ತೋಟದಲ್ಲಿ ಚಿರತೆ ಹೆಜ್ಜೆ ಕಂಡ ರೈತರಲ್ಲಿ ಆತಂಕ

Public TV
1 Min Read
NML A copy

ಬೆಂಗಳೂರು: ಅಡಿಕೆ ಹಾಗೂ ವೀಳ್ಯದೆಲೆ ತೋಟದಲ್ಲಿ ಚಿರತೆ ಹೆಜ್ಜೆ ಕಂಡು ಬಂದಿದ್ದು, ಇದರಿಂದ ರೈತರು ಆತಂಕಗೊಂಡಿದ್ದಾರೆ.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೊರವಲಯದ ವೀಳ್ಯದೆಲೆ ತೋಟದಲ್ಲಿ ಚಿರತೆ ಹೆಜ್ಜೆ ಕಂಡಿವೆ. ಮಂಜುನಾಥ್ ಎಂಬವರಿಗೆ ಸೇರಿದ ತೋಟದಲ್ಲಿ ಒಂದು ಚಿರತೆ ಸಂಚರಿಸಿರುವ ಸ್ಪಷ್ಟ ಚಿತ್ರಣ ಗೋಚರವಾಗಿದೆ.

ತೋಟದಲ್ಲಿ ನೀರು ಹಾಯಿಸಿದ್ದರಿಂದ ಭೂಮಿ ತೇವಾಂಶದಿಂದ ಕೂಡಿತ್ತು. ಈ ಹಿನ್ನೆಲೆಯಲ್ಲಿ ತೋಟದಲ್ಲೆಲ್ಲಾ ಚಿರತೆ ಹೆಜ್ಜೆ ಗುರುತುಗಳು ಸ್ಪಷ್ಟವಾಗಿ ಕಾಣಿಸಿದೆ. ಚಿರತೆ ಹೆಜ್ಜೆ ಗುರುತು ನೋಡಿದ ರೈತರು ಆತಂಕದಲ್ಲಿದ್ದಾರೆ. ಈಗಾಗಲೇ ನೆಲಮಂಗಲ ವಲಯ ಅರಣ್ಯ ಅಧಿಕಾರಿಗಳಿಗೆ ಚಿರತೆ ಹೆಜ್ಜೆ ಗುರುತಿನ ಮಾಹಿತಿಯನ್ನು ಸ್ಥಳೀಯರು ತಿಳಿಸಿದ್ದಾರೆ. ಈ ಘಟನೆ ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *