ಶ್ರೀಗಂಧ ಕಳ್ಳರಿಂದ ಅರಣ್ಯಾಧಿಕಾರಿ ಮೇಲೆ ಹಲ್ಲೆ

Public TV
1 Min Read
SMG Forest officer

ಶಿವಮೊಗ್ಗ : ಉಪವಲಯ ಅರಣ್ಯಾಧಿಕಾರಿ ಮೇಲೆ ಶ್ರೀಗಂಧ ಕಳ್ಳರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಹೆಗ್ಗರಸು ಗ್ರಾಮದ ಬಳಿ ನಡೆದಿದೆ.

ಡಿಆರ್‍ಎಫ್‍ಒ ಗೋವಿಂದರಾಜ್ ಹಲ್ಲೆಗೊಳಗಾದ ಅರಣ್ಯಾಧಿಕಾರಿ. ಹಲ್ಲೆಗೊಳಗಾಗಿ ತೀವ್ರ ಗಾಯಗೊಂಡಿರುವ ಗೋವಿಂದರಾಜ್ ಅವರನ್ನು ಹೊಸನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಧದ ತುಂಡುಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಅರಣ್ಯ ಸಿಬ್ಬಂದಿಗೆ ಮಾಹಿತಿ ಬಂದಿತ್ತು. ಈ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಡಿಆರ್‍ಎಫ್‍ಒ ಗೋವಿಂದ ರಾಜ್ ತಂಡ ಶ್ರೀಗಂಧ ಕಳ್ಳರ ಮೇಲೆ ದಾಳಿ ನಡೆಸಿತ್ತು.

ದಾಳಿ ವೇಳೆ ಕುಮಾರ್, ಮೋಹನ್ ಸೇರಿದಂತೆ ಐದು ಮಂದಿ ಕಳ್ಳರು ಅರಣ್ಯ ಸಿಬ್ಬಂದಿ ಮೇಲೆ ಮಚ್ಚು ಹಾಗು ಶ್ರೀಗಂಧ ತುಂಡಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಘಟನೆ ಬಳಿಕ ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Share This Article
Leave a Comment

Leave a Reply

Your email address will not be published. Required fields are marked *