ಮಿಸ್ ಮ್ಯಾಚ್ ಜೋಡಿ ಎಂದೇ ಸಖತ್ ವೈರಲ್ ಆಗಿದ್ದ ನಟಿ ಮಹಾಲಕ್ಷ್ಮಿ ಸ್ವತಃ ಗಂಡನಿಗೆ ವಾರ್ನ್ ಮಾಡಿದ್ದಾರೆ. ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravinder Chandrasekaran) ಜೊತೆ ಮದುವೆಯಾದ ದಿನದಿಂದ ಈವರೆಗೂ ಈ ಜೋಡಿ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇದೆ. ಈ ಬಾರಿ ರವೀಂದರ್ ತಮ್ಮದಷ್ಟೇ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಕಾರಣಕ್ಕಾಗಿ ಮಹಾಲಕ್ಷ್ಮಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸದಾ ಮಹಾಲಕ್ಷ್ಮಿ ಜೊತೆ ಇರುವಂಥ ಫೋಟೋಗಳನ್ನೇ ರವೀಂದರ್ ಶೇರ್ ಮಾಡುತ್ತಿದ್ದರು. ಆದರೆ ಈ ಬಾರಿ ತಮ್ಮದಷ್ಟೇ ಫೋಟೋ ಹಾಕಿಕೊಂಡಿದ್ದಾರೆ. ಹಾಗಾಗಿ ಮಹಾಲಕ್ಷ್ಮಿಯಿಂದ ರವೀಂದರ್ ದೂರವಾಗಿದ್ದಾರೆ ಎನ್ನುವ ಸುದ್ದಿ ಹರಡಿಕೊಂಡಿದೆ. ರವೀಂದರ್ ಜೈಲಿಗೆ ಹೋಗಿ ಬಂದಾಗಿಂದ ಮಹಾಲಕ್ಷ್ಮಿ ದೂರವಾಗಿದ್ದಾರೆ ಎಂದೇ ಹೇಳಲಾಗಿತ್ತು. ಈ ಫೋಟೋ ಅದಕ್ಕೆ ಪುಷ್ಠಿ ನೀಡಿತ್ತು. ಹಾಗಾಗಿ ಮಹಾಲಕ್ಷ್ಮಿ ಗಂಡನಿಗೆ ವಾರ್ನ್ ಮಾಡಿ, ಇನ್ನೆಂದೂ ನಿಮ್ಮದಷ್ಟೇ ಫೋಟೋ ಹಾಕುವಂತಿಲ್ಲವೆಂದು ಹೇಳಿದ್ದಾರಂತೆ.
ನಟಿ ಮಹಾಲಕ್ಷ್ಮಿ (Mahalakshmi) ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರ್ ಸೆಪ್ಟಂಬರ್ 1ರಂದು ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಸುಂದರಿ ಮಹಾಲಕ್ಷ್ಮಿಯು ಹಣಕ್ಕಾಗಿ ಮದುವೆಯಾಗಿದ್ದಾರೆ ಎಂದು ಟ್ರೋಲ್ ಮಾಡಲಾಗಿತ್ತು. ರವೀಂದರ್ ದಪ್ಪ ಅನ್ನುವ ಕಾರಣಕ್ಕಾಗಿ ಈ ಜೋಡಿ ಅಪಹಾಸ್ಯಕ್ಕೆ ಗುರಿಯಾಗಿತ್ತು. ಏನೇ ಹಾಸ್ಯ ಮಾಡಿದರೂ, ಮೊನ್ನೆಯಷ್ಟೇ ಈ ಜೋಡಿ ಒಂದು ವರ್ಷ ದಾಂಪತ್ಯ ಮುಗಿಸಿ ತಣ್ಣಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿತ್ತು.
ಈ ಕುರಿತು ರವೀಂದರ್ ಫೋಟೋವೊಂದನ್ನು ಹಂಚಿಕೊಂಡಿದ್ದು, ಹೆಂಡತಿಯ ಗುಣಗಾನ ಮಾಡಿದ್ದರು. ‘ಮಹಾಲಕ್ಷ್ಮಿ ತನ್ನ ಬಾಳಿಗೆ ಬಂದ ನಂತರ ತಮ್ಮ ಬದುಕು ಸುಂದರವಾಗಿ ಎಂದಿದ್ದರು. ಆಕೆ ಕೊಡುವ ಪ್ರೀತಿಗೆ ನಾನು ಅರ್ಹನಲ್ಲ. ಆದರೂ, ಸುಂದರ ಜೀವನ ನಡೆಸುತ್ತಿದ್ದೇವೆ’ ಎಂದು ಅವರು ಪತ್ರದಲ್ಲಿ ಬರೆದಿದ್ದರು.
ಹಾಗಂತ ಪತ್ನಿಯನ್ನು ಕೇವಲ ಹೊಗಳಿಲ್ಲ. ‘ಅವಳು ದುರಂಹಕಾರಿ, ಆಕೆಯ ಪ್ರೀತಿ ಒರಟು. ಆದರೂ, ಕೋಪ ಬಂದಾಗ ಅಡುಗೆ ಮನೆಗೆ ಸೀದಾ ಹೋಗಿ ನನಗಾಗಿ ತಿಂಡಿಯನ್ನು ಮಾಡಿಕೊಂಡು ಬರುತ್ತಾಳೆ. ಒಂದೊಂದು ಸಲ ಕೆಟ್ಟದ್ದಾಗಿಯೂ ಅಡುಗೆ ಮಾಡಿದ್ದಾಳೆ. ಆಗ ಹೋಟೆಲ್ ನಮಗೆ ಅನಿವಾರ್ಯವಾಗುತ್ತದೆ’ ಎಂದು ಕಾಲೆಳೆದಿದ್ದರು.
ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಈ ದಂಪತಿ ಸಿಂಪಲ್ ಆಗಿ ಆಚರಿಸಿಕೊಂಡಿತ್ತು. ಆದರೆ, ಪ್ರೀತಿಯನ್ನು ಮಾತ್ರ ಅಗಾಧವಾಗಿ ಹಂಚಿಕೊಂಡಿತ್ತು. ರವೀಂದ್ರನ್ ಪತ್ನಿಗಾಗಿ ಉದ್ದದ ಪತ್ರವನ್ನೇ ಬರೆದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು. ನಂತರ ದಿನದಲ್ಲಿ ಈ ಜೋಡಿ ದೂರವಾಗಿದೆ ಎನ್ನುವ ಗಾಸಿಪ್ ಹರಡಿತ್ತು.