75 ವರ್ಷ, 75 ಗ್ರಾಮ, 75 ಗಂಟೆ – ಆಗಸ್ಟ್ 15ಕ್ಕೆ ಸಂಸದರಿಗೆ ಮೋದಿ ಟಾಸ್ಕ್

Public TV
2 Min Read
Modi

ನವದೆಹಲಿ: ಅಧಿವೇಶನದ ನಡುವೆ ಮಂಗಳವಾರ ಬಿಜೆಪಿ ಸಂಸದರ ಬೈಠಕ್ ನಡೆಯಿತು. ದೇಶಕ್ಕೆ ಸ್ವತಂತ್ರ ಬಂದು 75 ವರ್ಷ ಪೂರೈಸುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸದರಿಂದ ನೂತನ ಟಾಸ್ಕ್ ನೀಡಿದ್ದಾರೆ.

2047ಕ್ಕೆ ಭಾರತಕ್ಕೆ ಸ್ವತಂತ್ರ ಸಿಕ್ಕು 100 ವರ್ಷ ಆಗುವ ವೇಳೆ ಭಾರತ ಹೇಗೆ ಅಭಿವೃದ್ಧಿ ಹೊಂದಿರುತ್ತೆ ಎಂಬುದರ ಬಗ್ಗೆ ಜನರಿಂದ ನೇರವಾಗಿ ಮಾಹಿತಿ ಸಂಗ್ರಹಿಸಿ. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಇಬ್ಬರ ಕಾರ್ಯಕರ್ತರ ಜೋಡಿಯನ್ನು ಸಿದ್ಧಪಡಿಸಬೇಕು. ಈ ಜೋಡಿ 75 ಗ್ರಾಮಗಳ ಪ್ರವಾಸ ಮಾಡಿ ಒಂದು ಪಟ್ಟಿಯನ್ನು ಸಿದ್ಧಪಡಿಸಬೇಕು. ಡಿಜಿಟಲ್ ಲಿಟ್ರೆಸೆಯಲ್ಲಿ ದೇಶ ಎಲ್ಲಿಯವರೆಗೂ ತಲುಪಿದೆ ಮತ್ತು ಎಲ್ಲಿಯವರೆಗೂ ತಲುಪಬಹುದು ಮಾಹಿತಿಯನ್ನು ಆ ಪಟ್ಟಿ ಒಳಗೊಂಡಿರಬೇಕು. ಈ ವೇಳೆ ದೇಶಕ್ಕಾಗಿ ನಾನೇನು ಮಾಡಬಲ್ಲೆ ಅನ್ನೋ ಭಾವನೆಯನ್ನು ಜನರಲ್ಲಿ ಹುಟ್ಟು ಹಾಕಬೇಕು ಎಂದು ಪ್ರಧಾನಿಗಳು ಬೈಠಕ್ ನಲ್ಲಿ ಹೇಳಿದ್ದಾರೆ.

PM Modi Monsoon Session 6.jpg

ಕಾರ್ಯಕ್ರಮ ಜನಾಂದೋಲನ ಆಗಬೇಕು:
ದೇಶಕ್ಕೆ ಸ್ವತಂತ್ರ ಬಂದ ಈ ಸಂದರ್ಭದಲ್ಲಿ ಮಾಡುತ್ತಿರುವ ಕಾರ್ಯಕ್ರಮ ಜನಾಂದೋಲನವಾಗಬೇಕು. 75 ವರ್ಷದ ಸಂಭ್ರಮಾಚರಣೆಯಲ್ಲಿ 75 ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿ ಜನತೆಯೊಂದಿಗೆ 75 ಗಂಟೆ ಸಮಯ ಕಳೆಯಿರಿ. ಈ ಸಮಯದಲ್ಲಿ ದೇಶದ ಸಾಧನೆಗಳು ಸೇರಿದಂತೆ ಎಲ್ಲ ಮಾಹಿತಿಯನ್ನು ಹಂಚಿಕೊಳ್ಳಿ. ಆದ್ರೆ ಇದು ಸರ್ಕಾರಿ ಕಾರ್ಯಕ್ರಮ ಆಗದಂತೆ ಎಚ್ಚರಿಕೆ ವಹಿಸಬೇಕು. ಈ ವಿಶೇಷ ಕಾರ್ಯಕ್ರಮದಲ್ಲಿ ಹೆಚ್ಚು ಜನರು ಭಾಗಿಯಾಗುವಂತೆ ನೋಡಿಕೊಳ್ಳುವ ಮೂಲಕ ಜನ ಆಂದೋಲನವಾಗಿ ಬದಲಾಗಬೇಕೆಂದು ಸಂಸದರಿಗೆ ಪ್ರಧಾನಿಗಳು ಸೂಚಿಸಿದ್ದಾರೆ ಎಂದು ವರದಿಯಾಗಿದೆ.

pmmodi medium

ಇದೇ ಬೈಠಕ್ ನಲ್ಲಿ ವಿಪಕ್ಷ ನಾಯಕರ ಕೆಲಸಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿ, ಅವರನ್ನ ಇಕ್ಕಟ್ಟಿನಲ್ಲಿ ಸಿಲುಕಿಸುವ ತಂತ್ರಗಾರಿಕೆ ಮಾಡಬೇಕು. ಪ್ರತಿಬಾರಿಯೂ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದ ಚರ್ಚೆಗಳಿಗೆ ನೀವೆಲ್ಲರೂ ಸಿದ್ಧರಾಗಿರಬೇಕು ಎಂದು ಸಂಸದರಿಗೆ ಒಪಾಠ ಮಾಡಿದ್ದಾರೆ. ಆಗಸ್ಟ್ 15ರ ಹೊಸ ಟಾಸ್ಕ್ ನ್ನು ಆಗಸ್ಟ್ 15ರ ದ್ವಜಾರೋಹಣದ ಬಳಿಕ ಪ್ರಧಾನಿಗಳು ಬಹಿರಂಗವಾಗಿ ಘೋಷಣೆ ಮಾಡುವ ಸಾಧ್ಯತೆಗಳಿವೆ.

NARENDRA MODI medium

ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಗೌರವ್ ಗೊಗೊಯಿ ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಶ್ನೆ ಕೇಳಿದ್ದರು. ಕೇಂದ್ರ ಸರ್ಕಾರ ಸಿಎಎ ನಿಯಮಗಳನ್ನು ನೋಟಿಫೈ ಮಾಡಲು ದಿನಾಂಕವನ್ನು ಅಂತಿಮಗೊಳಿಸಿದೆಯೇ? ಒಂದು ನಿಗದಿಯಾಗಿದ್ರೆ ದಿನಾಂಕ ತಿಳಿಸಿ? ಇಲ್ಲ ಅಂದ್ರೆ ಯಾಕೆ ಎಂದು ಪ್ರಶ್ನೆ ಮಾಡಿದ್ದರು. ಗೌರವ್ ಪ್ರಶ್ನೆಗೆ ಉತ್ತರ ನೀಡಿರುವ ಗೃಹ ಸಚಿವಾಲಯ, ಡಿಸೆಂಬರ್ 12, 2019ರಂದು ಸಿಎಎ ನೋಟಿಫೈ ಮಾಡಲಾಗಿತ್ತು. 2020ರಲ್ಲಿ ಸಿಎಎ ಕಾನೂನಿನ ರೂಪ ಪಡೆದುಕೊಂಡಿತ್ತು. ಆದ್ರೆ ಲೋಕಸಭೆ ಮತ್ತು ರಾಜ್ಯಸಭೆಯ ಸಮಿತಿ ಈ ಕಾನೂನಿನ ನಿಯಮಗಳನ್ನು ಸಿದ್ಧಪಡಿಸಲು ಜನವರಿ 2022ರವರೆಗೆ ಸಮಯ ಕೇಳಿದೆ ಎಂದು ಉತ್ತರ ನೀಡಿದೆ. ಇದನ್ನೂ ಓದಿ: ಆಗಸ್ಟ್ ನಲ್ಲಿಯೇ ಮಕ್ಕಳಿಗೆ ಕೊರೊನಾ ಲಸಿಕೆ – ಆರೋಗ್ಯ ಸಚಿವರ ಸುಳಿವು

PM Modi medium

ಕೇಂದ್ರ ಸರ್ಕಾರ 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಕಾಯ್ದೆಯ ಪ್ರಕಾರ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಿಂದ ಬರುವ ಹಿಂದೂ, ಸಿಖ್, ಜೈನ್, ಕ್ರೈಸ್ತ ಮತ್ತು ಬೌದ್ಧ ಸಮುದಾಯದವರಿಗೆ ಭಾರತದ ಪೌರತ್ವ ನೀಡಲಾಗುತ್ತದೆ. ಇದನ್ನೂ ಓದಿ: ಅಸ್ಸಾಂ, ಮಿಜೊರಾಂ ಗಡಿಯಲ್ಲಿ ಹಿಂಸಾಚಾರ – ಐವರು ಪೊಲೀಸರು ಹುತಾತ್ಮ

Share This Article
Leave a Comment

Leave a Reply

Your email address will not be published. Required fields are marked *