ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಅರಣ್ಯ ಪ್ರದೇಶದ ಮಧ್ಯದಲ್ಲಿಯೇ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ. 2007ರಲ್ಲಿ ಕಸ ಡಂಪ್ ಮಾಡೋದಕ್ಕೆ ಅಂತಾ ತಮ್ಮನಾಯಕನಹಳ್ಳಿಯಲ್ಲಿ ಸರ್ಕಾರ ಸುಮಾರು ಎರಡು ಎಕರೆಯಷ್ಟು ಜಾಗವನ್ನು ಮಂಜೂರು ಮಾಡಿತ್ತು. ಇದು ಅರಣ್ಯ ಪ್ರದೇಶವಾಗಿದ್ದು, ಇಲ್ಲಿ ಕಸ ಡಂಪ್ ಮಾಡೋದಕ್ಕೆ ಸಾಧ್ಯವಿಲ್ಲ ಎಂದು ಅರಣ್ಯ ಇಲಾಖೆ ವಿರೋಧ ವ್ಯಕ್ತಪಡಿಸಿತ್ತು.
ಸದ್ಯ ಈ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತದೆ. ಡೈನಾಮೇಟ್ ಸಿಡಿಸಿಕಲ್ಲು ಪುಡಿ ಮಾಡೋದರಿಂದ ಅರಣ್ಯದಲ್ಲಿರುವ ಪ್ರಾಣಿ ಪಕ್ಷಿಗಳು ಸ್ಫೋಟಕ ಸದ್ದಿಗೆ ನಡುಗಿ ಹೋಗಿವೆ. ಬಿಬಿಎಂಪಿ ಜಾಗದಲ್ಲಿ ರಾಜಾರೋಷವಾಗಿ ಕಲ್ಲುಗಣಿಗಾರಿಕೆ ನಡೆಸಲು ಅಧಿಕಾರಿಗಳೇ ಶ್ರೀರಕ್ಷೆ ನೀಡಿದ್ದಾರೆ. ಪ್ರಭಾವಿ ರಾಜಕೀಯ ನಾಯಕರು ಈ ಕಲ್ಲುಗಣಿಗಾರಿಕೆ ರೂವಾರಿ ಅನ್ನೋದು ಪರಿಸರವಾದಿಗಳು ಆರೋಪಿಸುತ್ತಿದ್ದಾರೆ.
2007ರಲ್ಲಿ ಕಸ ಡಂಪಿಂಗ್ ಮಾಡೋದಕ್ಕೆ ಬಿಬಿಎಂಪಿ ಆದೇಶ ನೀಡಿತ್ತು. ಅರಣ್ಯ ಪ್ರದೇಶ ಆಗಿರೋದ್ರಿಂದ ಕಸ ಡಂಪ್ ಮಾಡಲು ಸಾಧ್ಯವಾಗಲಿಲ್ಲ. ಕೆಲವು ದಿನಗಳಿಂದ ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಯಾರು ಅನುಮತಿ ನೀಡಿದ್ರೂ ಎಂಬುವುದು ಗೊತ್ತಾಗುತ್ತಿಲ್ಲ. ಈ ಸಂಬಂಧ ಕೇಂದ್ರ ಪರಿಸರ ದೂರು ಸಲ್ಲಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪರಿಸರವಾದಿ ವಿಜಯ್ ನಿಶಾಂತ್ ದೂರಿದ್ದಾರೆ.