂದಿದ್ರೂ ಕೊಡಿಸದೇ ಹೋದ್ರೇ ಹೆಂಗಾಗುತ್ತೆ ಹೇಳಿ..! ಮಹೇಶ್ ಕುಮಟಳ್ಳಿ ಕಥೆನೂ ಥೇಟು ಹಂಗೇ ಆಯ್ತು..! ಅತ್ತರೂ, ಗೋಗರೆದ್ರೂ, ಮುನಿಸಿಕೊಂಡ್ರೂ ಕೊನೆಗೆ ಬಿಜೆಪಿಗೆ ಶಾಲಿನಲ್ಲಿ ಕಲ್ಲು ಸುತ್ತಿ ಹೊಡೆದ್ರೂ ಕುಮಟಳ್ಳಿ ಮೇಲೆ ರಾಜಾಹುಲಿ ಕರುಣೆ ತೋರಲೇ ಇಲ್ಲ.

PAVITHRA EE NEWS ODLEBEDI IDU TAMASHEGAAGI 1

ಅತ್ತ ಮಿತ್ರಮಂಡಳಿಯ ಟೀಂ ನಾಯಕ ಸಾಹುಕಾರ್, “ಕೊಡ್ರೀ ಕೊಡ್ರಿ ಕುಮಟಳ್ಳಿ ಒಬ್ಬರು ಜಾಸ್ತಿ ಆಗ್ತಾರೇನ್ರಿ” ಅಂತಾ ಅರ್ಥವಾಗದ ಧ್ವನಿಯಲ್ಲಿ ಗುಟುರು ಹಾಕಿದ್ರೂ ನೋ ನೋ ಅಂತಾ ರಾಜಹುಲಿ ಹೈಕಮಾಂಡ್ ಹತ್ರ ಬೊಟ್ಟು ಮಾಡಿದ್ರು. ಇದ್ರಿಂದ ಕುಮಟಳ್ಳಿಗಿಂತ ಕೊಂಚ ಸಾಹುಕಾರ ರಮೇಶ್ ಜಾರಕಿಹೊಳಿ ಹೆಚ್ಚೇ ಮುನಿಸಿಕೊಂಡಂತೆ ಕಾಣುತ್ತಿದ್ರು. ಇದಪ್ಪ ತ್ಯಾಗ, ಎಲ್ಲರೂ ಅವ್ರವ್ರ ಪ್ರಮಾಣ ವಚನ ಸಂಭ್ರಮದಲ್ಲಿ ಖುಷಿ ಪಟ್ರೇ ಸಾಹುಕಾರ್ ಮಾತ್ರ ಬುಸುಗುಡುತ್ತಾ ಇದ್ದಿದ್ದು ನೋಡಿ `ನನಗಾಗಿ ಮಿಡಿದ ಮನ’ ಅಂತಾ ಕುಮಟಳ್ಳಿ ಕೊಂಚ ರಿಲ್ಯಾಕ್ಸ್ ಆಗಿದ್ರಂತೆ.

ಕುಮಟಳ್ಳಿಗೆ `ಬಾರಾ ಉಗ್ರ ಹೋರಾಟ ಮಾಡುವ, ಸಂಜೆ ಸರ್ಕಾರ ಉರುಳಿಸುವ’ ಅಂತಾ ಸರ್ಕಾರ ಉರುಳಿಸೋದ್ರಲ್ಲಿ ಹಳೆ ಅನುಭವ ಇದ್ದ ರಮೇಶ್, ನಡುರಾತ್ರಿ ಕುಮಟಳ್ಳಿ ಹೆಗ್ಲ ಮೇಲೆ ಕೈಹಾಕಿ ಭರವಸೆ ಕೊಟ್ಟಿದ್ರಂತೆ. ಆದ್ರೆ ಯಾವಾಗ ಖಾತೆ ಹಂಚಿಕೆ ಆಯ್ತೋ ಆಗ ಸಾಹುಕಾರ ಗುಟುರು ಕಡಿಮೆಯಾಗಿದೆ. ಹೋಗ್ಲಿ ಬಿಡ್ ನಮ್ಮೋರೆ ಎಲ್ಲಾ ಅಂತಾ ಕುಮಟಳ್ಳಿಗೆ ಹೇಳಿ ಫೋನ್ ಇಟ್ರಂತೆ.

ramesh jarakiholi 1

ಆಗ ಕುಮಟಳ್ಳಿಗೆ ಗೊತ್ತಾಗಿದ್ದು ಓಹೋ ಸಾಹುಕಾರನಿಗೆ ನಂಗೆ ಮಿನಿಸ್ಟ್ರುಗಿರಿ ಸಿಗದೇ ಇದ್ದಿದ್ದಕ್ಕೆ ಸಿಟ್ಟಿದ್ದಿದ್ದು ಅಲ್ಲಾ, ಅವರಿಷ್ಟದ ಖಾತೆಗೆ ಪಟ್ಟು ಹಿಡಿದು ಇನ್ನೇನು ಸಿಗಲ್ಲ ಅಂತಾ ಮುನಿಸು ತೋರಿಸಿದ್ರು. ಯಾವಾಗ ಡಿಕೆಶಿ ಖಾತೆ ಸಾಹುಕಾರಗೆ ಸಿಕ್ತು ರಮೇಶ್ ಮುಖ ಲಕ ಲಕ ಅಂತಿದೆ ಅಂತಾ ಕುಮಟಹಳ್ಳಿಗೆ ಅರ್ಥವಾಗಿದೆಯಂತೆ. ಯಾರಿಗೇಳೋಣ ನಮ್ ಪ್ರಾಬ್ಲುಂ ಅಂತಾ ಅವತ್ತು ಕೈ ಕೈ ಹಿಡಿದು ಜೊತೆಗೆ ಉಂಡು ತಿಂದು ಈಗ ಹಿಂಗೆ ನಡುನೀರಲ್ಲಿ ಕೈಕೊಟ್ರಲ್ಲಪ್ಪ ಅಂತಾ ಕುಮಟಳ್ಳಿ ಮಗುವಿನಂತೆ ಅತ್ತುಬಿಟ್ರಂತೆ. ನಿಮ್ಮ ಜೊತೆ ನಾನಿದ್ದೀನಿ ಅಂತಾ ಸೈನಿಕ, ಗೂಳಿ ಎಲ್ಲಾ ಕುಮಟಳ್ಳಿಗೆ ಕರ್ಚೀಫ್ ಕೊಟ್ರಂತೆ.

ಲಾಸ್ಟ್ ಕಿಕ್- ಮಿತ್ರಮಂಡಳಿಯಲ್ಲಿರೋರು ಯಾವಾಗ ಬೇಕಾದ್ರೂ ಮಿತ್ರರೂ ಆಗಬಹುದು, ಶತ್ರುಗಳಾಗಬಹುದು ಸಿದ್ದಣ್ಣ ಅಂತಾ ಕುಮಟಳ್ಳಿ ಕಮಲ ಹೂವನ್ನು ದೇವರಿಗಿಟ್ಟು ಗೋವಿಂದ ಗೋವಿಂದ ಅಂದ್ರಂತೆ.

Revanna Lemon

ಕೊರೋನಾ ಟೆನ್ಶನ್ ಬಿಟ್ಹಾಕಿ…! ನಿಂಬೆಹಣ್ಣು ಇಟ್ಕಳ್ಳಿ..! ಏಲಕ್ಕಿ ಹಾರನೂ ಇರಲಿ..!
`ಸರ್ವರೋಗಕ್ಕೂ ಸಾರಾಯಿ ಮದ್ದು’ ಅನ್ನೋ ತರ ನಮ್ ಹಾಸನದ ರೇವಣ್ಣೋರಿಗೆ ಎಲ್ಲಾ ಸಮಸ್ಯೆಗೂ ನಿಂಬೆಹಣ್ಣಿನಲ್ಲಿದೆ ಪರಿಹಾರ ಅನ್ನೋ ಗಟ್ಟಿ ನಂಬಿಕೆ. ಈಗ ಚೀನಾ ಕೊರೋನಾ ಭೀತಿಯಿಂದ ನಡುಗಿಹೋಗಿದೆ. ಭಾರತಕ್ಕೂ ಆತಂಕ ಇದೆ. ಈ ಮಧ್ಯೆ ರೇವಣ್ಣ ಕೊರೋನಾ ಕಾಯಿಲೆಗೆ ಔಷಧಿ ಕಂಡು ಹುಡುಕಿದ್ದಾರಂತೆ.

ಎರಡು ನಿಂಬೆಹಣ್ಣನ್ನು ಮೂಗಿನ ಹೊಳ್ಳೆಗೆ ಇಟ್ಕೊಂಡು ಆಗಾಗ ಮೂಸಿ ನೋಡಿದ್ರೆ ಸಾಕು, ಮಾಸ್ಕ್ ಗೀಸ್ಕ್ ಎಲ್ಲಾ ಹಾಕೋದೇ ಬೇಡ ನಿಂಬೆಹಣ್ಣಿನಲ್ಲಿ ರೋಗನಿರೋಧಕ ಶಕ್ತಿ ಐತೆ ಅಂತಾ ಹಾಸನದ ಮಂದಿಗೆಲ್ಲ ಟಾಂ ಟಾಂ ಮಾಡಿದ್ದಾರಂತೆ. ಅಲ್ಲದೇ ಚೀನಾಕ್ಕೆ ನಾನೇ ಚಪ್ಪಲಿ ಇಲ್ದ ಕಾಲಲ್ಲಿ ಹೋಗ್ ಬರ್ತೀನಿ. ಎಲ್ಡು ನಿಂಬೆಹಣ್ಣು, ಚಂದಗೆ ಪೋಣಿಸಿದ ಏಲಕ್ಕಿ ಹಾರ ಇಷ್ಟು ಹಾಕ್ಕೊಂಡ್ರೆ ಕೊರೋನಾ ಓಡ್ ಹೋಗುತ್ತೆ ಅಂತಾ ರೇವಣ್ಣ ಲುಂಗಿ ಸರಿಮಾಡ್ಕೊಂಡು ಹೇಳ್ಕೋತಾ ಓಡಾಡ್ತಿದ್ದಾರಂತೆ. ಈ ನಿಂಬೆಹಣ್ಣು ಚಮತ್ಕಾರ ಕೇಳಿದ ಹಾಸನದ ಜನ ಈವಯ್ಯ ನಿಜ ಹೇಳುತ್ತೀರೋದಾ ಅಂತಾ ಡಾಕ್ಟರ್ ಬಳಿ ಹೋಗಿ ಹೋಗಿ ರೇವಣ್ಣನ ಅವಿಷ್ಕಾರದ ಬಗ್ಗೆ ಪ್ರಶ್ನೆ ಇಡ್ತಿದ್ದಾರಂತೆ. ಡಾಕ್ಟರ್‌ಗಳು ತಲೆ ಚಚ್ಕೊಳ್ಳೋದು ಒಂದು ಬಾಕಿಯಂತೆ.

MYS REVANNA BALAGALU

ಲಾಸ್ಟ್ ಕಿಕ್ – ರೇವಣ್ಣ ಹೇಳ್ದಂಗೆ ಕೊರೋನಾ ಬಂದಾಗ ಮೂಗಿನ ಹೊಳ್ಳೆಗೆ ನಿಂಬೆಹಣ್ಣು ಇಟ್ಕೊಂಡ್ರೆ ಹಂಗೆ ಮೂಗಿಗೆ ಹತ್ತಿ ಇಟ್ಕೋಬೇಕಾಯ್ತದೆ ಅಂತಾ ಗುಸು ಗುಸು ಸುದ್ದಿಯಂತೆ.!

[ಸದಾ ಸೀರಿಯಸ್ ಆಗಿರುವ ಸುದ್ದಿಗಳನ್ನು ಓದಿ, ಓದಿ ನಿಮಗೂ ಬೇಜಾರಾಗಿರುತ್ತೆ. ಸೀರಿಯಸ್ ಓದಿನ ನಡುವೆಯೂ ಸ್ವಲ್ಪ ನವಿರಾದ ಹಾಸ್ಯವೂ ಇರಲಿ ಎಂಬ ಕಾರಣಕ್ಕೆ `ಈ ನ್ಯೂಸ್ ಓದ್ಲೇಬೇಡಿ. ಇದು ತಮಾಷೆಗಾಗಿ..!’ ಅಂಕಣ.]

TAGGED:Corona VirusHD Revannakannada newslemonMahesh Kumathalliramesh jarkiholiಎಚ್‍ಡಿ ರೇವಣ್ಣಕರ್ನಾಟಕಬೆಂಗಳೂರುಮಹೇಶ್ ಕುಮಟಳ್ಳಿರಮೇಶ್ ಜಾರಕಿಹೊಳಿರೇವಣ್ಣ
Share This Article
Facebook Whatsapp Whatsapp Telegram

Cinema news

Asha Bhosle 3
`ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest Main Post Top Stories
Ramya 2
ನಟಿ ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್‌ ಪ್ರಕರಣ – ಉಳಿದ 29 ಆರೋಪಿಗಳ ಬಲೆ ಬೀಸಿದ ಸಿಸಿಬಿ ಪೊಲೀಸ್‌
Bengaluru City Cinema Crime Districts Karnataka Latest Main Post
Asha Bhosle 2
10ನೇ ವಯಸ್ಸಿನಲ್ಲಿ ಶುರುವಾದ ಗಾಯನದ ಬದುಕು – `ಸ್ವರʼ ನಿಲ್ಲಿಸಿದ ಆಶಾ ಭೋಸ್ಲೆ
Cinema Latest Main Post National
Actor Harish
ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ – ಚಿತ್ರನಟ ಹರೀಶ್ ಸ್ಥಳದಲ್ಲೇ ಸಾವು
Cinema Crime Karnataka Kodagu Latest Sandalwood Top Stories

You Might Also Like

g.parameshwara 2
Bengaluru City

ಹಿರಿಯ ಶಾಸಕರು ಬಹಿರಂಗವಾಗಿ ಸಚಿವ ಸ್ಥಾನ ಕೇಳೋದ್ರಲ್ಲಿ ತಪ್ಪಿಲ್ಲ – ಪರಮೇಶ್ವರ್

Public TV
By Public TV
12 minutes ago
Noida Protest 2
Latest

ವೇತನ ಹೆಚ್ಚಳಕ್ಕೆ ಆಗ್ರಹಿಸಿ ನಡೆಸುತ್ತಿದ್ದ ನೌಕರರ ಪ್ರತಿಭಟನೆ ವೇಳೆ ಹಿಂಸಾಚಾರ – ಪೊಲೀಸರ ವಾಹನಗಳಿಗೆ ಬೆಂಕಿ

Public TV
By Public TV
12 minutes ago
jigani techie marries twice and engaged to another woman case filed after first wife exposes scams
Bengaluru Rural

ಇಬ್ಬರ ಜೊತೆ ಮದುವೆ, ಒಬ್ಬಳ ಜೊತೆ ಎಂಗೇಜ್ಮೆಂಟ್ – ಸಿಕ್ಕಿಬಿದ್ದ ಚಪಲಚನ್ನಿಗರಾಯನಿಗೆ ಪೆಟ್ಟೋ ಪೆಟ್ಟು!

Public TV
By Public TV
21 minutes ago
Hardik Pandya 1
Cricket

ಯಾವುದೂ ವರ್ಕೌಟ್ ಆಗ್ತಿಲ್ಲ – ಹ್ಯಾಟ್ರಿಕ್ ಸೋಲಿನ ಬಳಿಕ ಹೊಸ ಪ್ಲ್ಯಾನ್‌ ಬಗ್ಗೆ ಹಾರ್ದಿಕ್ ಮಾತು

Public TV
By Public TV
40 minutes ago
H D Kumaraswamy 1
Bengaluru City

ವಿಧಾನಸೌಧಕ್ಕೆ ಮತ್ತೆ ಬರೋದು ‌ಭಗವಂತನ ಇಚ್ಛೆ, ಜನರ ಆಶೀರ್ವಾದ: ಹೆಚ್‌ಡಿಕೆ

Public TV
By Public TV
55 minutes ago
CM Siddaramaiah
Chikkamagaluru

ಸಿದ್ದರಾಮಯ್ಯ ಸೇತುವೆ ಉದ್ಘಾಟಿಸಿದ ಸಿಎಂ – 30 ಕಿಮೀ ಸುತ್ತಾಟ ಈಗ 3 ಕಿಮೀಗೆ ಇಳಿಕೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?