Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮದ್ಯಕ್ಕೆ ದಾಸರಾದ ದಂಪತಿ – ಅಧಿಕಾರಿಗಳಿಂದ ಪಾಲಕರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ 5 ಮಕ್ಕಳ ರಕ್ಷಣೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಮದ್ಯಕ್ಕೆ ದಾಸರಾದ ದಂಪತಿ – ಅಧಿಕಾರಿಗಳಿಂದ ಪಾಲಕರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ 5 ಮಕ್ಕಳ ರಕ್ಷಣೆ

Districts

ಮದ್ಯಕ್ಕೆ ದಾಸರಾದ ದಂಪತಿ – ಅಧಿಕಾರಿಗಳಿಂದ ಪಾಲಕರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ 5 ಮಕ್ಕಳ ರಕ್ಷಣೆ

Public TV
Last updated: December 19, 2019 11:08 pm
Public TV
Share
2 Min Read
collage rmg makkalu
SHARE

ರಾಮನಗರ: ಮದ್ಯಕ್ಕೆ ದಾಸರಾಗಿ ಮಕ್ಕಳನ್ನ ನಿರ್ಲಕ್ಷ್ಯದಿಂದ ಕಾಣುತ್ತಿದ್ದ ಪೋಷಕರಿಂದ ಹಿಂಸೆಗೆ ಒಳಗಾಗಿದ್ದ ಐವರು ಚಿಕ್ಕ ಚಿಕ್ಕ ಮಕ್ಕಳನ್ನು ರಾಮನಗರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ರಕ್ಷಿಸಿರುವ ಘಟನೆ ಮಾಗಡಿಯಲ್ಲಿ ನಡೆದಿದೆ.

ಆಂಧ್ರ ಮೂಲದ ದಂಪತಿಗಳ ಮಕ್ಕಳಾದ ಹನುಮಂತ (8), ವಿನೋದ್(6), ಕಾರ್ತಿ(4), ಮೂರ್ತಿ (2) ಮತ್ತು ಪ್ರಿಯಾಂಕ (7 ತಿಂಗಳ ಮಗು) ರಕ್ಷಣೆಗೆ ಒಳಗಾದ ಮಕ್ಕಳಾಗಿದ್ದಾರೆ. ಅಂದಹಾಗೇ ಕಳೆದ ಅಕ್ಟೋಬರ್ ನಲ್ಲಿ ಆಂಧ್ರ ಮೂಲದ ದಂಪತಿ ಮಕ್ಕಳೊಡನೆ ಉದ್ಯೋಗ ಅರಿಸಿ ಮಾಗಡಿ ತಾಲೂಕಿಗೆ ಆಗಮಿಸಿದ್ದಾರೆ. ಟೌನಿನ ವಿದ್ಯಾನಗರದಲ್ಲಿ ಸ್ಥಳೀಯ ಶಿಕ್ಷಕರೊಬ್ಬರಿಗೆ ಸೇರಿದ್ದ ನಿರ್ಮಾಣ ಹಂತದಲ್ಲಿ ಮನೆಯಲ್ಲಿ ತಾತ್ಕಾಲಿಕವಾಗಿ ವಾಸವಾಗಿದ್ದಾರೆ. ಸಣ್ಣ ಮಕ್ಕಳು ಹಾಗೂ ದಂಪತಿಗಳಿದ್ದ ಇರುವ ಕಾರಣ, ಮಾಲೀಕರು ಕಟ್ಟಡ ನಿರ್ಮಾಣವಾಗುವವರೆಗೂ, ಮನೆಯಲ್ಲಿ ಆಶ್ರಯ ಪಡೆಯುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಮದ್ಯಕ್ಕೆ ದಾಸರಾಗಿದ್ದ ದಂಪತಿ, ಮಕ್ಕಳನ್ನು ಸರಿಯಾಗಿ ಪಾಲನೆ ಮಾಡದೇ, ನಿತ್ಯ ಹಿಂಸೆ ನೀಡುತ್ತಿದ್ದರು. ಅಲ್ಲದೇ ಕಳೆದ ಮೂರು ದಿನಗಳ ಹಿಂದೆ ತಾಯಿ ಕೂಡ ಮಕ್ಕಳನ್ನು ಬಿಟ್ಟು ಹೊರಟು ಹೋಗಿದ್ದಾಳೆ. ಇನ್ನು ತಂದೆಯೂ ಸರಿಯಾಗಿ ಪೋಷಣೆ ಮಾಡುತ್ತಿರಲಿಲ್ಲ. ರಾತ್ರಿ ಕುಡಿದು ಬಂದ ತಂದೆ ವಿಪರೀತವಾಗಿ ಮಕ್ಕಳಿಗೆ ಹೊಡೆದಿದ್ದಾನೆ. ಇದನ್ನು ನೋಡಲಾಗದ ಸ್ಥಳೀಯರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳೀಯರ ದೂರು ಸ್ವೀಕರಿಸಿದ ಸಹಾಯವಾಣಿಯ ಸಿಬ್ಬಂದಿ, ಮಾಹಿತಿ ಪಡೆದು ದಾಳಿ ಮಾಡಿ ಐದು ಮಂದಿ ಮಕ್ಕಳನ್ನು ರಕ್ಷಿಸಿದ್ದಾರೆ.

collage rmgg makkalu

ತಂದೆ ತಾಯಿಗಳಿಬ್ಬರು ಕೆಲಸಕ್ಕೆ ತೆರಳದೇ, ಮದ್ಯಕ್ಕೆ ದಾಸರಾಗಿದ್ದರು. ಹಿರಿಯ ಮಗ ಹನುಮಂತನೇ ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಅಕ್ಕ ಪಕ್ಕದ ಮನೆಯವರಿಂದ ದಂಪತಿಗಳು ಅನ್ನ ಮತ್ತಿತ್ತರ ಆಹಾರ ಪದಾರ್ಥಗಳನ್ನು ಪಡೆದು ಜೀವನ ಸಾಗಿಸುತ್ತಿದ್ರು. ಪ್ರತಿ ನಿತ್ಯ ದಂಪತಿ ನಡುವೆ ಜಗಳವಾಗುತ್ತಿತ್ತು. ಜೊತೆಗೆ ಕಳೆದ ಮೂರು ದಿನಗಳ ಹಿಂದೆ ಮಕ್ಕಳನ್ನು ಬಿಟ್ಟು ಹೋಗಿರುವ ತಾಯಿಯ ಸುಳಿವು ಕೂಡ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯಕ್ಕೆ ರಕ್ಷಣೆಗೆ ಒಳಗಾಗಿರುವ ಮಕ್ಕಳಲ್ಲಿ ತೊಟ್ಟಿಲು ಕೇಂದ್ರದಲ್ಲಿ ಸಣ್ಣ ಮಗುವನ್ನು ಹಾಗೂ ಉಳಿದ ನಾಲ್ವರನ್ನು ಬಾಲಮಂದಿರದಲ್ಲಿ ಬಿಡಲಾಗಿದೆ. ಮಕ್ಕಳನ್ನು ತೊರೆದು ಹೋಗಿರುವ ತಾಯಿಯನ್ನ ಕರೆತಂದು ಪತಿ-ಪತ್ನಿಯನ್ನು ಅಧಿಕಾರಿಗಳು ಶುಕ್ರವಾರ ಮಕ್ಕಳ ಸಮಿತಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ. ಅಲ್ಲದೇ ಮಕ್ಕಳ ಸಮಿತಿ ತೀರ್ಮಾನದಂತೆ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

TAGGED:AlcoholicschildrenCouplesofficialsPublic TVramanagaraಅಧಿಕಾರಿಗಳುದಂಪತಿಪಬ್ಲಿಕ್ ಟಿವಿಮಕ್ಕಳುಮದ್ಯವೆಸನಿಗಳುರಾಮನಗರ
Share This Article
Facebook Whatsapp Whatsapp Telegram

Cinema news

Sangeeth Sagar
ಸಿನಿಮಾ ಚಿತ್ರೀಕರಣ ವೇಳೆ ಹೃದಯಾಘಾತದಿಂದ ನಿರ್ದೇಶಕ ಸಂಗೀತ್‌ ಸಾಗರ್‌ ಸಾವು
Cinema Latest Main Post Sandalwood Shivamogga
Dhanya Ramkumar
ಶಾರುಖ್ ಪುತ್ರನ ಜೊತೆ ಧನ್ಯಾ ರಾಮ್‌ಕುಮಾರ್; ಬಾಲಿವುಡ್‌ ಪ್ಲ್ಯಾನ್‌ನಲ್ಲಿದ್ದಾರಾ?
Bollywood Cinema Latest Sandalwood Top Stories
Jai Lalitha Serial
ಹೊಸ ಧಾರಾವಾಹಿ: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಜೈ ಲಲಿತಾ
Cinema Latest Top Stories TV Shows
Arjun Janya
ಅರ್ಜುನ್ ಜನ್ಯ ಸಂಯೋಜನೆಯಲ್ಲಿ ʻಮಹಾಗುರು ಮಹಾದೇವʼ ಆಲ್ಬಂ
Cinema Latest Sandalwood

You Might Also Like

Datta Jayanti celebrations in Chikkamagaluru 2
Chikkamagaluru

ಚಿಕ್ಕಮಗಳೂರಲ್ಲಿ ದತ್ತಜಯಂತಿ ಸಂಭ್ರಮ – ಬೃಹತ್ ಶೋಭಾಯಾತ್ರೆಗೆ ಶಾಂತಿಯುತ ತೆರೆ

Public TV
By Public TV
2 minutes ago
Hassan
Bengaluru City

ಆಶಿಕಾ ರಂಗನಾಥ್ ಸಂಬಂಧಿ ಅಚಲ ಆತ್ಮಹತ್ಯೆ ಕೇಸ್ – ಪೊಲೀಸರ ಕೈಸೇರಿದ CDR ರಿಪೋರ್ಟ್, ಆರೋಪಿ ಜೊತೆ ಸಂಪರ್ಕ ಪತ್ತೆ

Public TV
By Public TV
15 minutes ago
Vladimir Putin
Latest

ಇಂದು ಪುಟಿನ್‌ ಭಾರತಕ್ಕೆ – ಐದು ಸ್ತರದ ರಕ್ಷಣೆ ಹೇಗಿರಲಿದೆ?

Public TV
By Public TV
23 minutes ago
Drumstick Main
Bengaluru City

ಗ್ರಾಹಕರಿಗೆ ಶಾಕ್ – ನುಗ್ಗೇಕಾಯಿ ಕೆಜಿಗೆ 700 ರೂ.

Public TV
By Public TV
9 hours ago
Bengaluru Andrahalli
Bengaluru City

ಪ್ರೀತಿಸಿ ಮದ್ವೆಯಾಗಿದ್ದ ನವವಿವಾಹಿತೆ ಮೂರೇ ತಿಂಗಳಿಗೆ ಆತ್ಮಹತ್ಯೆ!

Public TV
By Public TV
9 hours ago
d.k.shivakumar KPCC
Latest

ಡಿ.8 ರ ಸರ್ವಪಕ್ಷ‌ ಸಭೆ ಮುಂದೂಡಿಕೆ: ಡಿ.ಕೆ.ಶಿವಕುಮಾರ್

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?