ಮಹಾಲಕ್ಷ್ಮಿ ಲೇಔಟ್‍ನಲ್ಲಿ ಅರಳಿದ ಕಮಲ – ನೆಲಕಚ್ಚಿದ ಕೈ-ತೆನೆ

Public TV
1 Min Read
gopalayya

ಬೆಂಗಳೂರು: ಜೆಡಿಎಸ್‍ನ ಭದ್ರಕೋಟೆಯಾಗಿರುವ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಈ ಬಾರಿ ಉಪಸಮರದಲ್ಲಿ ಕಮಲ ಅರಳಿದ್ದು, ಕೈ- ತೆನೆ ನೆಲಕಚ್ಚಿದೆ. ಬಿಜೆಪಿ ಗೆಲುವಿನೊಂದಿಗೆ ಕಾರ್ಯಕರ್ತರಲ್ಲಿ ಹೊಸ ಮಂದಹಾಸ, ಚೈತನ್ಯ ಮೂಡಿದೆ.

ಜೆಡಿಎಸ್‍ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದ ಗೋಪಾಲಯ್ಯ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಗೆಲುವಿನ ನಾಗಲೋಟವನ್ನ ಮುಂದುವರೆಸಿದ್ದಾರೆ. ಫಲಿತಾಂಶದ ಬಳಿಕ ಮಾತನಾಡಿದ ಗೋಪಾಲಯ್ಯ, ಕ್ಷೇತ್ರದ ಜನರ ಸಹಕಾರ, ಬೆಂಬಲದಿಂದ ಗೆಲುವು ಸಿಕ್ಕಿದೆ. ಈ ಚುನಾವಣೆಯಲ್ಲಿ ಮತದಾರರು ನನ್ನ ಕೈ ಹಿಡಿತಾರೆ ಎನ್ನುವ ವಿಶ್ವಾಸವಿತ್ತು. ವಿಶ್ವಾಸಕ್ಕೆ ತಕ್ಕಂತೆ ಗೆಲುವು ಸಿಕ್ಕಿದೆ. ಯಾವ ಮಂತ್ರಿ ಸ್ಥಾನವನ್ನ ಕೊಟ್ಟರು ನಿಭಾಯಿಸುತ್ತೇನೆ ಎಂದು ಖುಷಿ ಹಂಚಿಕೊಂಡರು.

gopalayya 1

ತೆನೆ ಬಿಟ್ಟು ಕಮಲ ಹಿಡಿದು, ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದ ಗೋಪಾಲಯ್ಯಗೆ, ತಮ್ಮ ಪತ್ನಿ ಹೇಮಲತಾರಿಂದ ಹೆಚ್ಚಿನ ಬೆಂಬಲ ಸಿಕ್ಕಿತ್ತು. ಹೇಮಾಲತಾ ಜೆಡಿಎಸ್ ಪಕ್ಷದ ಪಾಲಿಕೆ ಸದಸ್ಯೆರಾಗಿದ್ದರೂ ಬಿಜೆಪಿ ಅಭ್ಯರ್ಥಿ ಹಾಗೂ ತಮ್ಮ ಪತಿಗೆ ಬೆಂಬಲವನ್ನ ಕೊಟ್ಟು, ಚುನಾವಣಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಜೆಡಿಎಸ್ ಪಕ್ಷದ ನಾಯಕರ ಎಚ್ಚರಿಕೆಗೂ ಜಗ್ಗದೆ ಪ್ರಚಾರ ಸಮಾರಂಭಗಳಲ್ಲಿ ಭಾಗಿಯಾಗಿ ಹಗಲಿರುಳು ಶ್ರಮಿಸಿದ್ದರು. ಇದು ಜೆಡಿಎಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿ, ಪಕ್ಷ ವಿರೋಧಿ ಚಟುವಟಿಕೆ ಕಾರಣ ನೀಡಿ ಹೇಮಲತಾರನ್ನ ಜೆಡಿಎಸ್‍ನಿಂದ ಉಚ್ಛಾಟಿಸಲಾಯಿತು. ಆದರೂ ತಮ್ಮ ಪತಿಯ ಬೆನ್ನಿಗೆ ನಿಂತು ಚುನಾವಣೆಯಲ್ಲಿ ವಾರ್ಡ್ ಮಟ್ಟದಲ್ಲಿ ಸಂಚರಿಸಿ, ಪತಿಯ ಗೆಲುವಿಗೆ ಕಾರಣರಾದರು.

Share This Article
Leave a Comment

Leave a Reply

Your email address will not be published. Required fields are marked *