ಚಿಕ್ಕಬಳ್ಳಾಪುರ: ನಮ್ಮ ಮಂಗಳೂರು ಶಾಂತವಾಗಿದೆ ಚೆನ್ನಾಗಿದೆ. ರಾಜ್ಯದಲ್ಲಿ ಗಲಭೆ ಎಬ್ಬಿಸುವ ಕೆಲಸ ಮಾಡಬೇಡಿ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿಗೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ಚಿಕ್ಕಬಳ್ಳಾಪುರ ನಗರದಲ್ಲಿ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ದಯಮಾಡಿ ಮಾಜಿ ಸಿಎಂ ಎಚ್ಡಿಕೆ ಸಿಡಿ ಬಿಡುಗಡೆ ಮಾಡಲಿ. ಆದರೆ ಸಿಡಿ ಅದ್ಯಾವ ಕಾರ್ಯಕರ್ತರು ಯಾವ ಪೊಲೀಸರು ಕೊಟ್ಟರು ಎಂಬುದು ಪತ್ತೆ ಆಗಬೇಕು. ಈಗಾಗಲೇ ಯಾರು ಕಲ್ಲು ತಂದ್ದರು ಯಾವ ಟೆಂಪೋ ಲಾರಿಯಲ್ಲಿ ತಂದರು. ಪೆಟ್ರೋಲ್ ಯಾರು ತಂದ್ದರು ಗೊತ್ತಾಗಿದೆ. ಈ ಸತ್ಯಾಂಶವನ್ನು ಹೇಳುವಂತಹ ಸಿಡಿಯನ್ನು ಎಚ್ಡಿಕೆ ಬಿಡುಗಡೆ ಮಾಡಲಿ ಎಂದರು. ಇದನ್ನು ಓದಿ: ಮಂಗ್ಳೂರನ್ನು ‘ಕಾಶ್ಮೀರ’ ಮಾಡಲು ಹೊರಟಿದೆ, ಇದನ್ನು ತೋರಿಸಲು 35 ವಿಡಿಯೋ ರಿಲೀಸ್ – ‘ಸಿಡಿ’ದ ಎಚ್ಡಿಕೆ
- Advertisement 2
- Advertisement 3
ಎಚ್ಡಿಕೆ ಮತ್ತು ಜೆಡಿಎಸ್ನವರ ಅಸ್ತಿತ್ವ ಮಂಗಳೂರಲ್ಲಿ ಏನೂ ಇಲ್ಲ. ಮಂಗಳೂರಿನಲ್ಲಿ ಅಸ್ತಿತ್ವ ಪಡೆಯೋಕೆ ಆಗೋದು ಇಲ್ಲ. ಹೀಗಾಗಿ ರಾಜ್ಯದಲ್ಲಿ ಗಲಭೆ ಎಬ್ಬಿಸುವ ಪ್ರಯತ್ನ ಮಾಡಬೇಡಿ. ನಮ್ಮ ಮಂಗಳೂರು ಶಾಂತವಾಗಿದೆ ಚೆನ್ನಾಗಿದೆ. ಕೇರಳದಿಂದ ಬಂದು ಕಲ್ಲೆಸೆದು ಉದ್ದೇಶಪೂರ್ವಕವಾಗಿ ಗಲಭೆ ಮಾಡಿದವರ ಪತ್ತೆ ಮಾಡಲು ಎಚ್ಡಿಕೆ ಸಹಕಾರ ಕೊಡಲಿ ಎಂದು ಹೇಳಿದರು.