ಭರವಸೆ ಕೊಟ್ಟವರೆಲ್ಲ ಕೈ ಎತ್ತಿದ್ರು – ಕುಕ್ಕರ್ ಬಾಂಬ್ ಸ್ಫೋಟದ ಸಂತ್ರಸ್ತ ಆಟೋ ಚಾಲಕ ಅಳಲು

Public TV
2 Min Read
mangaluru cooker blast case auto driver

ಮಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಆಟೋ ಚಾಲಕ ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ನಡುವೆ ಆಟೋ ಚಾಲಕ ತನ್ನ ನೋವನ್ನು‌ ತೋಡಿಕೊಂಡಿದ್ದು, ಜಿಲ್ಲಾಡಳಿತ ಹಾಗೂ ರಾಜಕಾರಣಿಗಳು ತನ್ನನ್ನು ಕಡೆಗಣಿಸಿದ್ದಾರೆಂದು ಹೇಳಿಕೊಂಡಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ಎಚ್ಚೆತ್ತು ಅವರನ್ನು ಭೇಟಿಯಾದ ಸ್ಥಳೀಯ ಶಾಸಕ ಮತ್ತೆ ಭರವಸೆ ನೀಡಿದ್ದಾರೆ.

ಕಳೆದ ನ. 19ರಂದು ನಡೆದ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಕುಕ್ಕರ್ ಬಾಂಬ್ ಸ್ಫೋಟ ಮಾಡಿದ್ದ ಉಗ್ರ ಶಾರೀಕ್ ಈಗಾಗಲೇ ಚೇತರಿಸಿಕೊಂಡು‌ ಎನ್‌ಐಎ ಅಧಿಕಾರಿಗಳ ವಶದಲ್ಲಿದ್ದಾನೆ. ಅಂದು ಶಾರೀಕ್‌ನನ್ನು ತನ್ನ ಬಾಡಿಗೆ ಆಟೋದಲ್ಲಿ‌ ಕರೆ ತಂದಿದ್ದ ಆಟೋ‌ ಚಾಲಕ ಪುರುಷೋತ್ತಮ ಪೂಜಾರಿ‌ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸುದೀರ್ಘ ಎರಡು ತಿಂಗಳ‌ ಕಾಲ ಆಸ್ಪತ್ರೆಯಲ್ಲಿದ್ದ ಪುರುಷೋತ್ತಮ ಪೂಜಾರಿ ಇಂದು ಡಿಸ್ಚಾರ್ಜ್ ಆಗಿ‌ ಮನೆಗೆ ಬಂದಿದ್ದಾರೆ. ಇನ್ನೂ ಒಂದು ತಿಂಗಳ ಕಾಲ ಮನೆಯಲ್ಲೇ ಇದ್ದು 10‌ ದಿನಕ್ಕೊಮ್ಮೆ ಆಸ್ಪತ್ರೆಗೆ ಬರಲು ವೈದ್ಯರು‌ ಸೂಚಿಸಿದ್ದಾರೆ. ಈ‌ ನಡುವೆ ತನಗಾದ ಅಂದಿನ ನೋವು‌ ಹಾಗೂ ಆ ಬಳಿಕ ಚಿಕಿತ್ಸೆಗೆ ಪಟ್ಟ ಕಷ್ಟ ಜಿಲ್ಲಾಡಳಿತ ಹಾಗೂ ರಾಜಕಾರಣಿಗಳು ನೀಡಿದ ಭರವಸೆಯಿಂದ ಬೇಸತ್ತು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬಾಂಬ್ ಸ್ಫೋಟ ಆದ ಬಳಿಕ ರಾಜ್ಯ ಸರ್ಕಾರ, ಜಿಲ್ಲಾಡಳಿತ, ರಾಜಕಾರಣಿಗಳು ಎಲ್ಲರೂ ಚಿಕಿತ್ಸೆಯ ವೆಚ್ಚ ಭರಿಸುವ ಭರವಸೆ ನೀಡಿದ್ದರು. ಆದರೆ ತನ್ನ ಮಗಳ ಇಎಸ್‌ಐನಿಂದಲೇ ಈವರೆಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಹೊರಬಂದಿದ್ದಾರೆ. ಭರವಸೆ ನೀಡಿದವರೆಲ್ಲ ಮತ್ತೆ ಆ ಕಡೆ ತಿರುಗಿಯೂ ನೋಡಿಲ್ಲ. ಇದೀಗ ಪುರುಷೋತ್ತಮ ಪೂಜಾರಿ ತನ್ನ ಅಳಲು ತೋಡಿಕೊಂಡ ಬಳಿಕ ಎಚ್ಚೆತ್ತುಕೊಂಡ ಸ್ಥಳೀಯ ಬಿಜೆಪಿ‌ ಶಾಸಕ‌ ವೇದವ್ಯಾಸ್ ಕಾಮತ್ ಧಾವಿಸಿ ಅವರ ಮನೆಗೆ ಬಂದು‌ ವಿಚಾರಿಸಿದ್ದಾರೆ. ಚಿಕಿತ್ಸೆ ವೆಚ್ಚ ಹಾಗೂ ಹೊಸ ಆಟೋವೊಂದನ್ನು ತನ್ನ ಖರ್ಚಿನಲ್ಲೇ ನೀಡುವುದಾಗಿ ಜೊತೆಗೆ ಬಿಜೆಪಿಯಿಂದ 5 ಲಕ್ಷ ಪರಿಹಾರ ಧನ ನೀಡುವ ಭರವಸೆಯನ್ನು‌ ನೀಡಿದ್ದಾರೆ. ಇದನ್ನೂ ಓದಿ: ಮತ್ತಷ್ಟು ಉಚಿತ ಭಾಗ್ಯಗಳಿಗೆ ಮೊರೆ ಹೋದ ಕಾಂಗ್ರೆಸ್‌ – ದುಡ್ಡು ಹೊಂದಿಸಲು ಸಾಧ್ಯವಾಗುತ್ತಾ?

mangaluru cooker blast case

ಪುರುಷೋತ್ತಮ ಪೂಜಾರಿ ಕಡು ಬಡತನದಲ್ಲೇ ಆಟೋ ಚಾಲಕರಾಗಿದ್ದು, ಇಬ್ಬರು ಹೆಣ್ಣು ಮಕ್ಕಳ ಸಹಿತ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಇದೀಗ ಆಟೋ ಇಲ್ಲದಂತಾಗಿದ್ದು, ಸದ್ಯ ದುಡಿಯದ ಸ್ಥಿತಿಯಲ್ಲೂ ಇಲ್ಲ. ಈ‌ ನಡುವೆ ಮೇ 3ರಂದು‌ ಮಗಳ ಮದುವೆಯನ್ನು ಈ ಹಿಂದೆಯೇ ನಿಗದಿ‌ ಮಾಡಿದ್ದರು. ಇವರ ಮನೆ ಪರಿಸ್ಥಿತಿಯನ್ನು ನೋಡಿದ್ದ ಗುರು ಬೆಳದಿಂಗಳು‌ ಅನ್ನೋ ಸಂಸ್ಥೆ‌ ಮನೆಯ ದುರಸ್ತಿ ನಡೆಸುತ್ತಿದೆ. ಹೀಗಾಗಿ ಸದ್ಯ ಸ್ನೇಹಿತರ ಬಾಡಿಗೆ ಮನೆಯಲ್ಲಿ ಇರೋ‌ ಈ‌ ಕುಟುಂಬ ಮುಂದೇನು‌ ಅನ್ನೋ ಆತಂಕದಲ್ಲೇ ದಿನ‌ ಕಳೆಯುತ್ತಿದ್ದಾರೆ. ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆ ವರೆಗೆ BJP ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ.ನಡ್ಡಾ ಮುಂದುವರಿಕೆ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *