ಉಗ್ರಪ್ಪ ಬಿಜೆಪಿ ಏಜೆಂಟ್, ಕಂತ್ರಿಗಳಿಂದ ಪಕ್ಷಕ್ಕೆ ಹಾನಿ: ಕೈ ಕಾರ್ಯಕರ್ತೆ ಕಿಡಿ

Public TV
1 Min Read
MANJULA NAGRAJ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕಲೆಕ್ಷನ್ ಗಿರಾಕಿ ಎಂದಿದ್ದ ಸಲೀಂ ಮತ್ತು ಸಂಸದ ಉಗ್ರಪ್ಪ ಬಿಜೆಪಿ ಏಜೆಂಟ್‍ಗಳು ಎಂದು ಕಾಂಗ್ರೆಸ್ ಕಾರ್ಯಕರ್ತೆ ಮಂಜುಳಾ ನಾಗರಾಜ್ ಕಿಡಿಕಾರಿದ್ದಾರೆ.

MANJULA NAGRAJ 1
ಡಿಕೆಶಿ ಬಗ್ಗೆ ಮಾತನಾಡಿರುವುದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಇದನ್ನು ಗಮನಿಸಿ ಉಗ್ರಪ್ಪ ಅವರ ಬಳಿ ಬಂದ ಮಂಜುಳಾ ನಾಗರಾಜ್, ಯಾಕೆ ಸರ್ ನಿಮಗೆ ಡಿಕೆಶಿ ಅವರು ಸಹಾಯನೇ ಮಾಡಿಲ್ವ? ನೀವೆಲ್ಲ ಕಂತ್ರಿ ನಾಯಿಗಳು. ನೀವು ಹೊಟ್ಟೆಗೆ ಅನ್ನ ತಿಂತಿರಾ ಅಲ್ಲ ಬೇರೆನಾದರು ತಿಂತಿರಾ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿನಿಂದ ಸಲೀಂ 6 ವರ್ಷ ಉಚ್ಚಾಟನೆ- ಉಗ್ರಪ್ಪಗೆ ಶೋಕಾಸ್‌ ನೋಟಿಸ್‌ ಜಾರಿ

ಇವರು ಅನ್ನ ತಿಂದ ಮನೆಗೆ ಕನ್ನ ಹಾಕುವ ಕಂತ್ರಿಗಳು. ಇವರು ಕಾಂಗ್ರೆಸ್ ಪಕ್ಷದಲ್ಲಿ ಇರಲು ಸಾಧ್ಯವಿಲ್ಲ. ಬುದ್ಧಿ ಇಲ್ಲದ ಇವರೆಲ್ಲರೂ ಕೂಡ ಮನಸ್ಸಲ್ಲಿ ಒಂದು ಹೊರಗಡೆ ಒಂದು ಇಟ್ಟುಕೊಂಡಿದ್ದಾರೆ. ನಾನು 19 ವರ್ಷ ವಯಸ್ಸಿದ್ದಾಗ ಕಾಂಗ್ರೆಸ್ ಪಕ್ಷಕ್ಕೆ ಬಂದವಳು. ನಾನು ಕಾಂಗ್ರೆಸ್‍ನ ಅನ್ನ ತಿಂದಿದ್ದೇನೆ ಇವರಂತಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಪರ್ಸಂಟೇಜ್ ಆರೋಪ – ನನಗೂ, ಪಕ್ಷಕ್ಕೂ ಸಂಬಂಧವಿಲ್ಲದ ವಿಚಾರ ಅಂದ್ರು ಡಿಕೆಶಿ

Share This Article