ಬೀದರ್: ಕಾರ್ಗಿಲ್ ಯುದ್ದದಲ್ಲಿ ಯೋಧರು ಹೋರಾಟ ಮಾಡಿದ್ದನ್ನು ನೀವು ಕೇಳಿದ್ದೀರಿ. ಆದರೆ ಗಡಿ ಜಿಲ್ಲೆಯಲ್ಲಿ ನಿಜಾಮರಿಂದ ಹಿಂದೂಗಳ ಮೇಲೆ ದೌರ್ಜನ್ಯ, ಅತ್ಯಾಚಾರಗಳು ನಡೆಯುತ್ತಿದ್ದಾಗ ನಿಜಾಮನ ವಿರುದ್ಧ ವಾನರಗಳು ಹೋರಾಡಿದ ಇತಿಹಾಸವಿದೆ.
ಹೌದು. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಾಳಕಾಪೂರ್ ಗ್ರಾಮದಲ್ಲಿರುವ ಪವಾಡ ಪುರುಷ ಆಂಜನೇಯನ ದೇವಸ್ಥಾನದಲ್ಲಿ ಚಮತ್ಕಾರ ನಡೆಯುತ್ತಿದೆ. 6 ಸಾವಿರ ವರ್ಷ ಇತಿಹಾಸವಿರುವ ಆಂಜನೇಯ ದೇವಸ್ಥಾನದಲ್ಲಿ ಪ್ರತಿ ಶನಿವಾರ ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯುತ್ತದೆ. ಆ ಸಮಯಕ್ಕೆ ಸರಿಯಾಗಿ ನೂರಾರು ಕೋತಿಗಳು ಹಾಜರಾಗಿ ಒಗಟ್ಟು ತೋರಿಸುತ್ತವೆ.
ಬೇರೆ ಸಮಯದಲ್ಲಿ ನೋಡಲು ಒಂದು ಮಂಗಗಳು ಸಿಗುವುದಿಲ್ಲ. ಆದರೆ ಮಹಾಮಂಗಳಾರತಿ ಸಮಯಕ್ಕೆ ಸರಿಯಾಗಿ ನೂರಾರು ಮಂಗಗಳು ಎಲ್ಲಿಂದ ಬರುತ್ತವೆ ಎಂಬುದು ಆಶ್ಚರ್ಯಕ್ಕೆ ಕಾರಣವಾಗಿದೆ. ಜೊತೆಗೆ 200 ವರ್ಷಗಳ ಹಿಂದೆ ನಿಜಾಮರ ದೌಬ್ಬಾಳಿಕೆ, ದೌರ್ಜನ್ಯ, ಅತ್ಯಾಚಾರ ನಡೆಯುತ್ತಿದ್ದಾಗ ಸಾವಿರಾರು ಮಂಗಳು ಒಟ್ಟಾಗಿ ಸೇರಿ ನಿಜಾಮರ ವಿರುದ್ಧ ಹೋರಾಡಿ ನಿಜಾಮರಿಂದ ಮುಕ್ತಿ ನೀಡುತ್ತಿದ್ದು, ಅಂದಿನಿಂದ ಹಿಂದೂಗಳು ನಿರಾಳವಾಗಿ ಬದುಕುತ್ತಿದ್ದಾರೆ ಎಂದು ಸ್ಥಳೀಯ ಭಕ್ರ ಅನೀಲ್ಕುಮಾರ್ ಕೋರೆ ಹೇಳಿದ್ದಾರೆ.
ಈ ದೇವಸ್ಥಾನಕ್ಕೆ ಬಹುದೊಡ್ಡ ಇತಿಹಾಸವಿದ್ದು, ಶ್ರೀರಾಮ, ಲಕ್ಷ್ಮಣ ವನವಾಸದಲ್ಲಿ ಇರುವಾಗ ಈ ಚಳಕಾಪೂರ್ ಅರಣ್ಯದಲ್ಲಿ ವಾಸವಾಗಿದ್ದರಂತೆ. ಚಳಕಾ ದೇವಿಯ ಮಾತಿನಂತೆ ಶ್ರೀರಾಮ ಅಸುರನ್ನು ಸಂಹಾರ ಮಾಡಿದ್ದರಿಂದ “ಚಳಕಾಪೂರ್” ಎಂದು ಹೆಸರು ಬಂದಿದೆ ಎನ್ನುವ ಪ್ರತೀತಿ ಇದೆ. ಇನ್ನು ಹನುಮಂತ ಸಂಜೀನಿ ಪರ್ವತ ಅಂಗೈಯಲ್ಲಿ ತೆಗೆದುಕೊಂಡು ಹೋಗಬೇಕಾದರೆ ಒಂದು ಸಣ್ಣ ತುಂಡು ಈ ಸ್ಥಳದಲ್ಲಿ ಬಿದ್ದಿರುವ ಕಾರಣ ಇಲ್ಲಿ ಆಂಜನೇಯ ನೆಲೆಸಿದ್ದಾನೆ. ಈ ದೇವಸ್ಥಾಕ್ಕೆ ಬಂದು ಹರಕೆ ಬೇಡಿಕೊಂಡರೆ ಮನಸ್ಸಿನ ಇಷ್ಟಾರ್ಥ ದಯ ಪಾಲಿಸುತ್ತಾನೆ ಎಂಬ ನಂಬಿಕೆ ಭಕ್ತರದ್ದಾಗಿದೆ.
ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ್ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬಂದು ಪವರ್ ಫುಲ್ ಆಂಜನೇಯನ ದರ್ಶನ ಪಡೆದುಕೊಂಡು ಹೋಗುತ್ತಾರೆ. ಈ ದೇವರ ವಿಶೇಷತೆ ಜೊತೆಗೆ ಭಕ್ತರು ಮಂಗಗಳ ಪವಾಡ ನೋಡಿ ಆಶ್ಚರ್ಯಚಕಿತರಾಗಿ ಮಂಗಗಳಿಗೆ ಹಣ್ಣು, ಹಂಪಲು ನೀಡಿ ದರ್ಶನ ಪಡೆಯುತ್ತಾರೆ ಎಂದು ಭಕ್ತ ಆಕಾಶ್ ಮಾಳೆ ತಿಳಿಸಿದ್ದಾರೆ.
ನಾವು ಹಲವಾರು ರೀತಿಯ ಪವಾಡಗಳನ್ನು ನೋಡಿದ್ದೇವೆ. ಆದರೆ ಈ ರೀತಿ ಮಂಗಗಳ ಪವಾಡ ನೋಡುತ್ತಿರುವುದು ಇದೇ ಮೊದಲು ಎನ್ನಬಹುದು. ಮಂಗಗಳಲ್ಲಿ ದೇವರು ಸ್ವರೂಪ ಇದೆ ಎನ್ನುವುದಕ್ಕೆ ಈ ದೇವಸ್ಥಾನಕ್ಕೆ ಬರುವ ಕೋತಿಗಳ ಸಮೂಹವೇ ಸಾಕ್ಷಿಯಾಗಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv