ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಪರೇಷನ್ ಬುಲ್ಡೋಜರ್ ಪಾರ್ಟ್-2 ಶುರುಗೆ ಭರದ ಸಿದ್ಧತೆ ನಡೆಯುತ್ತಿದೆ. ದೊಡ್ಡವರ ರಣಬೇಟೆಗೆ ಪಾಲಿಕೆ ಈ ಬಾರಿ ಜಂಟಿ ಸರ್ವೇ ಅಸ್ತ್ರ ಪ್ರಯೋಗಕ್ಕೆ ಸಜ್ಜಾಗಿದೆ. ಸೋಮವಾರದಿಂದ ಮತ್ತೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಲು ಬಿಬಿಎಂಪಿ ಸಿದ್ಧವಾಗಿದೆ.
- Advertisement 2
ಮಳೆಯಿಂದಾಗಿ ನಗರದ ಹಲವೆಡೆ ರಸ್ತೆಗಳು ಜಲಾವೃತ್ತವಾಗಿತ್ತು. ರಾಜಕಾಲುವೆ ಒತ್ತುವರಿ ನಗರದ ಪರಿಸ್ಥಿತಿಗೆ ಕಾರಣವೆಂದು ಬರೋಬ್ಬರಿ 15 ದಿನ ನಗರದಲ್ಲಿ ಬುಲ್ಡೋಜರ್ ಘರ್ಜಿಸಿತು. 829 ಒತ್ತುವರಿಯಲ್ಲಿ ಮೊದಲ ಹಂತದ ಒತ್ತುವರಿ ತೆರವಿನಲ್ಲಿ ಹಲವೆಡೆ ಬುಲ್ಡೋಜರ್ ಘರ್ಜಿಸಿತು. ಈಗ ಬುಲ್ಡೋಜರ್ ಪಾರ್ಟ್-2ಗೆ ಸಿದ್ಧತೆ ನಡೆಯುತ್ತಿದೆ. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ ಅಂತಾ ಭಾರತಕ್ಕೆ ಯಾವ ದೇಶವೂ ಹೇಳಿಲ್ಲ: ಹರ್ದೀಪ್ ಸಿಂಗ್ ಪುರಿ
- Advertisement 3
- Advertisement 4
ರಾಜಕಾಲುವೆ ಒತ್ತುವರಿ ತೆರವು ಬುಲ್ಡೋಜರ್ ಪಾರ್ಟ್-2ಗೆ ಮಹದೇವಪುರದಲ್ಲಿ ಬರೋಬ್ಬರಿ 18 ಪ್ರಾಪರ್ಟಿಗಳು ಒತ್ತುವರಿಗೆ ನೋಟಿಸ್ ನೀಡಲು ಸಿದ್ಧತೆ ನಡೆದಿದೆ. ಈ ಪ್ರಕಾರ ಸ್ಟೇ ಕಾರಣ ನೀಡಿ ತಪ್ಪಿಸಿಕೊಳ್ಳಬಾರದೆಂದು ಲೆಕ್ಕಚಾರ ಮಾಡಿ, ಸ್ಟೇ ಇರುವ ಕಡೆ ಅಧಿಕಾರಿ ಹಾಗೂ ಒತ್ತುವರಿದಾರರು ಜಂಟಿ ಸರ್ವೆ ನಡೆಸಲು ಸೂಚಿಸಲಾಗಿದೆ. ಒತ್ತುವರಿ ಕಂಡು ಬಂದರೆ ಬುಲ್ಡೋಜರ್ ಘರ್ಜನೆ ಪಕ್ಕಾ ಎನ್ನಲಾಗಿದೆ.
ನಲಪಾಡ್ ಆಕಾಡೆಮಿ, ಸಿಲ್ವರ್ ಸ್ಪ್ರಿಂಗ್ ಪ್ಲಾಟ್ ಓನರ್ಸ್ ಅಸೋಸಿಯೇಷನ್, ಪೂರ್ವ ಪಾರ್ಕ್ ರಿಡ್ಜ್ ಅಪಾರ್ಟ್ಮೆಂಟ್ ಓನರ್ಸ್ ಅಸೋಸಿಯೇಷನ್, ರೈನ್ ಬೋ ಲೇಔಟ್, ಉಮೀಯಾ ಓಲ್ಡಿಂಗ್, ಪ್ರೈವೆಟ್ ಲಿಮಿಟೆಡ್ಚ, ಇಕೋ ಸ್ಪೇಸ್, ದಿವ್ಯ ಶ್ರೀ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ ಪ್ರೈವೆಟ್ ಲಿಮಿಟೆಡ್. ಈ ಭಾಗಗಳಿಗೆ ಹೀಗೆ ಬಂದು ಹಾಗೇ ಹೋಗಿದ್ದ ಬುಲ್ಡೋಜರ್ಗಳು ಮತ್ತೆ ಆಪರೇಷನ್ ಮಾಡುತ್ತಾವೆಯೇ ಎಂಬುದು ಪ್ರಶ್ನೆಯಾಗಿದೆ. ಜಂಟಿ ಸರ್ವೇ ಮಾಡಿದಾಗ ಒತ್ತುವರಿ ಆಗಿರುವುದು ತಿಳಿದುಬಂದರೆ, ನೋಟಿಸ್ ಕೊಟ್ಟು ಕಾರ್ಯಾಚರಣೆ ಶುರು ಮಾಡಲಾಗುವುದು ಎಂದು ಮುಖ್ಯ ಇಂಜಿನಿಯರ್ ಹೇಳಿದ್ದಾರೆ. ಇದನ್ನೂ ಓದಿ: ಅರುಣಾಚಲ ಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಥುಪ್ಟೆನ್ ಟೆಂಪಾ ನಿಧನ
ಇತ್ತ ನಗರದಲ್ಲಿ ಇನ್ನೂ 602 ಪ್ರಾಪರ್ಟಿ ಒತ್ತುವರಿ ತೆರವು ಆಗಬೇಕಿದೆ. ಈ ಕಡೆ ಮಹದೇವಪುರ ವಲಯದಲ್ಲೇ 132 ಒತ್ತುವರಿಗಳಿದ್ದು, 12 ಪ್ರಾಪರ್ಟಿ ಮೇಲೆ ಕೋರ್ಟ್ ಕೇಸ್ಗಳಿವೆ. ಹೀಗಾಗಿ ಹಂತ ಹಂತವಾಗಿ ಜಂಟಿ ಸರ್ವೇ ಮೂಲಕ ಮುಂದಿನ ವಾರದಿಂದಲೆ ಎಲ್ಲ ವಲಯಗಳಲ್ಲೂ ಜೆಸಿಬಿ ಘರ್ಜಿಸಲಿದೆ.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]