ಬೆಂಗಳೂರು: ಖಾಸಗಿ ಹೋಟೆಲ್ನ (Hotel) 19ನೇ ಫ್ಲೋರ್ನಿಂದ ಬಿದ್ದು ಯುವಕ ಆತ್ಮಹತ್ಯೆ (Suicide) ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಸಾವಿನ ದಾರಿಯ ಅಸಲಿ ಕಾರಣ ಬಯಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಶರಣ್ ವೃತ್ತಿಯಲ್ಲಿ ಎಂಜಿನಿಯರ್ (Engineer) ಆಗಿದ್ದು, ತಿಂಗಳಿಗೆ 4ರಿಂದ 5 ಲಕ್ಷ ರೂ. ಸಂಬಳ ಪಡೆಯುತ್ತಿದ್ದ. ಐಷಾರಾಮಿ ಜೀವನವಿದ್ದರೂ ಶರಣ್ಗೆ ಮಾನಸಿಕ ಖಿನ್ನತೆ (Depression) ಕಾಡಿತ್ತು. ಶರಣ್ ಬೆಂಗಳೂರಿನ (Bengaluru) ಕೊಡಿಗೆಹಳ್ಳಿಯ ಫ್ಲಾಟ್ನಲ್ಲಿ ಉಳಿದುಕೊಂಡಿದ್ದ. ಮೃತ ಶರಣ್ ತಂದೆ ಸೌದಿಯ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೋಷಕರಿಗೆ ಒಬ್ಬನೇ ಮಗನಾಗಿದ್ದ ಶರಣ್ಗೆ ಮಾನಸಿಕ ಖಿನ್ನತೆ ಕಾಡಿದ್ದರಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಅಂಶ ತನಿಖೆ ವೇಳೆ ತಿಳಿದಿದೆ. ಇದನ್ನೂ ಓದಿ: ಇಂದಿರಾ ಗಾಂಧಿ ಹಂತಕನ ಪುತ್ರ ಪಂಜಾಬ್ನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ
ಶರಣ್ ಸಾಯುವ ಮುನ್ನ ಹೋಟೆಲ್ ಬಿಲ್ ಕ್ಲಿಯರ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಲ್ಲದೇ ಈ ಹಿಂದೆ ಮೂರು ಬಾರಿ ಇದೇ ಹೋಟೆಲ್ನಲ್ಲಿ ಶರಣ್ ತಂಗಿದ್ದ. ಅದೇ ರೀತಿ ಏ.6 ರಂದು ಸಹ ಬಂದು ಚೆಕ್ಇನ್ ಮಾಡಿದ್ದ. ಏ.7 ರಂದು ಹಣ ಪಾವತಿಸಿದ್ದ ಶರಣ್ ಮತ್ತೊಂದು ದಿನಕ್ಕೆ ರೂಂ ಕೇಳಿದ್ದ. ಬಳಿಕ ಆ ರೂಂನ ಹಣವನ್ನು ಸಹ ಮುಂಗಡವಾಗಿ ಪಾವತಿ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯ ಹೈಗ್ರೌಂಡ್ ಪೊಲೀಸರು ಕುಟುಂಬಸ್ಥರಿಂದ ಮತ್ತಷ್ಟು ಮಾಹಿತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಚುನಾವಣಾಧಿಕಾರಿಗೆ ಬಿಜೆಪಿ ದೂರು
ಮಾದವನಗರದಲ್ಲಿರುವ ಖಾಸಗಿ ಹೋಟೆಲ್ವೊಂದರಲ್ಲಿ ಶರಣ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ ಬ್ಯುಸಿನೆಸ್ ವಿಚಾರವಾಗಿ ಬಂದಿರುವುದಾಗಿ ರಿಸೆಪ್ಷನ್ ಬುಕ್ನಲ್ಲಿ ಎಂಟ್ರಿ ಮಾಡಿದ್ದ. ಈ ಹಿಂದೆ ಕೂಡ ಈತ ಹೋಟೆಲ್ಗೆ ಬಂದು ಉಳಿದುಕೊಂಡಿದ್ದ. ಈ ಬಾರಿ ಎರಡು ದಿನ ಉಳಿಯೋದಾಗಿ ಹೋಟೆಲ್ ಸಿಬ್ಬಂದಿಗೆ ಹೇಳಿದ ಈತ ಸೋಮವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ 19ನೇ ಫ್ಲೋರ್ನ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಇಂದಿರಾ ಗಾಂಧಿ ಹಂತಕನ ಪುತ್ರ ಪಂಜಾಬ್ನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ