ಮಡಿಕೇರಿ: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಮಾಡಲಾಗಿದೆ. ಆದರೂ ಕೆಲವರು ಮನೆಯಿಂದ ಹೊರಬರುತ್ತಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವಿರಾಜಪೇಟೆ ತಾಲೂಕಿನ ಕೊಮ್ಮೆತೂಡು ಗ್ರಾಮದಲ್ಲಿರುವ ಹರ್ಷಿಕಾ ಪೂಣಚ್ಚ ಅವರ ಮನೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಮನೆಯಲ್ಲೇ ಇದ್ದು ಹೀರೋಗಳಾಗಿ ಎಂದು ಹೇಳಿದ್ದಾರೆ.
ಮನವಿಯೇನು?:
ದಯವಿಟ್ಟು ಕೊಡಗಿನ ಜನತೆ ಯಾರೂ ಮನೆಯಿಂದ ಹೊರಗೆ ಹೋಗಬೇಡಿ. ಸರ್ಕಾರ, ಕಾನೂನು ವಿವಿಧ ಯೋಜನೆಗಳನ್ನು ನಮ್ಮ ಜನರಿಗೆ ನೀಡಿದ್ದಾರೆ. ಇದು ನಮಗೆ ಒಳ್ಳೆಯದು ಅಗಬೇಕು ಎಂಬ ಉದ್ದೇಶದಿಂದ ಮಾಡಿದ್ದಾರೆ. ಜನಸಾಮಾನ್ಯರು ಇದನ್ನ ಅರ್ಥ ಮಾಡಿಕೊಳ್ಳುವ ಮನಸ್ಸು ಮಾಡಬೇಕು. ಗ್ರಾಮೀಣ ಭಾಗದಲ್ಲಿ ಸ್ವಯಂಪ್ರೇರಿತರಾಗಿ ಬೀದಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ನಗರದ ಜನತೆ ಮಾತ್ರ ಈ ಕೊರೊನಾ ವೈರಸ್ ಗೂ ನಮಗೂ ಯಾವುದೇ ಸಂಬಂಧ ಇಲ್ಲ ಅನ್ನೋ ಹಾಗೆ ವರ್ತಸುತ್ತಿದ್ದಾರೆ. ದಯವಿಟ್ಟು ಮನೆಯಿಂದ ಯಾರು ಹೊರಗೆ ಬರಬೇಡಿ. ಮೊದಲು ನಿಮ್ಮ ಸೇಫ್ ಮುಖ್ಯ. ನಾವುಗಳು ಅಷ್ಟೇ ಮನೆಯಿಂದ ಹೊರಗೆ ಹೋಗುತ್ತಿಲ್ಲ. ಯಾವಾಗ್ಲೂ ಶೂಟಿಂಗ್ ಅಂತ ಬ್ಯುಸಿ ಇರುತ್ತಿದ್ದೆವು. ಆದರೆ ಈಗ ಈ ಸಮಸ್ಯೆಯಿಂದ ಮನೆಯಲ್ಲೇ ಇದ್ದೇವೆ ಎಂದು ತಿಳಿಸಿದ್ದಾರೆ.
ಒಂದು ರೀತಿಯಲ್ಲಿ ಮನೆಯಲ್ಲಿ ಇರುವುದು ಖುಷಿಯಾಗುತ್ತಿದೆ. ತಂದೆ-ತಾಯಿ ಜೊತೆ ಸಮಯ ಕಳೆಯುತ್ತಾ ಇದ್ದೀನಿ. ಮನೆಯಲ್ಲೇ ಕೆಲಸ ಮಾಡುತ್ತೇವೆ. ನಾವು ಮತ್ತು ನಮ್ಮ ಕುಟುಂಬ ಸದಸ್ಯರೊಂದಿಗೆ ಖುಷಿಯಿಂದ ಮನೆಯಲ್ಲೇ ಇದ್ದೀವಿ. ಹಾಗೆಯೇ ತಾವು ಕೂಡ ಇರಿ. ಮನೆಯವರೊಂದಿಗೆ ನೀವು ಖುಷಿಯಿಂದ ಕೆಲಸ ಊಟ ಎಲ್ಲಾ ಮಾಡಿಕೊಂಡು ಮನೆಯ ಹೀರೋಗಳಾಗಿ ಇರಬಹುದು ಎಂದು ಇಬ್ಬರೂ ತಿಳಿಸಿದ್ದಾರೆ.