ಎಚ್‍ಡಿಕೆಗೆ ಕಪ್ಪ ಪಡೆಯುವುದಷ್ಟೇ ಗೊತ್ತು, ಕೊಡುವುದು ಗೊತ್ತಿಲ್ಲ- ಆಯನೂರು ಮಂಜುನಾಥ್

Public TV
1 Min Read
AYANOOR

ಶಿವಮೊಗ್ಗ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿಗೆ ಕಪ್ಪ ಪಡೆಯುವುದಷ್ಟೇ ಗೊತ್ತು, ಕೊಡುವುದು ಗೊತ್ತಿಲ್ಲ. ಕಾರಣ ಅವರ ಪಕ್ಷಕ್ಕೆ ಅವರೇ ಹೈಕಮಾಂಡ್ ಅಂತಾ ರಾಜ್ಯಸಭೆ ಮಾಜಿ ಸದಸ್ಯ ಆಯನೂರ್ ಮಂಜುನಾಥ್ ಹೇಳಿದ್ದಾರೆ.

ಪಕ್ಷದ ಮಿಡಲ್ ಕಮಾಂಡ್ ಹಾಗೂ ಲೋ ಕಮಾಂಡ್ ಎಲ್ಲಾ ಎಚ್‍ಡಿಕೆ ನೇ ಆಗಿದ್ದಾರೆ. ಅವರ ತಂದೆ ಹೆಚ್‍ಡಿ ದೇವೇಗೌಡ ಅವರೇ ಖಜಾಂಚಿಯೂ ಆಗಿದ್ದಾರೆ. ಕುಮಾರಸ್ವಾಮಿ ಒಬ್ಬ ಬ್ಲಾಕ್ ಮೇಲ್ ರಾಜಕಾರಣಿ ಅಂತಾ ಹೇಳಿದ್ರು.

ಡೈರಿ ಹೊರಬಂದಾಕ್ಷಣ ಮುಖ್ಯಮಂತ್ರಿ ನಾಪತ್ತೆಯಾಗಿದ್ದಾರೆ ಎಂದು ಹೇಳುವುದಿಲ್ಲ. ಅವರಿಗೆ ನಿದ್ರೆ ಖಾಯಿಲೆ ಇರುವುದರಿಂದ ಎಲ್ಲೋ ಮಲಗಿರಬೇಕು. ಎಚ್ಚರಾದ ಮೇಲೆ ಎದ್ದು ಬರುತ್ತಾರೆ. ಕಾಂಗ್ರೆಸ್ ನಾಯಕರು ಹೈಕಮಾಂಡ್ ಗೆ ಕಪ್ಪ ಕೊಟ್ಟಿದ್ದು ನಿಜ. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಮುಖ್ಯಮಂತ್ರಿ ಮೂಗಿನ ಕೆಳಗೆ ಅವರಿಗೆ ಗೊತ್ತಿರುವಂತೆಯೇ ಈ ಪ್ರಕರಣ ನಡೆದಿರುವುದರಿಂದ ತನಿಖೆ ಮುಗಿಯುವವರೆಗೂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿ ಅಂತಾ ಆಯನೂರು ಮಂಜುನಾಥ್ ಗುಡುಗಿದ್ರು.

Share This Article
Leave a Comment

Leave a Reply

Your email address will not be published. Required fields are marked *