ರಾಷ್ಟ್ರ ಪ್ರಶಸ್ತಿ ವಿಜೇತ ನಟ ಧನುಷ್ (Dhanush) ಒಂದರ ಮೇಲೊಂದು ಅಪರೂಪದ ಸಿನಿಮಾ ಕೈಗೆತ್ತಿಕೊಳ್ಳುತ್ತಿದ್ದಾರೆ. ವಿಭಿನ್ನ ಪಾತ್ರ, ಹೊಸತನದ ಕಥೆಯ ಜೊತೆಗೆ ಪ್ರತಿಭಾವಂತ ನಿರ್ದೇಶಕರಿಗೆ ಕಾಲ್ ಶೀಟ್ ನೀಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಅವರ ನಟನೆಯ ಚಿತ್ರಗಳು ಬಾಕ್ಸ್ ಆಫೀಸ್ ತುಂಬುತ್ತಿವೆ. ಅಲ್ಲದೇ, ವಿಮರ್ಶೆಕರ ಮೆಚ್ಚುಗೆಯನ್ನೂ ಪಡೆಯುತ್ತಿವೆ.
- Advertisement 2
ಈ ಹಿಂದೆ ಧನುಷ್ ಮತ್ತು ನಿರ್ದೇಶಕ ಮಾರಿ ಸೆಲ್ವರಾಜ್ (Mari Selvaraj) ‘ಕರ್ಣನ್’ (Karnan) ಹೆಸರಿನಲ್ಲಿ ಸಿನಿಮಾ ಮಾಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅಂದಿನಿಂದಲೇ ಮತ್ತೆ ಈ ಜೋಡಿ ಸಿನಿಮಾ ಮಾಡಬೇಕು ಎನ್ನುವ ಕೂಗು ತಮಿಳು ಚಿತ್ರೋದ್ಯಮದಲ್ಲಿ ಕೇಳಿ ಬಂದಿತ್ತು. ಆದರೆ, ಧನುಷ್ ಬೇರೆ ನಿರ್ದೇಶಕರಿಗೆ ಕಾಲ್ ಶೀಟ್ ನೀಡಿದ್ದರು. ಇದೀಗ ಮತ್ತೆ ಮಾರಿ ಜೊತೆ ಕೆಲಸ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್ಗೆ ಬೆದರಿಕೆ ಪತ್ರ ಪ್ರಕರಣದಲ್ಲಿ ಹೊಸ ತಿರುವು
- Advertisement 3
- Advertisement 4
ಈ ಕುರಿತು ಟ್ವೀಟ್ ಮಾಡಿರುವ ಧನುಷ್, ‘ಹಲವು ಕಾರಣಗಳಿಂದಾಗಿ ಈ ಸಿನಿಮಾ ವಿಶೇಷವಾಗಿದೆ ಮತ್ತು ಪ್ರತಿಷ್ಠೆಯಿಂದ ಕೂಡಿರುತ್ತದೆ. ಓಂ ನಮಃ ಶಿವಾಯ’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮಾರಿ ಸೆಲ್ವರಾಜ್ ಜೊತೆ ಇರುವ ಫೋಟೋವನ್ನೂ ಧನುಷ್ ಹಂಚಿಕೊಂಡಿದ್ದಾರೆ. ಇದು ಧನುಷ್ ನಿರ್ಮಾಣದ 15ನೇ ಚಿತ್ರವಾಗಿದ್ದು, ತಮ್ಮದೇ ಬ್ಯಾನರ್ ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದಾಗಿತೂ ಹಂಚಿಕೊಂಡಿದ್ದಾರೆ.
ಧನುಷ್ ಸಿನಿಮಾಗಳು ಕೇವಲ ಬಾಕ್ಸ್ ಆಫೀಸ್ ಮಾತ್ರ ತುಂಬಿಸುತ್ತಿಲ್ಲ. ಸಮಾಜಕ್ಕೆ ಒಂದೊಳ್ಳೆ ಸಂದೇಶವನ್ನೂ ನೀಡುತ್ತಿವೆ. ಇವರ ಬ್ಯಾನರ್ ನಿಂದ ಬಂದ ಬಹುತೇಕ ಚಿತ್ರಗಳು ಉತ್ತಮ ಕಥೆಯನ್ನೇ ಹೊತ್ತು ತಂದಿವೆ. ಜೊತೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆದಿವೆ.