ತುಮಕೂರು: ಮೊಘಲರ ದೌಲತ್ತನ್ನು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ಈಗ ಮತ್ತೆ ತೋರಿಸುವುದಕ್ಕೆ ಮುಂದಾಗುತ್ತಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿ ಕಾರಿದ್ದಾರೆ.
ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಏಕವಚನದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಜಮೀರ್ನನ್ನು ಹೀಗೆಬಿಟ್ಟರೆ ಮುಂದೊಂದು ದಿನ ಹಜ್ ಭನಕ್ಕೆ ಅಷ್ಟೇ ಅಲ್ಲ, ವಿಧಾನಸೌಧಕ್ಕೂ ಟಿಪ್ಪು ಹೆಸರು ಇಡುತ್ತಾನೆ. ಹಜ್ ಭವನಕ್ಕೆ ಟಿಪ್ಪು ಹೆಸರನ್ನು ಇಟ್ಟಿದ್ದೇ ಆದರೆ ಹಿಂದೂಗಳು ದಂಗೆ ಏಳುವುದು ಖಚಿತ ಎಂದು ಹೇಳಿದರು.
ನಾವು ಮೊಘಲರ ದಾಳಿ ಸಹಿಸಿಕೊಂಡಿದ್ದೇವೆ. ಬ್ರಿಟಿಷ್ ಹಿಂಸೆ ಸಹಿಸಿಕೊಂಡಿದ್ದೇವೆ. ಇನ್ನು ಮುಂದೆ ನಮ್ಮ ಮೇಲಾಗುವ ಹಿಂಸೆಯನ್ನು ಸಹಿಸಿಕೊಳ್ಳಲ್ಲ. ಕಂಪ್ಯೂಟರ್ ಯುಗದಲ್ಲಿ ಮೊಘಲ್ ಆಳ್ವಿಕೆಯನ್ನು ತೋರಿಸಲು ಜಮೀರ್ ಮುಂದಾಗುತ್ತಿದ್ದಾರೆ. ಇದನ್ನು ಹಿಂದೂಗಳು ಸಹಿಸುವುದಿಲ್ಲ. ಇದು ಕಾಶ್ಮೀರವಲ್ಲ ಜಮೀರ್ ಅವರೇ ಕರ್ನಾಟಕ ಎಂದು ಹೇಳಿ ವಾಗ್ದಾಳಿ ನಡೆಸಿದರು.
ಅದೃಷ್ಟವಶಾತ್ ಜಮೀರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಸರ್ಕಾರ ಜಮ್ಮೀರ್ ಅಹ್ಮದ್ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು. ಇಂತಹ ಹೇಳಿಕೆ ಮೂಲಕ ಜಮೀರ್ ಅವರು ಕೋಮು ಗಲಭೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಜಮೀರ್ ಅವರು ತಮ್ಮ ಉದ್ಧಟತನವನ್ನು ಹೀಗೆ ಮುಂದುವರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.