ಗೊಬ್ಬರಗಾಲ ಮೈ ಮೇಲೆ ದೆವ್ವ: ಹೆದರಿ ಓಡಿದ ನವಾಜ್, ರೂಪೇಶ್ ರಾಜಣ್ಣ

Public TV
1 Min Read
vinod gobbaragala 1

ಬಿಗ್ ಬಾಸ್ ಮನೆ(Bigg Boss House) ಇದೀಗ ರಣರಂಗವಾಗಿದೆ. ಎರಡನೇ ವಾರಕ್ಕೆ ಕಾಲಿಟ್ಟಿರುವ ದೊಡ್ಮನೆ ಆಟ ರೋಚಕ ತಿರುವುಗಳನ್ನ ಪಡೆಯುತ್ತಿದೆ. ಇನ್ನೂ ಗೊಬ್ಬರಗಾಲ(Vinod Gobbaragala) ಮಧ್ಯರಾತ್ರಿ 12 ಗಂಟೆಗೆ ವಿಚಿತ್ರ ಧ್ವನಿಯಲ್ಲಿ ಮಾತನಾಡಿದ್ದಾರೆ. ಗೊಬ್ಬರಗಾಲ ನಡೆ ನುಡಿ ನೋಡಿ ನವಾಜ್ (Nawaz) ಫುಲ್ ಕಂಗಲಾಗಿದ್ದಾರೆ. ಅಷ್ಟಕ್ಕೂ ಗೊಬ್ಬರಗಾಲಗೆ ಎನಾಯ್ತು ಎಂದು‌ ಮನೆ ಮಂದಿ ಕೂಡ ಅಚ್ಚರಿಪಟ್ಟಿದ್ದಾರೆ.

vinod gobbaragala

ದೊಡ್ಮನೆಯಲ್ಲಿ ರಾಕೇಶ್(Rakesh Adiga) ಫ್ರ‍್ಯಾಂಕ್ ಮಾಡಿದ್ದ ಬೆನ್ನಲ್ಲೇ ಮತ್ತೆ ಹೊಸ ಪ್ಲ್ಯಾನ್ ಯೋಚಿಸಿದ್ದಾರೆ. ವಿಚಿತ್ರ ಧ್ವನಿಯಲ್ಲಿ ಮಾತನಾಡು ಎಂದು ರಾಕೇಶ್ ಅಡಿಗ ಅವರು ಗೊಬ್ಬರಗಾಲಗೆ ಸಲಹೆ ನೀಡಿದ್ದಾರೆ. ರೂಪೇಶ್ ರಾಜಣ್ಣ ಮುಂದೆ ರಾಕೇಶ್ ಅವರು, ಬಿಗ್ ಬಾಸ್ ವಿನೋದ್ ಅವರು ವಿಚಿತ್ರವಾಗಿ ಆಡ್ತಿದ್ದಾನೆ. ದಯವಿಟ್ಟು ಏನಾದರೂ ಮಾಡಿ, ಸೀರಿಯಸ್ ಸಮಸ್ಯೆ ತರ ಅನಿಸ್ತಿದೆ. ಏನಾಯ್ತು ಗೊಬ್ಬರ ಎಂದಿದ್ದಾರೆ. ಇದನ್ನೂ ಓದಿ:ರೂಪೇಶ್‌ಗೆ ಕೊನೆಯುಸಿರು ಇರುವವರೆಗೂ ಪ್ರೀತಿ ಮಾಡುತ್ತೀನಿ ಎಂದ ಸಾನ್ಯ

vinod gobbragala

ರೂಪೇಶ್ ರಾಜಣ್ಣ(Rooopesh Rajanna) ಅವರ ಹಿಂದೆಯೇ ವಿನೋದ್ ಓಡಾಡಿದ್ದಾರೆ. ರೂಪೇಶ್ ಅವರು ಹೆದರಿ ಓಡಿದ್ದಾರೆ. ಆಮೇಲೆ ಮತ್ತೆ ವಿನೋದ್ ಬಳಿ ಬಂದ ರೂಪೇಶ್, ಏನಾಯ್ತು? ಸ್ಕಿಟ್ ಮಾಡ್ತಿದ್ದೀರಾ ಅಂತ ಭಯದಿಂದ ಪ್ರಶ್ನೆ ಮಾಡಿದ್ದಾರೆ. ಆಗ ಪ್ರಶಾಂತ್ (Prashanth Sambargi) ಕೂಡ ಎದ್ದು ಬಂದು, ಮಾತನಾಡದೆ ಬಾತ್‌ರೂಮ್‌ಗೆ ಹೋಗಿದ್ದಾರೆ. ಆಗ ರೂಪೇಶ್‌ಗೆ ಇದು ಫ್ರಾಂಕ್ ಅಂತ ಗೊತ್ತಾಗಿದೆ. ನಿಮಗೆ ಏನು ಬಂದೈತೋ ಕೇಡುಕಾಲ ಎಂದು ರೂಪೇಶ್ ಅವರು ಬಕ್ರಾ ಆದೆ ಎಂದು ಹೇಳಿಕೊಂಡು ನಕ್ಕಿದ್ದಾರೆ. ಆಗ ಗೊಬ್ಬರಗಾಲ, ಇದು ಸೆಂಟ್‌ ಫ್ರಾಂಕ್, ಬೇರೆಯವರನ್ನು ಹೆದರಿಸಲು ಸಹಾಯ ಮಾಡಿ ಎಂದಿದ್ದಾರೆ.

vinod gobbaragala

ಮರುದಿನ ರೂಪೇಶ್ ಅವರು ಎಲ್ಲರ ಮುಂದೆ ಹೇಳಿಕೊಂಡು ನಕ್ಕಿದ್ದಾರೆ. ವಿನೋದ್ ಮೇಲೆ ದೆವ್ವ ಬಂದಿದೆ ಅಂತ ಹೇಳಿಲ್ಲ, ಆದರೆ ವಿಚಿತ್ರವಾಗಿ ಆಡ್ತಿದ್ದಾನೆ ಅಂತ ಹೇಳಿದ್ವಿ ಎಂದು ರಾಕೇಶ್ ಅವರು ವಿವರಿಸಿದ್ದಾರೆ. ನಾನು ಹೆದರಿಸಿದಾಗ ನವಾಜ್ ಅವರು ಓಡಿಹೋದರು, ಆಮೇಲೆ ರೂಪೇಶ್ ಹೆದರಿದರು ಎಂದು ಹೇಳಿಕೊಂಡು ವಿನೋದ್(Vinod)  ನಕ್ಕಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *