ಬೆಂಗಳೂರು: ಈ ಭೂಮಿಯಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಅದೇ ರೀತಿ ಪ್ರಾಣಿಗಳಿಗೂ ಸಹ ಬದುಕುವ ಹಕ್ಕಿದೆ. ಆದರೇ ಬೆಂಗಳೂರಿನ ಜನ ಬೀದಿ ನಾಯಿಗಳನ್ನು ಕೊಲ್ಲುವ ಮಟ್ಟಕ್ಕೆ ಹೋಗ್ತಿದ್ದಾರೆ. ಅತಂಹ ಅನೇಕ ಘಟನೆಗಳು ನಡೆದಿವೆ. ಈಗ ಬೆಂಗಳೂರಿನ ಕೊಟ್ಟಿಗೆ ಪಾಳ್ಯದ ಬಳಿ ಇರುವ ಟೆಲಿಕಾಮ್ ಲೇಔಟ್ನಲ್ಲಿ ಯುವಕನೊಬ್ಬ ಕಳೆದ ವಾರ ಬೀದಿ ನಾಯಿಯೊಂದನ್ನು ಅಟ್ಟಾಡಿಸಿಕೊಂಡು ದೊಣ್ಣೆಯಿಂದ ಹೊಡೆದು ಎರಡನೇ ಪ್ಲೋರ್ನಿಂದ ಬಿಸಾಕಿದ್ದಾನೆ.
ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಪ್ರಾಣಿ ದಯಾ ಸಂಘದವರು ದೂರು ನೀಡಲು ಹೋದಾಗ ಪೊಲೀಸರು ಮೊದಲಿಗೆ ದೂರು ದಾಖಲಿಸಲು ಹಿಂದೇಟು ಹಾಕಿದ್ರು. ಬಳಿಕ ದೂರು ದಾಖಲಿಸಿಕೊಂಡಿದ್ದಾರೆ. ನಂತರ ನಾಯಿ ಮೇಲೆ ಹಲ್ಲೆ ಮಾಡಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೇ ಆ ನಾಯಿ ಏನಾಗಿದೆ ಎಂಬುದು ತಿಳಿದುಬಂದಿಲ್ಲ. ಇದನ್ನೂ ಓದಿ: ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಳ್ಳೋದಾದ್ರೆ ನಿಮ್ಮ ಅಭ್ಯರ್ಥಿಯನ್ನ ಕಣದಿಂದ ಹಿಂದೆ ಸರಿಸಿ: JDSಗೆ ಸಿದ್ದು ಸವಾಲ್
ಬೀದಿ ನಾಯಿ ಮೇಲೆ ಹೀಗೆ ಹಲ್ಲೆ ಮಾಡಿ ಪ್ರಾಣ ತಗಿಯೋದು ಕ್ರಿಮಿನಲ್ ಅಪರಾಧ ಎಂದು ಕಾನೂನಿದೆ. ಜನ ಅದನ್ನು ಪಾಲಿಸಬೇಕು. ಪ್ರಾಣಿಗಳನ್ನು ಮಾನವೀಯತೆಯಿಂದ ನೋಡಬೇಕು ಎಂದು ಪ್ರಾಣಿ ದಯಾ ಸಂಘದ ಸದಸ್ಯರು ಮನವಿ ಮಾಡಿದ್ದಾರೆ.
ಒಂದು ಜೀವವನ್ನು ತೆಗೆಯುವ ಹಕ್ಕು ಯಾರಿಗೂ ಇಲ್ಲ. ಪರಿಸರದಲ್ಲಿ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ನಿಯತ್ತಿನ ಪ್ರಾಣಿ ಅಂತಲೇ ಕರೆಸಿಕೊಳ್ಳೋ ನಾಯಿಯನ್ನ ಯಾಕೇ ಹೀಗೆ ಮಾಡ್ತಾರೆ. ಇನ್ಯಾರೂ ಈ ರೀತಿ ಮಾಡಬಾರದು ಅಂತಹ ಶಿಕ್ಷೆಯನ್ನ ಕಾನೂನು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಧೀಮಂತ ಜನ ನಾಯಕ: ಪ್ರಚಾರ ಸಮಯದಲ್ಲಿ ತಂದೆ ಸಾಧನೆಯನ್ನು ಗುಣಗಾನ ಮಾಡಿದ ವಿಜಯೇಂದ್ರ