Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪರಭಾಷೆಗಳ ಪ್ರಾಬಲ್ಯದ ಮಧ್ಯೆ ಕನ್ನಡ ಉಳಿವಿಗಾಗಿ ಶ್ರಮಿಸಿದ ಎಂ.ಜಿ ದೇಶಪಾಂಡೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bidar | ಪರಭಾಷೆಗಳ ಪ್ರಾಬಲ್ಯದ ಮಧ್ಯೆ ಕನ್ನಡ ಉಳಿವಿಗಾಗಿ ಶ್ರಮಿಸಿದ ಎಂ.ಜಿ ದೇಶಪಾಂಡೆ

Bidar

ಪರಭಾಷೆಗಳ ಪ್ರಾಬಲ್ಯದ ಮಧ್ಯೆ ಕನ್ನಡ ಉಳಿವಿಗಾಗಿ ಶ್ರಮಿಸಿದ ಎಂ.ಜಿ ದೇಶಪಾಂಡೆ

Public TV
Last updated: August 29, 2019 8:59 am
Public TV
Share
3 Min Read
bdr public hero
SHARE

ಬೀದರ್: ಮರಾಠಿ, ಉರ್ದು, ತೆಲುಗು, ಹಿಂದಿ ಭಾಷೆಗಳು ಅಟ್ಟಹಾಸ ಮೆರೆಯುತ್ತಿರುವಾಗ ಗಡಿ ಜಿಲ್ಲೆಯಲ್ಲಿ “ಖ್ಯಾತಿ” ಎಂಬ ಕನ್ನಡದ ಮೊದಲ ವಾರ ಪತ್ರಿಕೆ ಪ್ರಾರಂಭ ಮಾಡಿ, ಕನ್ನಡವನ್ನು ಉಳಿಸಿದ ಕೀರ್ತಿ ನಮ್ಮ ಪಬ್ಲಿಕ್ ಹೀರೋ ಹಿರಿಯ ಸಾಹಿತಿ ಎಂ.ಜಿ ದೇಶಪಾಂಡೆ ಅವರಿಗೆ ಸಲ್ಲುತ್ತದೆ.

ಮೂಲತಃ ಆಂಧ್ರ ಪ್ರದೇಶದವರಾದ ಎಂ.ಜಿ ದೇಶಪಾಂಡೆ ಅವರು ವೃತಿಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಆದರೆ ಹೊರರಾಜ್ಯದಿಂದ ಕರ್ನಾಟಕ್ಕೆ ಬಂದ ಮೇಲೆ ಕನ್ನಡಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿ ಇಟ್ಟಿದ್ದಾರೆ. ಸುಮಾರು 50 ವರ್ಷ ಸುದೀರ್ಘವಾಗಿ ಕನ್ನಡ ಸಾಹಿತ್ಯಕ್ಕಾಗಿ ತಮ್ಮ ಸೇವೆ ಸಲ್ಲಿಸಿ, ಗಡಿ ಜಿಲ್ಲೆಯಲ್ಲಿ ಹಲವಾರ ಸಾಹಿತಿಗಳನ್ನು ಮುಖ್ಯವಾಹಿನಿಗೆ ತಂದ ಕಿರ್ತಿ ಇವರದ್ದಾಗಿದೆ. ಗಡಿ ಭಾಗದ ಕನ್ನಡದ ಕಂದ ‘ಖ್ಯಾತಿ ಕವಿ’ ಎಂದು ಎಂ.ಜಿ ದೇಶಪಾಂಡೆ ಹೆಸರುಗಳಿಸಿದ್ದಾರೆ. ಕನ್ನಡದ ವಾರ ಪತ್ರಿಕೆ ‘ಖ್ಯಾತಿ’ಯನ್ನು ಹೊರ ತಂದಾಗ ಅನ್ಯಭಾಷಿಕರು ಗಲಾಟೆ ಮಾಡಿ, ಹಲ್ಲೆ ನಡೆಸಿದ್ದರು. ಈ ಪ್ರತಿಕೆ ಮುದ್ರಣವಾಗಬಾರದು ಎಂದು ವಿರೋಧಿಸಿದ್ದರು. ಆ ಸಂದರ್ಭದಲ್ಲಿ ದೇಶಪಾಂಡೆ ಅವರು ಕನ್ನಡಕ್ಕಾಗಿ ಟೊಂಕ ಕಟ್ಟಿ ನಿಂತು, ಕನ್ನಡ ವಾರ ಪತ್ರಿಕೆಯನ್ನು ಮುದ್ರಿಸಿ ಹೊರತಂದು ಕನ್ನಡದ ಕಂದನಾದರು.

bdr public hero 1

70ರ ದಶಕದಲ್ಲಿ ಮರಾಠಿ, ತೆಲುಗು, ಉರ್ದು ಹಾಗೂ ಹಿಂದೆ ಭಾಷೆಗಳ ಪ್ರಭಾವದಿಂದ ಗಡಿ ಜಿಲ್ಲೆ ಬೀದರ್ ತತ್ತರಿಸಿ ಹೋಗಿತ್ತು. ಕನ್ನಡದ ಕಾರ್ಯಕ್ರಮಗಳನ್ನು ಮಾಡುವುದು, ಕನ್ನಡದ ಸಂಘಗಳನ್ನು ಕಟ್ಟುವುದು, ಕನ್ನಡ ಪತ್ರಿಕೆಗಳನ್ನು ಮುದ್ರಣ ಮಾಡುವ ಕೆಲಸವನ್ನು ಅನ್ಯಭಾಷಿಕರು ಸಹಿಸುತ್ತಿರಲಿಲ್ಲ. ಕನ್ನಡಕ್ಕಾಗಿ ದುಡಿಯುವ ವ್ಯಕ್ತಿಗಳ ಮೇಲೆ ಹಲ್ಲೆ ಮಾಡಿ, ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದರು. ಆ ಸಮಯದಲ್ಲಿ ಆಂಧ್ರ ಪ್ರದೇಶದಿಂದ ಬಂದು ಬ್ಯಾಂಕ್ ಉದ್ಯೋಗದಲ್ಲಿ ತೊಡಗಿಕೊಂಡಿದ್ದ ದೇಶಪಾಂಡೆ ಅವರು ಹಿರಿಯ ಸಾಹಿತಿಯಾಗಿ, ಕನ್ನಡಕ್ಕಾಗಿ ಟೊಂಕ ಕಟ್ಟಿನಿಂತರು. ಅನ್ಯಭಾಷೆಗಳ ಪತ್ರಿಕೆಗಳು ಮುದ್ರಣವಾಗುತ್ತಿದ್ದಾಗ ‘ಖ್ಯಾತಿ’ ಕನ್ನಡದ ಮೊದಲ ವಾರ ಪತ್ರಿಕೆಯನ್ನು ಕೈಬರಹದಲ್ಲಿ ಬರೆದು ಕಲ್ಲಚ್ಚಿನಲ್ಲಿ ಮುದ್ರಣ ಮಾಡಿದರು.

ಮೊದಲ ಕನ್ನಡ ಪತ್ರಿಕೆಯನ್ನು ಮುದ್ರಣ ಮಾಡಿದ್ದರಿಂದ ಅನ್ಯಭಾಷಿಕರು ದೇಶಪಾಂಡೆ ಅವರ ಮೇಲೆ ಹಲ್ಲೆ, ಗಲಾಟೆ ಕೂಡ ನಡೆಸಿದ್ದರು. ಆದರೆ ಯಾವ ದಬ್ಬಾಳಿಕೆಗೂ ಅಂಜದೆ ಕನ್ನಡಕ್ಕಾಗಿ ಶ್ರಮಿಸಿ ಜಿಲ್ಲೆಯಲ್ಲಿ ಕನ್ನಡ ಉಳಿಸಿದ ಕೀರ್ತಿ ದೇಶಪಾಂಡೆ ಅವರಿಗೆ ಸಲ್ಲುತ್ತದೆ. ಬೀದರ್ ನಗರದ ರಾಂಪೂರೆ ಕಾಲೋನಿ ನಿವಾಸಿಯಾಗಿರುವ ದೇಶಪಾಂಡೆಯವರು 7ಂರ ದಶಕದಲ್ಲಿ ಕನ್ನಡಕ್ಕಾಗಿ ತಮ್ಮ ಜೀವವನ್ನೆ ಪಣಕ್ಕಿಟ್ಟಿದ್ದರು. ಬ್ಯಾಂಕ್ ವೃತಿಯಲ್ಲಿ ಇದ್ದುಕೊಂಡೆ ಸಾಹಿತ್ಯದ ಒಲವು ಬೆಳಸಿಕೊಂಡ ದೇಶಪಾಂಡೆಯವರು ಕಥೆ, ಕಾದಂಬರಿ, ಕಾವ್ಯ, ಅನುವಾದ, ನಾಕಟ, ಇತಿಹಾಸ, ಲೇಖನ, ಚರಿತ್ರೆ, ವಚನ ಸಾಹಿತ್ಯ, ಸಂಪಾದನೆ ಸೇರಿದಂತೆ ಒಟ್ಟು 60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್, ಧರಿನಾಡು, ಚುಟುಕು ಪರಿಷತ್, ಬಿ ಕಲ್ಯಾಣ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ 5 ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷರಾದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 70ನೇ ದಶಕದಲ್ಲಿ ಗಡಿ ಭಾಗದಲ್ಲಿ ಅನ್ಯಭಾಷಿಕರ ಅಟ್ಟಹಾಸ ಹೇಗಿತ್ತು ಎಂಬುದನ್ನು ಹಾಗೂ ಕನ್ನಡ ಉಳಿಯುವಿಗಾಗಿ ತಾವು ಅನುಭವಿಸಿದ ಸಂಕಷ್ಟದ ಬಗ್ಗೆ ದೇಸಪಾಂಡೆ ಅವರು ತಿಳಿಸಿದ್ದಾರೆ.

bdr public hero 2

ಇವರ ಕೃತಿಗಳ ಮೇಲೆ ಕೆಲವು ಯುವ ಸಾಹಿತಿಗಳು ಪಿಎಚ್‍ಡಿ ಮಾಡಿದ್ದು, 900 ಪುಟಗಳ ಅಭಿನಂದನಾ ಗ್ರಂಥವನ್ನು ಕೂಡಾ ಹೊರತಂದಿದ್ದಾರೆ. ದೇಶಪಾಂಡೆಯವರ ‘ಮೀರಾಭಾಯಿ’ ಕವನ ಸಂಕಲನ ಮಹಾರಾಷ್ಟ್ರ ವಿವಿಯಲ್ಲಿ ಪಠ್ಯವಾಗಿದೆ. ಕನ್ನಡ ಭಾಷೆಯ 5ನೇಯ ತರಗತಿಯ ವಿದ್ಯಾರ್ಥಿಗಳು ಇವರ ಕವಿತೆಗಳನ್ನು ಓದುತ್ತಿದ್ದಾರೆ. ಕಲಬುರಗಿ ಹಾಗೂ ವಿಜಯಪುರ ಮಹಿಳಾ ವಿವಿಯ ಪಠ್ಯದಲ್ಲಿ ಇವರ ಕವಿತೆಗಳನ್ನು ಸೇರಿಸಲಾಗಿದೆ. ರಾಜ್ಯ ಮಟ್ಟದ “ಕನ್ನಡ ರತ್ನ” ಸೇರಿದಂತೆ, ಜಿಲ್ಲಾ, ಹಾಗೂ ತಾಲೂಕು ಮಟ್ಟದ ಅನೇಕ ಪ್ರಶಸ್ತಿಗಳು ಹಾಗೂ ಸನ್ಮಾನಗಳು ಇವರಿಗೆ ಸಂದಿವೆ.

ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲೆಮರೆಕಾಯಿಯಂತಿರುವ 1,000 ಸಾಧಕರನ್ನು ಗುರಿತಿಸಿ ದೇಶಪಾಂಡೆ ಅವರು ಪ್ರೋತ್ಸಾಹ ನೀಡಿದ್ದಾರೆ. ಅನ್ಯಭಾಷಗಳ ಪ್ರಭಾವ ಹೆಚ್ಚಿರುವ ಜಿಲ್ಲೆಯಲ್ಲಿ ಕನ್ನಡ ಉಳಿವಿಗಾಗಿ 5 ಕನ್ನಡ ಸಾಹಿತ್ಯ ಸಂಘಟನೆಗಳನ್ನು ಕೂಡ ದೇಶಪಾಂಡೆ ಅವರು ಸಂಸ್ಥಾಪನೆ ಮಾಡಿದ್ದಾರೆ. ಈ ಹಿರಿಯ ಸಾಹಿತಿ ಬಗ್ಗೆ ಹೇಳುತ್ತಾ ಹೊರಟರೆ ಪದಗಳೇ ಸಾಕಾಗುವುದಿಲ್ಲಾ, ಅಷ್ಟರ ಮಟ್ಟಿಗೆ ಅವರು ಗಡಿ ಜಿಲ್ಲೆಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿದ್ದಾರೆ.

ಹೀಗಾಗಿ ಜಿಲ್ಲೆಯಲ್ಲಿ “ಖ್ಯಾತಿ ಕವಿ” ಎಂದೇ ಸುಪ್ರಸಿದ್ದಿ ಪಡೆದುಕೊಂಡಿರುವ ದೇಶಪಾಂಡೆ ಅವರು ಕನ್ನಡಕ್ಕಾಗಿ ಯಾವಾಗಲು ಟೊಂಕ ಕಟ್ಟಿ ನಿಲ್ಲುತ್ತಾರೆ. ಇವರ ಈ ಬಹುಮುಖ ಪ್ರತಿಭೆ ಬಗ್ಗೆ ಮೊತ್ತೋರ್ವ ಹಿರಿಯ ಸಾಹಿತಿಗಳು ಹಾಡಿ ಹೊಗಳಿದ್ದಾರೆ.

TAGGED:bidarkannadaMG DeshpandePublic HeroPublic TVSenior poetಎಂ.ಜಿ ದೇಶಪಾಂಡೆಕನ್ನಡಪಬ್ಲಿಕ್ ಟಿವಿಪಬ್ಲಿಕ್ ಹೀರೋಬೀದರ್ಹಿರಿಯ ಸಾಹಿತಿ
Share This Article
Facebook Whatsapp Whatsapp Telegram

Cinema news

MEJESTIC 2 1
ಮೆಜೆಸ್ಟಿಕ್- 2 ಟ್ರೈಲರ್ ರಿಲೀಸ್: ಮಹಾ ಕಲಾವಿದರ ಸಂಗಮ
Cinema Latest Sandalwood
Rakshas kannada Web Series
ತರುಣ್ ಸುಧೀರ್ ನಿರ್ಮಾಣದಲ್ಲಿ ರಾಕ್ಷಸ ವೆಬ್ ಸಿರೀಸ್
Cinema Latest Sandalwood Top Stories
Veera Kambal Trailer Released The Glory of Tulunad Revealed Adithya SV Rajendra Singh Babu Kadri Manikanth
ವೀರ ಕಂಬಳ ಟ್ರೈಲರ್ ಬಿಡುಗಡೆ : ತುಳುನಾಡಿನ ವೈಭವ ಅನಾವರಣ
Cinema Latest Sandalwood
Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post

You Might Also Like

Al Mirath Real Estates Dubai 2
Latest

Al Mirath Real Estates Dubai – ವಾರ್ಷಿಕೋತ್ಸವ ಆಚರಣೆ

Public TV
By Public TV
12 minutes ago
CRIME
Crime

ತಿಂಡಿ ಆಸೆ ತೋರಿಸಿ 3 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ – ಕಾಮುಕ ಅರೆಸ್ಟ್

Public TV
By Public TV
37 minutes ago
CMS HASSAN
Crime

ಎಟಿಎಂಗೆ ಹಾಕಬೇಕಿದ್ದ ಕೋಟ್ಯಂತರ ರೂ. ಹಣ ಗುಳುಂ – ಸಿಬ್ಬಂದಿ ವಿರುದ್ಧ ಶಂಕೆ

Public TV
By Public TV
43 minutes ago
Zimbabwe Team
Cricket

ಜಿಂಬಾಬ್ವೆಯಿಂದ ಲಂಕಾದಹನ – ಕೊನೆಯ ಓವರ್‌ನಲ್ಲಿ ರೋಚಕ ಜಯ

Public TV
By Public TV
57 minutes ago
BY Vijayendra
Bengaluru City

ಕರ್ನಾಟಕದಲ್ಲಿ ಬಿಜೆಪಿ ಗತವೈಭವ ಮರುಕಳಿಸಲು ಹಗಲು-ರಾತ್ರಿ ಶ್ರಮ: ಸರ್ಕಾರದ ವಿರುದ್ಧ ಹೋರಾಟ ನಿರಂತರ – ಬಿವೈವಿ

Public TV
By Public TV
58 minutes ago
NAMMA METRO 1
Bengaluru City

ನಮ್ಮ ಮೆಟ್ರೋದಿಂದ ಮದ್ಯಪ್ರಿಯರಿಗೆ ಗುಡ್‌ನ್ಯೂಸ್?

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?