ಬೆಂಗಳೂರು: ಸಾರು ಚೆನ್ನಾಗಿಲ್ಲ ಅಂತಾ ಗಂಡ ಬೈದಿದ್ದಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ರಾತ್ರಿ ಬೆಂಗಳೂರಿನ ಚೋಳೂರುಪಾಳ್ಯದಲ್ಲಿ ನಡೆದಿದೆ.
ನಾಗರತ್ನಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಳೆದ ರಾತ್ರಿ ನಾಗರತ್ನಮ್ಮ ಅವರಿಗೆ ಪತಿ ಶ್ರೀನಿವಾಸ್ ಸಾರು ಚೆನ್ನಾಗಿ ಮಾಡಿಲ್ಲ ಅಂತಾ ಬೈದಿದ್ದಾರೆ. ಇದರಿಂದ ಮನನೊಂದ ನಾಗರತ್ನಮ್ಮ ತಮ್ಮ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಮದುವೆಯಾಗಿ 28 ವರ್ಷವಾಗಿದ್ದ ಶ್ರೀನಿವಾಸ್ ಗೆ ಲಕ್ವ ಹೊಡೆದಿತ್ತು. ಮಗ ಮಿಥುನ್ ರೂಮ್ ಗೆ ಹೋಗಿ ನೋಡಿದಾಗ ತಾಯಿ ನೇಣು ಹಾಕಿಕೊಂಡಿದ್ದು ಬೆಳಕಿಗೆ ಬಂದಿದೆ.
ಈ ಸಂಬಂಧವನ್ನು ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.