ಸರ್ಕಾರಿ ಯೋಜನೆಗೆ ಒಳಪಡುವ ಎಲ್ಲರೂ ಎಸಿಬಿ ಚೌಕಟ್ಟಿಗೆ: ಡಿವೈಎಸ್ಪಿ ಗೋಪಾಲ್

Public TV
1 Min Read
nml2

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಸಾರ್ವಜನಿಕ ಸಭೆಯನ್ನ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಗ್ರಾಮ ಪಂಚಾಯತಿ ಆವರಣದಲ್ಲಿ ಆಯೋಜಿಸಿದ್ದರು.

ಸರ್ಕಾರಿ ಯೋಜನೆ ಮತ್ತು ಅನುದಾನದ ಹಣಕ್ಕೆ ಒಳಪಡುವವರು ಎಲ್ಲರೂ ಎಸಿಬಿ ಚೌಕಟ್ಟಿಗೆ ಬರುತ್ತಾರೆ. ಯಾರು ಲಂಚ ಕೇಳುವ ಹಾಗೂ ಸರ್ಕಾರಿ ಅಧಿಕಾರಿಗಳು ಕೆಲಸವನ್ನು ಮುಂದೂಡಿ ಹಣಕ್ಕೆ ಬೇಡಿಕೆ ಇಟ್ಟರೆ ಕ್ರಮ ಕೈಗೊಳ್ಳುತ್ತವೆ. ಸಾರ್ವಜನಿಕ ಸಭೆಯಲ್ಲಿ ಆ ಸ್ಥಳದಲ್ಲಿ ಪರಿಹಾರ ಜನರಿಗೆ ದೊರೆಯುತ್ತದೆ ಇಂತಹ ಸಭೆಗಳನ್ನು ಸದುಪಯೋಗಪಡಿಸುಕೊಳ್ಳಬೇಕೆಂದು ಡಿವೈಎಸ್ಪಿ ಗೋಪಾಲ್ ಜೋಗಿನ್ ನಾಗರಿಕರಿಗೆ ಸಲಹೆ ನೀಡಿದರು.

ನಂತರ ಮಾತನಾಡಿದ ಎಸಿಬಿ ನಿರೀಕ್ಷಕ ಕುಮಾರಸ್ವಾಮಿ, ಸರ್ಕಾರಿ ಅಧಿಕಾರಿಗಳು ಯಾರೇ ಆಗಲಿ, ಸರ್ಕಾರಿ ಯೋಜನೆ ರೂಪಿಸಲು ಹಾಗೂ ಕೆಲಸ ನಿರ್ವಹಿಸಲು ಹಣಕ್ಕೆ ಬೇಡಿಕೆಯಿಟ್ಟಾಗ ದೂರು ನೀಡಿ. ದೂರು ನೀಡಿದವರ ಹೆಸರು ಗೌಪ್ಯವಾಗಿಡುಲಾಗುವುದು. ಜನರಿಗೆ ಕೆಲಸ ವಿಳಂಬ ಮಾಡಿದ್ದಾರೆ ಸರ್ಕಾರಿ ನೌಕರರ ವಿರುದ್ಧ ಸಾರ್ವಜನಿಕರು ಮೃದು ಧೋರಣೆ ತೋರಬಹುದು. ಆದರೆ ಭಯ ಪಡದೇ ಭ್ರಷ್ಟಚಾರಕ್ಕೆ ಇಳಿದಾಗ ದೂರು ನೀಡಿ ಎಂದರು.

nml 4

ಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸೋಂಪುರ ಸುತ್ತಮುತ್ತ ಗ್ರಾಮ ಪಂಚಾಯತಿ ಪಿಡಿಓಗಳನ್ನು ಸಭೆಗೆ ಕರೆದಿದ್ದರೂ ಗೈರದಾವರೆ ಹೆಚ್ಚು. ಇದಕ್ಕೆ ಡಿವೈಎಸ್ಪಿ ಗೋಪಾಲ್ ಜೋಗಿನ್ ಮುಂದಿನ ಸಾರ್ವಜನಿಕ ಸಭೆಗಳಿಗೆ ಅಧಿಕಾರಿಗಳು ಗೈರಾಗಬಾರದು ಎಂದು ಸಂಬಂಧಪಟ್ಟ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಸಿಇಓಗಳಿಗೆ ಪತ್ರ ಬರೆದು ಎಚ್ಚರಿಸುತ್ತೇವೆ. ಎಲ್ಲಾ ಸರ್ಕಾರಿ ಕಚೇರಿ ಮುಂದೆ ಎಸಿಬಿ ಕಚೇರಿ ಹಾಗೂ ಅಧಿಕಾರಿಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆ ಇರಬೇಕು. ಯಾವ ಕಚೇರಿ ಮುಂದೆ ಈ ಎಸಿಬಿ ಕಚೇರಿ ವಿಳಾಸ ಇರದಿದ್ದರೆ ಕ್ರಮಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಂಚಾಯತಿ ಪಿಡಿಓಗಳಾದ ರವೀಂದ್ರ, ಗಂಗರಂಗಯ್ಯ, ಗ್ರಾಮ ಪಂಚಾಯತಿ ಸದಸ್ಯರು, ಕೃಷಿ ಅಧಿಕಾರಿಗಳು, ಇನ್ನಿತರರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *