ಬೆಂಗಳೂರು: ಚುನಾವಣೆಯ ವೇಳೆ ಮನೆ ಬಾಗಿಲಿಗೆ ಬರುವ ಜನಪ್ರತಿನಿಧಿಗಳು ಗೆದ್ದ ನಂತರ ಜನರನ್ನೇ ಮರೆತುಬಿಡ್ತಾರೆ ಎಂಬ ಮಾತನ್ನು ಕೇಳುತ್ತಾ ಇರುತ್ತವೆ. ಇದಕ್ಕೆ ಪೂರಕವಾಗಿ ಸಚಿವ ಕೆ.ಜೆ.ಜಾಜ್ ಅವರ ಬಳಿ ಬಾಣಂತಿ ಮನೆಯ ಬಾಗಿಲಿಗೆ ಹೋಗಿ ಅಂಗಲಾಚಿದರೂ, ಮಾನವಿಯತೆಗಾದ್ರೂ ಮಹಿಳೆಯನ್ನು ಮಾತನಾಡಿಸುವ ಪ್ರಯತ್ನ ಮಾಡಿಲ್ಲ.
ಬಾಣಸವಾಡಿ ಬಳಿಯ ಮಾರುತಿ ಸೇವಾನಗರದಲ್ಲಿ ಕಟ್ಟಡವೊಂದನ್ನು ನೆಲಸಮ ಮಾಡಲಾಗಿದೆ. ಪರಿಣಾಮ ಐದಾರು ಕುಟುಂಬದ ಸುಮಾರು 20ಕ್ಕೂ ಹೆಚ್ಚು ಮಂದಿ ಈಗ ಬೀದಿಗೆ ಬಿದ್ದಿದ್ದಾರೆ. ಈ ಜಾಗ ನಮ್ಮ ತಾತನಿಗೆ ಸೇರಿದ್ದು ಎಂದು ಉಳ್ಳವರೊಬ್ಬರು ಪೊಲೀಸರು ಹಾಗೂ ಸುಮಾರು 20ಕ್ಕೂ ಯುವಕರನ್ನು ಕರೆತಂದು ಈ ಮನೆಗಳನ್ನ ಕೆಡವಿದ್ದಾರೆ.
ಕಟ್ಟಡದ ನಿವಾಸಿಗಳು ಇಲ್ಲಿ ಅಪಾರ್ಟ್ ಮೆಂಟ್ ಕಟ್ಟಲು ಪ್ರಯತ್ನ ಮಾಡಲಾಗುತ್ತಿದೆ. ವಾಸವಿದ್ದ ಕಟ್ಟಡವನ್ನು ಬೀಳಿಸಿ ನಮ್ಮನ್ನು ಬೀದಿಗೆ ತಂದಿದ್ದಾರೆ. ಇತ್ತ ಸಚಿವರ ಬಳಿ ಹೋದರೂ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ. ಇಂತಹ ಜನಪ್ರತಿನಿಧಿಗಳು ನಮಗೆ ಬೇಕಿತ್ತ ಅಂತ ನೊಂದವರು ತಮಗೆ ತಾವೇ ಶಪಿಸಿಕೊಳ್ಳುತ್ತಿದ್ದಾರೆ. ಆದರೆ ಸ್ಥಳೀಯ ಜನರಿಗೆ ತಮ್ಮ ಕಟ್ಟಡವನ್ನು ಯಾರು ಬೀಳಿಸಿದ್ದಾರೆ ಎಂಬುದೇ ಗೊತ್ತಿಲ್ಲ.