ಚಿಕ್ಕೋಡಿ/ಬೆಳಗಾವಿ: ಮೂವರು ವಯೋವೃದ್ಧೆಯರು ಸಾವಿನ ನಂತರ ತಮ್ಮ ದೇಹವನ್ನು ದಾನ ಮಾಡಲು ಬಯಸಿದ್ದು, ತಮ್ಮ ಸ್ವ-ಇಚ್ಛೆಯಿಂದ ಒಪ್ಪಿಗೆ ಪತ್ರ ಬರೆದುಕೊಟ್ಟು ಸಾರ್ಥಕತೆ ಮೆರೆದಿದ್ದಾರೆ.
ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಹರಿನಗರದ ನಿವಾಸಿಗಳಾದ ಮಹಾದೇವಿ (68), ಶಾಂತಾ (74) ಮತ್ತು ಬಸ್ಸವ್ವ (70) ಮೂವರು ತಮ್ಮ ಸಾವಿನ ಬಳಿಕ ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ದೇಹದಾನ ಮಾಡಿರುವುದಾಗಿ ತಿಳಿಸಿದ್ದಾರೆ. ಇವರು ಬೆಳಗಾವಿಯ ಜವಾಹರಲಾಲ್ ನೆಹರು ಮೆಡಿಕಲ್ ಕಾಲೇಜಿಗೆ ತಮ್ಮ ಸಾವಿನ ನಂತರ ದೇಹದಾನ ಮಾಡುವುದಾಗಿ ತಿಳಿಸಿದ್ದಾರೆ.
- Advertisement 2
- Advertisement 3
ಮಹಾದೇವಿ ಮತ್ತು ಶಾಂತಾ ಸಹೋದರಿಯರಾಗಿದ್ದು, ಇವರ ಜೊತೆಗೆ ಪಕ್ಕದ ಮನೆಯ ಬಸ್ಸವ್ವ ಕೂಡ ದೇಹದಾನ ಮಾಡಿದ್ದಾರೆ. ಮನುಷ್ಯರಾದವರು ಸಾವಿನ ನಂತರವೂ ಇನ್ನೊಬ್ಬರ ಜೀವನದಲ್ಲಿ ಬೆಳಕು ತರಬೇಕೆಂದರೆ ದೇಹ ಮತ್ತು ಅಂಗಾಂಗ ದಾನ ಬಹುಮುಖ್ಯ. ಕಣ್ಣು, ಕಿಡ್ನಿ, ಲಿವರ್, ಹೃದಯ, ಚರ್ಮ ಏನು ಬೇಕಾದರೂ ದಾನ ಮಾಡಬಹುದು. ಜನರು ತಪ್ಪು ತಿಳಿವಳಿಕೆ ಬಿಟ್ಟು ದೇಹ ಮತ್ತು ಅಂಗಾಂಗ ದಾನಕ್ಕೆ ಮುಂದಾಗಬೇಕೆಂದು ವೈದ್ಯರಾದ ಡಾ.ದಯಾನಂದ ನೂಲಿ ಜನರಲ್ಲಿ ಜಾಗೃತಿ ಮೂಡಿಸಿದರು.
- Advertisement 4
ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ನಾವು ಮೂವರು ಗೆಳತಿಯರು ತಮ್ಮ ದೇಹವನ್ನು ಸಾವಿನ ಬಳಿಕ ದಾನ ಮಾಡಿರುವುದಾಗಿ ಬಸ್ಸವ್ವ ತಿಳಿಸಿದರು.