ಕೊಪ್ಪಳ: ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಅವರನ್ನು ಮಾಡಬೇಕು ಎಂದು ಕಾಂಗ್ರೆಸ್ (Congress) ಶಾಸಕ ಭೈರತಿ ಸುರೇಶ್ (Byrathi Suresh) ಒತ್ತಾಯಿಸಿದ್ದಾರೆ.
ಕೊಪ್ಪಳದ (Koppal) ಯಲಬುರ್ಗಾದಲ್ಲಿ ಕುರುಬ ಸಮುದಾಯದ ವೇದಿಕೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಹೋಗಳುತ್ತೇನೆ. ಯಾವನಾದರೂ ಏನಾದರೂ ಮಾಡಿಕೊಳ್ಳಲಿ. ಇಷ್ಟವಿಲ್ಲವೆಂದರೆ ಹೊರಗೆ ಹೋಗಬಹುದು. ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಬೇಕು. ಕನಕದಾಸರು, ಬಸವಣ್ಣನವರಾಗಲೀ ಎಲ್ಲರ ಅನುಯಾಯಿಗಳು ಸಿದ್ದರಾಮಯ್ಯ ಅವರಾಗಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಮುಂದಿನ ಸಿಎಂ ಆಗಲಿ ಎನ್ನುತ್ತಿದ್ದಂತೆ ಸಿದ್ದರಾಮಯ್ಯ ಎದುರೇ ಕುರುಬ ಸಮಾರಂಭದಲ್ಲಿ ಬಿನ್ನಮತ ಏರ್ಪಟ್ಟಿದೆ. ಸಿದ್ದರಾಮಯ್ಯ ಅವರನ್ನ ಸಿಎಂ ಮಾಡಬೇಕೆಂದು ಹೊಗಳಿದ್ದಕ್ಕೆ ಕೆಲವರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಶಾಸಕ ಭೈರತಿ ಸುರೇಶ್ ಮಾತನಾಡುವಾಗ ವಿರೋಧ ಮಾಡಿದ ಕುರುಬ ಸಮುದಾಯದ ಕೆಲವರು, ವೇದಿಕೆಯಲ್ಲಿಯೇ ವಾಗ್ವಾದ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿ ರಾಕ್ಷಸರ ಸರ್ಕಾರವಾಗಿದೆ: ಸುರ್ಜೇವಾಲಾ
ಅಷ್ಟೇ ಅಲ್ಲದೇ ಜಾತ್ರೆ ಹಾಗೂ ಸಂಗೋಳ್ಳಿ ರಾಯಣ್ಣ ಮೂರ್ತಿಗೆ ಪಕ್ಷಾತೀತವಾಗಿ ದೇಣಿಗೆ ನೀಡಿದೆ. ಕೇವಲ ಸಿದ್ದರಾಮಯ್ಯ ಅವರನ್ನು ಹೋಗಳಬೇಡಿ ಎಂದು ವಿರೋಧ ವ್ಯಕ್ತಪಡಿಸಿದರು. ವಿರೋಧ ವ್ಯಕ್ತವಾಗುತ್ತಿದ್ದರೂ ಸಿದ್ದರಾಮಯ್ಯ ಅವರು ಸೈಲೆಂಟ್ ಆಗಿದ್ದರು. ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು. ಇದನ್ನೂ ಓದಿ: ಹಿರಿಯ, ಶ್ರೀಮಂತ, ಅಪಾಯಕಾರಿ – ಸ್ಮೃತಿ ಇರಾನಿ ಬೆನ್ನಲ್ಲೇ ಸೊರಸ್ ವಿರುದ್ಧ ಜೈಶಂಕರ್ ಕಿಡಿ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k