ಬೆಂಗಳೂರು: ಕೊಂಚ ದಿನ ಸೈಲೆಂಟ್ ಆಗಿ ಕಣ್ಮರೆಯಾಗಿದ್ದ ಚಿರತೆ (Leopard) ಈಗ ಬೆಂಗಳೂರಿನ (Bengaluru) ಹೊಸ ಏರಿಯಾದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.
ರಸ್ತೆಯಲ್ಲಿ ಬೈಕಿನಲ್ಲಿ ಹೋಗುವಾಗ ಅಡ್ಡಗಟ್ಟುತ್ತಿರುವ ಚಿರತೆ ಹಾಗೂ ಮರಿಗಳನ್ನು ನೋಡಿ ಜನ ಥಂಡಾ ಹೊಡೆದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬೃಹತ್ ನಕಲಿ ನೋಟು ಜಾಲ ಪತ್ತೆ – 1.30 ಕೋಟಿ ಜಪ್ತಿ
ಕಳೆದ 5 ದಿನಗಳಿಂದ ನಾಗರಬಾವಿ (Nagarbhavi) ಸುತ್ತಾಮುತ್ತಾ ಕಾಣಿಸಿಕೊಳ್ಳುತ್ತಿರುವ ಚಿರತೆಯಿಂದಾಗಿ ಜನ ಹೊರಗಡೆ ಬರಲು ಹೆದರುತ್ತಿದ್ದಾರೆ. ಕಳೆದ ಮೂರು ದಿನದ ರಾತ್ರಿ ಬೈಕ್ ನಲ್ಲಿ ಬರುತ್ತಿರುವಾಗ ಚಿರತೆ ಕಂಡು ಬೈಕ್ ತಿರುಗಿಸಿ ಬೈಕ್ ಸವಾರ ಹಿಂದಕ್ಕೆ ಮರಳಿದ್ದಾರೆ.
ನಾಗರಬಾವಿಯಿಂದ ಆರು ಕಿಮಿ ದೂರದಲ್ಲಿ ರಸ್ತೆ, ಮನೆಯ ಭಾಗಕ್ಕೆ ಚಿರತೆ ಪ್ರವೇಶ ಕೊಡುತ್ತಿದೆ. ಚಿರತೆ ಹೆಜ್ಜೆಯ ಜಾಡು ಸಿಸಿಟಿವಿಯಲ್ಲಿ ಪತ್ತೆಯಾಗಿದೆ.
ಈಗಾಗಲೇ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ, ಪರಿಶೀಲನೆಯನ್ನು ಮಾಡಿದ್ದು ಪಂಚಾಯತ್ ಸಿಬ್ಬಂದಿ ಈಗ ಜನರಿಗೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k